Tuesday 31 July, 2012


  ಹವ್ಯಕರ ಕತೆಗಳು - ಚಿತ್ರಾಟೆ ಕಾಳಣ್ಣಾ
   

          ವಂದೂರ್ನಲ್ಲಿ ವಂದ್ ಗವ್ಡಾಯಿದ್ದಿದ್ದಾ. ಅಂವ್ನ ಹತ್ರಾ ವಂದ್ ಯತ್ನ ಜೋಡಿದ್ದಿತ್ತು. ಯಾರೂ ನೇಗ್ಲ ಹಿಡ್ದೇ
ಗದ್ದೆಯಾ ಆ ಯೆತ್ತು ಗೆದ್ದೆ ಹೂಡ್ತಿತ್ತು. ಅಂವಂಗೆ ಚಲೋ ಆಗ್ತಿತ್ತು. ವಂದಿನಾ ಅಂವಾ ಯೆತ್ ತೆಕ್ಕಂಡಿ ಗದ್ದೆಗೋದಾ. ಹೂಡೂಲ್ ಬಿಟ್ಟಿಕ್ಕಿ ಮನೆಗ್ ಬಂದಾ. ಅದೇ ಹೊತ್ತಿಗೆ ಅರ್ಸಾ ಪ್ರದಾನಿ ಅಲ್ಲಿಗೆ ತಿರ್ಗಾಡತ್ನ ಬಂದಿದ್ದೊ. ಅವ್ಕೊಕೆ ಆಶ್ಯಾತು. ಸುಮ್ಮಂಗೆ ಯೆತ್ ಹೊಡ್ಕೊಂಡ್ ನೆಡದ್ದೊ.ಗವ್ಡಾ ಸುಮಾರ್ ಹೊತ್ನಮೇಲೆ ಬಂದ್ ನೋಡ್ತಾ.ಯೆತ್ತೆ ಇಲೆ. ಅದ್ಯಾರೋವಾ ಅಂದೊ.``ಯೀಗ್ ಮಾತ್ರಾ ಅರ್ಸಾ ಹೊಡ್ಕಂಡ್ ಹೋಯ್ದಾ''. ಹೇಳಿ. ಅಂವಂಗೆ ಬಾಳ್ ಬೆಜಾರಾತು. ರಾತ್ರಿಡಿ ವರ್ಕ್ವೇ ಬಂದಿಲ್ಲೆ. ಅವಂಗೆ ಕಯ್ ಮುರ್ದಾಂಗಾತು. 

ಚಿತ್ರಾಟೆ ಕಾಳಣ್ಣಾ ವಂದ್ ಮುಕೆಲಿ ಹೊಕ್ಕಂಡಿ ``ಗವ್ಡಾ ಗವ್ಡಾ ಯೆಂತಾ ಆತು? ''ಕೇಳ್ತು ಅಂವಾ ತಾ ಗೆದ್ದೆಲಿ ತನ್ ಯೆತ್ ಬಿಟ್ಟಿಕ್ಕಿ ಬಂದಿದ್ದೆ. ಅರ್ಸಾ ಪ್ರದಾನಿ ಬಂದಿದ್ವಡಾ. ಅವ್ಕೊ ಯೆತ್ನ ಜೋಡಿ ಹೊಡ್ಕಂಡ ನೆಡದ್ವಡಾ. ಹೇಳ್ತಾ. ಆಗಾ ಚಿತ್ರಾಟೆ ಕಾಳಣ್ಣಾ ಕೇಳ್ತು. ``ಹೀಂಗಾತಾ? ನಾ ತತ್ತೆ ನಿನ್ ಎತ್ನಾ'' ಅಂತು. ಆಂ! ``ನಿನ್ನತ್ರಂತೂ ಆಗ್ತು !''ಅಂದಾ ಗೌಡ. 

``ನೋಡು ನಾಡ್ದೀಗ್ ಬೆಳಗಪ್ಪಲ್ಲಿವರೆಗೆ ನಿನ್ ಯೆತ್ತು ಕೊಟ್ಗೆಲಿದ್ದು ಹೇಳ್ ತೆಳ್ಕೊ ಅಂತು. ಚಿತ್ರಾಟೆ ಕಾಳಣ್ಣಾ. ಮರ್ದಿನಾ ರಾತ್ರೆ ಚಿತ್ರಾಟೆ ಕಾಳಣ್ಣಾ ಅರ್ಸ್ನ ಮನೆಗೆ ಹೊರ್ಟ್ತು. ದಾರಿ ಮೆಲ್ ಕೆಪ್ಯಣ್ಣಾ ಶಿಕ್ತು. 

  ``ಚಿತ್ರಾಟೆ ಕಾಳಣ್ಣಾ ಚಿತ್ರಾಟೆ ಕಾಳಣ್ಣಾ ಯೆಲ್ಲೀಗ್ ಹೋಗ್ತೇ'' ಕೇಳ್ತು. ``ಅರ್ಸ್ನ ಮನೆಗೆ ಹೋಗ್ತೇ ಗವ್ಡ್ನ ಯೆತ್ ತತ್ತೇ ''ಅಂತು. 

  `` ನಾನೂ ಬರ್ಲೋ ''ಕೇಳ್ತು ಕೆಪ್ಯಣ್ಣಾ `ಹೂ ನೀನೂ ಬಾ' ಅಂತು. ಚಿತ್ರಾಟೆ ಕಾಳಣ್ಣಾ .ಚಿತ್ರಾಟೆ ಕಾಳಣ್ಣಾ ಕೆಪ್ಯಣ್ಣಾ ಮುಂದೋಗ್ತೊ.

ಹಿಂಗೇ ಮುಂದೋಗ್ತಿರಾಕಾರೆ ದೊಣ್ಯಣ್ಣಾ ಶಿಕ್ತು.``ಚಿತ್ರಾಟೆ ಕಾಳಣ್ಣಾ, ಕೆಪ್ಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ'' ಕೇಳ್ತು. ದೊಣ್ಯಣ್ಣಾ
`` ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು ಚಿತ್ರಾಟೆ ಕಾಳಣ್ಣಾ.`` ನಾನೂ ಬರ್ಲೋ'' ಕೇಳ್ತು ದೊಣ್ಣಣ್ಣಾ. ``ಹೂ ನೀನೂ ಬಾ'' ಅಂತು. ಚಿತ್ರಾಟೆ ಕಾಳಣ್ಣಾ . 
ಚಿತ್ರಾಟೆ, ಕಾಳಣ್ಣಾ, ಕೆಪ್ಯಣ್ಣಾ ,ದೊಣ್ಯಣ್ಣಾ ಮುಂದೋಗ್ತೊ. 

ಮುಂದೋಗ್ನಿ ರಾಕಾರೆ ಹಾವಣ್ಣಾ ಶಿಕ್ತು. ಚಿತ್ರಾಟೆ ಕಾಳಣ್ಣಾ, ಕೆಪ್ಯಣ್ಣಾ ದೊಣ್ಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ ಕೇಳ್ತು. ಹಾವಣ್ಣಾ 

  ``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು. ಚಿತ್ರಾಟೆ ಕಾಳಣ್ಣಾ ನಾನೂ ಬರ್ಲೋ ಕೇಳ್ತು ಹಾವಣ್ಣಾ
``ಹೂ ನೀನೂ ಬಾ ''ಅಂತು ಚಿತ್ರಾಟೆ ಕಾಳಣ್ಣಾ.  ಚಿತ್ರಾಟೆ ಕಾಳಣ್ಣಾ, ಕೆಪ್ಯಣಾ, ದೊಣ್ಯಣ್ಣಾ, ಹಾವ ಣ್ಣಾ 
ಮುಂದೋಗ್ತೊ. 

   ಹಿಂಗೇ ಮುಂದೋಗ್ತಿರಾಕಾರೆ ಹಾಂತೆಯಣ್ಣಾ ಶಿಕ್ತು. ಚಿತ್ರಾಟೆ ಕಾಳಣ್ಣಾ, ``ಕೆಪ್ಯಣ್ಣಾ ದೊಣ್ಯಣ್ಣಾ ಹಾವಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ ''ಕೇಳ್ತು. ಹಾಂತೆಯಣ್ಣಾ 

   ``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು. ಚಿತ್ರಾಟೆ ಕಾಳಣ್ಣಾ ನಾನೂ ಬರ್ಲೋ ಕೇಳ್ತು ಹಾಂತೆಯಣ್ಣಾ 

`  `ಹೂ ನೀನೂ ಬಾ'' ಅಂತು. ಚಿತ್ರಾಟೆ ಕಾಳಣ್ಣಾ
   ಚಿತ್ರಾಟೆ ಕಾಳಣ್ಣಾ ,ಕೆಪ್ಯಣ್ಣಾ ,ದೊಣ್ಯಣ್ಣಾ, ಹಾವ ಣ್ಣಾ ,  ಹಾಂತೆಯಣ್ಣಾ ಯೆಲ್ಲಾ ಮುಂದೋಗ್ತೊ.

      ಮುಂದೋಗ್ತಿ ರಾಕಾರೆ ಕಟ್ಟೆರ್ನ ಸಾರಿ ಶಿಕ್ತು. ``ಚಿತ್ರಾಟೆ ಕಾಳಣ್ಣಾ ಕೆಪ್ಯಣ್ಣಾ ದೊಣ್ಯಣ್ಣಾ ಹಾಂತೆಯಣ್ಣಾ ಯೆಲ್ಲಾ ಯೆಲ್ಲೀಗ್ ಹೋಗ್ತ್ರೇ? ''ಕೇಳ್ತು ಕಟ್ಟೆರ್ನಸಾರಿ .
``ಅರ್ಸ್ನ ಮನೆಗೆ ಹೋಗ್ತೊ ಗವ್ಡ್ನ ಯೆತ್ ತತ್ತೊ'' ಅಂತು ಚಿತ್ರಾಟೆ ಕಾಳಣ್ಣ .

``ತಂಗೋವು ಬತ್ತೊ'' ಅಂತು ಕಟ್ಟೆರ್ನ ಸಾರಿ. ``ಹೂ ಬನ್ನಿ ''ಅಂತು ಚಿತ್ರಾಟೆ ಕಾಳಣ್ಣಾ. ಹೀಂಗೆಯಾ ಚಿತ್ರಾಟೆ ಕಾಳಣ್ಣಾ ,ಕೆಪ್ಯಣ್ಣಾ ,ದೊಣ್ಯಣ್ಣಾ ,ಹಾಂತೆಯಣ್ಣಾ ಕಟ್ಟೆರ್ನ ಸಾರಿ ಯೆಲ್ಲಾ ವಟ್ಗೂಡ್ಕಂಡಿ ಅರ್ಸ್ನ ಮನೆಗ್ ಹೋದೊ. 

ದೊಣ್ಯಣ್ಣಾ ಕದ್ನ ಮುಕೆಲಿ? ಹೊಕ್ಕಣ್ತು. ಕೆಪ್ಯಣ್ಣಾ ವಲೆ ಬೂದಿಲಿ ಹೊಕ್ಕಣ್ತು. ಹಾಂತೆ ದೀಪ್ದ ಗುಡ್ನದ್ ಕೆಳ್ಗೆ ಕೂತ್ಗಣ್ತು. ಕಟ್ಟೆರ್ನ ಸಾರಿ ತೆಂಗ್ನ ಮರದ್ ಕೆಳ್ಗೆ ಇದ್ಗಣ್ತು. ಚಿತ್ರಾಟೆ ಕಾಳಣ್ಣ ಅವ್ಕೊ ಗೆಲ್ಲಾವಾ ಮೊದ್ಲೇ ಯೆಂತೆಂತಾ ಮಾಡೊ ಯೆಲ್ಲಾವಾ ಹೇಳ್ಕೊಟ್ಟಿಕ್ಕಿತ್ತು. 

ಅರ್ಸ್ನ ಹೆಣ್ತಿ ಕದಾ ಹಾಕೂಲೆ ಹೇಳಿ ಬಂತು. ಬಂದದ್ದೆ ತಡಾ ದೊಣ್ಯಣ್ಣಾ ಬಡಾ ಬಡಾ ಬಡಾ ಬಡಾ ಬಡತ್ತು. ಅದು ಯಿಲ್ಲಿ ಯಾರೋ ಬಂದಿಕಿದೊ ಹೇಳಿ ದೀಪಾ ದೊಡ್ಡಾ ಮಾಡೂಲೋತು. ಹಾಂತೆ ಪಟಕ್ನೆ ದೀಪಾ ನಂದ್ಸಾಕ್ತು. ಹಾಂಗೆಯಾ ಅರ್ಸಾ ಮಂಚ್ದಿಂದಾ ಕೆಳಗಿಳ್ಯೊ ನೋಡ್ದಾ. 

ಕಾಲ್ ಕೆಳ್ಗೆ ಯಿಟ್ಟಿದ್ದೇ ತಡಾ. ಹಾವಣ್ಣಾ ಕಾಲ್ಸುತ್ತಾಯ್ಕಂಬುಡ್ತು. ಅಂವಾ ಅಯ್ಯಯ್ಯೋ ಹೇಳಿ ಕೂಗ್ದಾ. ಅಂವ್ನ ಹೆಣ್ತಿ ದೀಪಾ ಹಚ್ದಾಂಗೆ ಹಾತೆ ನಂದ್ಸ್ ನಂದ್ಸ್ ಹಾಕ್ತು. ಅಂತೂವಾ ಹೆಂಗೋ ಮಾಡ್ ಅಂವಾ ಕಾಲಿಂದಾ ಹಾವ್ ಬಿಡಸ್ಕಂಡಾ. ಮನಿ ಕಂಡಾ. 

ಮದ್ರಾತ್ರ್ ಗೆಟ್ ಅಂವಂಗೆ ಉಚ್ ಹೊಯ್ಯೂಲ್ ಬಂತು. ಯೆದ್ದಿ ಹೆರಂಗೋದಾ. ಕಟ್ಟೆರ್ನಸಾರಿಯೆಲ್ಲಾ ವಟ್ಗೂಡ್ಕಂಡಿ ಕಾಲ್ ಕಚ್ ಕಚ್ ತೆಗೆದ್ಬುಡ್ತು. ಹಾಂಗೆ ಕುಡಿಕತ್ತೇ ಅರ್ಸ ವಳಂಗೆ ವೋಡ್ತ್ನೆ ಬಂದಾ. ಬಾಗ್ಲಲ್ಲಿ ದೊಣ್ಯಣ್ಣಾ ಅವ್ನ ತಲ್ ತಲೆಮೆಲ್ ಕೊಡ್ತು. ಅಂತೂ ಮಂಚಕ್ಕೋದಾ. 

ಅಸ್ಟೊತ್ತಿಗೆ ಬೆಳಗುಂಜಾಮಾಗತ್ನಾ ಬಂದಿತ್ತು. ಅರ್ಸ್ನ ಹೆಣ್ತಿ ಬೆಂಕಿ ವಟ್ಟೂಲೆ ಹೇಳಿ ವಲೆ ಬಳಿಗೋತು. ಬೂದಿ ಮೊಗುಲೆ ಹೇಳಿ; ಮೊಕಾ ಕೆಳ್ಗ್ ಮಾಡ್ಕಂಡಿ ವಲೆಗ್ ಕಯ್ ಹಾಕ್ತು. ಕೆಪ್ಯಣ್ಣಾ ತಡಾ ಮಾಡಿದ್ದೇ, ಯಿಲ್ಲೆ ಬುಸಕ್ ಬುಸಕ್ನೆ ಬೂದಿ ಮೊಕಕ್ಕೆ ತೋಕ್ತು. ಕಣ್ಣೀಗೆಲ್ಲಾ ಬೂದಿ ಮುಚ್ಚಿ ಕಣ್ ವಡೂಲೆ ಆಯ್ದಿಲ್ಲೆ. ಆಗಾ ರಾಜಾಯೆಂತಕ್ಕೆ ಹಿಂಗೆಲ್ಲಾ ಆಪ್ಲೆ ಹಣ್ಕೋತನೊ? ಹಿಂಗೆಲ್ಲಾ ಮಾಡ್ಡೋರು ಯಾರು? ಹೇಳಿ ಹಲಬುಲ್ ಹಣಕ್ ಬುಟ್ಟಾ. ಆಗಾ ಚಿತ್ರಾಟೆ ಕಾಳಣ್ಣಾ ಮುಕೆಲಿದ್ದದ್ದು ದೊಡ್ಡಕ್ಕೆ ಅರ್ಸಾ ಅರ್ಸಾ ಗವ್ಡ್ನ ಮನೆಯೆತ್ತು ಬೇಕೋ? ಈಗ ಸಾಕೋ ಹೇಳಿ ಕೇಳ್ತು. ಆಗಾ ಅರ್ಸು ಮಾರಾಯ್ರಾ ಯೆತ್ತೂ ಬೆಡಾ ಗಿತ್ತೂ ಬೆಡಾ ಜೀಂವಾ ವಂದ್ ಯಿರ್ಸ್ ಕಂಡಿ ಯೆತ್ನ ಸಂಗ್ತಿಗೆ ನಮ್ ಕೊಟ್ಗೆದ್ ಮತ್ ನಾಕ್ ಜೋಡಿ ಬೇಕಾದ್ರೂ ಕೊಡ್ತೆ. ತೆಕಂಡೋಗಿ. ಯಿನ್ ಮಾತ್ರ ಗವ್ಡ್ನ ಯೆತ್ನ ಸುದ್ದೀಗ್ ಬತ್ನಿ ಲ್ಯಾ ''ಅಂದಾ. ಕೊಟ್ಗೆಗ್ ಹೋಗಿ ತನ್ ಕೊಟ್ಗೆಲಿದ್ ನಾಲ್ಕ್ ಯೆತ್ನ ಜೋಡಿ ಗವ್ಡ್ನ್ ಮನೆ ಯೆತ್ತು ಯೆಲ್ಲಾ ಬಿಟ್ಟಾಕ್ದಾ. ಚಿತ್ರಾಟೆ ಕಾಳಣ್ಣಾ ತನ್ ಪಂಗ್ಡಾಯೆಲ್ಲಾ ಕಟ್ಗಂಡಿ ಯೆತ್ ಹೊಡ್ಕಂಡಿ ಗವ್ಡ್ನ್ ಮನೆ ಕೊಟ್ಗೆಗೋತು. ಕಟ್ಟಾಕ್ತು. ಬೆಳ್ಗಾದ್ಕೂಡ್ಲೆಯಾ ಗವ್ಡ್ನ್ ಹೆಣ್ತಿ. ``ಅತೊ ಯೆತ್ತೆಲ್ಲಾ ಬಂದಿಕಿದಕು ಹುಲ್ಲಾಕ್ರೋ'' ಅಂತು. ಗವ್ಡಾ ವೋಡೋಗ್ ನೋಡ್ತಾ. 

ಹವ್ದು ಸಂಗ್ತಿಗೆ ಚಲೋ ಚಲೋ ಮತ್ ನಾಲ್ಕು ಯತ್ನ ಜೋಡಿದ್ದು. ಅಂವಂಗೆ ಸಂತೋಶಾತು    ``ಯಾರಾಯಿಕ್ಕು ಯೀ ಕೆಲ್ಸಾ ಮಾಡ್ದೋರು?'' ಹೇಳೀ ಹೇಳ್ತ್ನೆಯಿರಾಕಾರೆ ಚಿತ್ರಾಟೆ ಕಾಳಣ್ನ ಪಂಗ್ಡಾ ಬಂತು. ಗವ್ಡ್ಂಗೆ ಚಿತ್ರಾಟೆ ಕಾಳಣ್ನ ಕೆಲ್ಸಾ ಇದು ಹೇಳಿ ತೆಳತ್ತು. ನಾಳೆಗ್ ನಮ್ಮನೆಗೆ ಊಟಕ್ ಬನ್ನಿ ಪಾಯ್ಸಾ ಮಾಡ್ ಬಡಸ್ತೆ ಹೇಳ್ದಾ. ಮರ್ದಿನಾ ಯೆಲ್ಲಾ ಊಟಕ್ ಬಂದೊ. ಪಾಯ್ಸಾ ಉಂಡ್ಕಂಡಿ ಸಂತೋಶ್ದಿಂದಾ ಮನೆಗೊದೊ. 


     
ಸಾಮಾಜಿಕ ಉಪ ಭಾಷೆ
    
   ಭಾಷೆ  ನಿಂತ ನೀರಲ್ಲ. ಅದು ಸದಾ ಪರಿವರ್ತನ ಶೀಲವಾದದ್ದು. ಪರಿವರ್ತನೆ ಒಮ್ಮೆಲೆ ಗೋಚರಿಸುವದಿಲ್ಲ. ಮನಸ್ಸಿಗೆ ವೇದ್ಯವಾಗುತ್ತದೆ. 
      
     ನಾನು ಸುಮಾರು ಐವತ್ತು ವರ್ಷಗಳಿಂದ ನನ್ನ ಮಾತೃಭಾಷೆಯ ಪರಿಸರವುಳ್ಳ ಪ್ರದೇಶದಿಂದ  ಸುಮಾರು ನೂರು ಕಿ. ಮೀ ಗಳಷ್ಟು ಅಂತರದಲ್ಲಿ ವಾಸವಾಗಿದ್ದೇನೆ.  ಅಲ್ಲಿಯ ನನ್ನ ಸಂಬಂಧಿಕರೊಂದಿಗೆ  ಭಾಷಾ ಸಂಪರ್ಕದಲ್ಲಿದ್ದೇನೆ.  ದೂರವಾಣಿಯಲ್ಲಿ ಮಾತಾಡುತ್ತೇನೆ.  ವರ್ಷದಲ್ಲಿ ಆರೆಂಟು ಬಾರಿಯಾದರೂ ಅಲ್ಲಿಗೆ ಹೋಗಿ ಬರುತ್ತೇನೆ.  ನನ್ನ ಇಲ್ಲಿಯ ಮನೆಯಲ್ಲಿ ನನ್ನ ಕುಟುಂಬದ ಸದಸ್ಯರೊಂದಿಗೆ ನನ್ನ ಮಾತೃ ಭಾಷೆಯಲ್ಲಿ ಮಾತಾಡುತ್ತೇನೆ. ನಾನು ಈಗ ಮಾತಾಡುವ ಭಾಷೆಯು ನಾನು ಈ ಊರಿಗೆ  ಬರುವ  ಸಂದರ್ಭದ  ಮಾತೃಭಾಷೆಯಲ್ಲದೆ ಬೇರೆಯಲ್ಲವೆಂದು ತಿಳಿದುಕೊಂಡಿದ್ದೆನು.  
    
    ಆದರೆ ಒಂದು ದಿನ ನನ್ನ ಮಾತೃ ಭಾಷೆಯನ್ನೇ ತಮ್ಮ ತಮ್ಮ  ಮಾತೃ ಭಾಷೆಯಾಗುಳ್ಳ ಮತ್ತು ಆ ಭಾಷೆಯನ್ನು ಸಾಮಾಜಿಕ ಭಾಷೆಯ್ನನ್ನಾಗಿ ಹೊಂದಿದ ತಮ್ಮ ಕೇರಿಗಳಲ್ಲಿ ವಾಸವಾಗಿರುವ ನನ್ನ ಗೆಳತಿಯರ ಗುಂಪೊಂದು ನನ್ನನ್ನು ಭೆಟ್ಟಿಯಾದಾಗ ಇದೇನೆ ಶಾಂತಕ್ಕಾ  ``ನಿನ್ ಮಾತ ಬೆರೆ ಆಗಿದ ಆ ಬದಿ ಬಟ್ರಂಗ್ ಮಾತಾಡ್ತಿ''  ಎಂದಾಗ ನಾನು ಮಾತಾಡುತ್ತಿರುವದು ನಾಡವರ ಭಾಷೆಯೇ ಅಗಿದ್ದರೂ, ನನಗರಿವಿಲ್ಲದೆ ನನ್ನ ಇಲ್ಲಿಯ ಪರಿಸರದ  ಭಾಷೆಯ ಪ್ರಭಾವವು ನನ್ನ[ತವರಿನ]  ಹಿಂದಿನ  ಊರಿನ   ನನ್ನ  ಪರಿಸರದ ಭಾಷೆಯ ಮೇಲೆ  ಉಂಟಾಗಿದೆಯೆಂದು  ನನಗೆ ಅರಿವಾಯಿತು. 

     ಈ ಬಗೆಯ ಭಾಷೆ  ಬದಲಾವಣೆಯ ಪ್ರಕ್ರಿಯೆ ಕೇವಲ ನನ್ನ ಈ ಒಂದು ಭಾಷೆಗೆ ಮಾತ್ರ ಸೀಮಿತ ವಾದದ್ದಲ್ಲ.  ಮೌಖಿಕವಾದ ಎಲ್ಲ ಬಗೆಯ ಭಾಷೆಗಳಲ್ಲಿ ಇದು ನಡೆಯುತ್ತದೆ.  ಲಿಪಿ ಬದ್ಧ ವಾದ ಆಧುನಿಕ ಭಾಷೆಗಳನ್ನೂ  ಇದು ಬಿಟ್ಟಿಲ್ಲ.  ಹವ್ಯಕ ಸಾಮಾಜಿಕ  ಭಾಷೆಯಲ್ಲಿಯೂ ಇದು ನಡೆಯುತ್ತಿದೆ.  
        

   ಹೊನ್ನಾವರ ತಾಲೂಕಿನ ಪಂಚಗ್ರಾಮದ ಭಾಷೆ ಅಥವಾ ಕುಮಟಾದ ಹಳ್ಳಿಗರ ಭಾಷೆಗಿಂತ ಉಚ್ಚಾರದಲ್ಲಿ ಶಬ್ದ ಬಳಕೆಯಲ್ಲಿ ವ್ಯತ್ಯಾಸವನ್ನು ಹೊಂದಿದೆ. ಹಳ್ಳಿಗರು ಇದನ್ನು ಆಗಾಗ ಗುರುತ್ರಿಸುತ್ತಾರೆ. ಅವರು ಹೇಳುವಂತೆ ಪ್ರತಿ ಮೂರು ಮೈಲು ಅಂತರಗಳಲ್ಲಿ ಈ ವ್ಯತ್ಯಾಸಗಳು ಕಂಡು ಬರುತ್ತದೆ. ಆದರೆ  ಅನೇಕ ಭಾಷೆಗಳ ಗತಿಯನ್ನು ಗಮನಿಸಿ ಹೇಳುವುದಾದರೆ ಅವು ಪ್ರತಿ ವರ್ಷ ಹೊಸ ಶಬ್ದಗಳನ್ನು ಸ್ವೀಕರಿಸುತ್ತಾ ಹಳೆಯ ಶಬ್ದಗಳನ್ನು ಬಿಡುತ್ತಾ ಸಾಗುವದು ಕಂಡುಬರುತ್ತದೆ. ಈ ದಿಸೆಯಲ್ಲಿ ಸಾಮಾಜಿಕ ಉಪ ಭಾಷೆಗಳ ದೋಣಿ  ವೇಗವಾಗಿ ಸಾಗುತ್ತದೆ. ಎತ್ತ ಸಾಗಿದೆ ಕಾಲವೇ ನಿರ್ಣಯಿಸಬೇಕು. ಹಳೆಯ ಭಾಷಾ ನೆನಪನ್ನು ಮೆಲಕಾಡಿಸುವವರಿಗೆ ಇಲ್ಲಿ ಹೊನ್ನಾವರ ಪಂಚ ಗ್ರಾಮದ  ಹವ್ಯಕ ಸಾಮಾಜಿಕ ಉಪಭಾಷೆಯ ಚೌಕಟ್ಟಿನಲ್ಲಿರುವ  ಮತ್ತು ಹಿರಿಯರು ಮಕ್ಕಳಿಗಾಗಿ ಹೇಳಿರುವ ಹಾಗೂ ಹಿರಿಯರಿಂದ ಕೇಳಿ ಕಲಿತು ಮಕ್ಕಳು ಹೇಳಿದ ಕೆಲವು ಕತೆಗಳನ್ನು ಬ್ಲಾಗಿಸುತ್ತಿದ್ದೇನೆ. ಈ ಹವ್ಯಕ ಉಪಭಾಷಾ ಜನಪದ ಕತೆಗಳನ್ನು ಹವ್ಯಕರ ಕತೆಗಳು ಎಂಬ ಮಾಲಿಕೆಯಲ್ಲಿ ನೀವು  ಕಾಣಬಹುದು.

Saturday 28 July, 2012

ನಮ್ಮ ಗಿಡ ಮರ ಬಳ್ಳಿಗಳು- ಕರಂಬಲ


ಕರಂಬಲ ಹಣ್ಣು - Averrhoa carambola,Linn
  
           ಕರಂಬಲ ಹಣ್ಣಿನ ಮರವು ಬಿಂಬಲ ಕಾಯಿಯ ಮರದಂತೆ ಚಿಕ್ಕ ಆಕಾರವುಳ್ಳದ್ದು. ಎಲೆಗಳು ಮೆತ್ತಗೆ ಗರಿ ಮಾದರಿಯವು .ಗುಲಾಬಿ ಬಣ್ಣದ ಹೂಗಳು ಗಂಟೆಯಾಕಾರದವು. ಐದು ಎಸಳಿನವು. ಹೂ ಕಾಯಿಗಳು ಗೊಂಚಲಾಗಿರುತ್ತವೆ. ಇದರ ಫಲವು ಎದ್ದು ಕಾಣುವ ಐದರಿಂದ ಆರೇಳು ಏಣುಗಳನ್ನು ಅಂದರೆ ಧಾರೆಗಳನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಧಾರೆಹುಳಿ ಎನ್ನುವದುಂಟು. ವಿದೇಶದಿಂದ ಬಂದ ಕರಂಬೋಲಾ ಎಂಬ ಹೆಸರು ಕನ್ನಡ ಭಾಷೆಯಲ್ಲಿ ಕರಬಲ, ಕರಂಬಲ, ಕರಿಮಾದಲ ಇತ್ಯಾದಿ ಅಚ್ಚ ಗನ್ನಡ ಹೆಸರಾಗಿ ಮಾರ್ಪಟ್ಟಿದೆ. ಕಾಯಿ ಅಥವಾ ಹಣ್ಣುಗಳನ್ನು ಅಡ್ಡ.ಕತ್ತರಿಸಿದಾಗ ತುಂಡುಗಳು ನಕ್ಷತ್ರದಂತೆ ಕಾಣುವ ಕಾರಣ ಈ ಹಣ್ಣುಗಳನ್ನು ಇಂಗ್ಲಿಷನಲ್ಲಿ ಸ್ಟಾರ ಪ್ರುಟ್ ಎನ್ನುತ್ತಾರೆ.  

        ಈ ಹಿಂದಿನ ತಲೆಮಾರಿನ ಹಿರಿಯರು ಮಕ್ಕಳಿಗೆ ನೆಗಡಿಯಾದಾಗ ಮೊದಲು ಕರಂಬಲ ಹಣ್ಣುಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಊರಿನಲ್ಲಿ ವಿರಳವಾಗಿರುವ ಈ ಮರಗಳನ್ನು ಎಲ್ಲಿಯಾದರೂ ಕಂಡರೆ ಗುರುತಿಸಿಕೊಂಡಿರುತ್ತಿದ್ದರು. ತಮ್ಮ ಮನೆಯಲ್ಲಿಯೂ ಈ ಮರ ಇರಬೇಕೆಂದು ಬಯಸುತ್ತಿದ್ದರು. ಅದರ ಹಣ್ಣುಗಳನ್ನು ತಂದು ಬಿಸಿ ಬೂದಿಯಲ್ಲಿ ಹುಗಿದು ತುಸು ಬೇಯಿಸಿ.ಬಟ್ಟೆಯಲ್ಲಿಟ್ಟು ಹಿಂಡಿ ರಸ ತೆಗೆದು ರೋಗಿ ಮಕ್ಕಳಿಗೆ ಜೇನಿನೊಂದಿಗೆ ಆಗಾಗ ಕುಡಿಸುತ್ತಿದ್ದರು. ಈ ಕಾಲ ಸರಿದು ಹೋಗಿದೆ. ಈಗ ಬಾಟ್ಲಿ ಹಿಡಿದು ಮಕ್ಕಳ ರೋಗ ತಜ್ಞರಲ್ಲಿಗೆ ಓಡುವದು ಪದ್ಧತಿಯಾಗಿದೆ. ಈ ಹಣ್ಣಿನಲ್ಲಿ ಎ,ಸಿ ಜೀವಸತ್ವಗಳಿವೆ. ಕಬ್ಬಿಣ, ಕ್ಯಾಲ್ಸಿಯಂ ರಂಜಕ ಪ್ರೋಟೀನ್ ಮತ್ತು ಶರ್ಕರ ಪಿಷ್ಟಗಳಿವೆ. ಹಣ್ಣು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆ ಮತ್ತು ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

      ಕರಾವಳಿಯ ಆಹಾರದಲ್ಲಿ ಇದರ ಬಳಕೆ ಬಿಂಬಲ ಕಾಯಿ ಬಳಕೆಯಷ್ಟು ಹೆಚ್ಚಿನ ಪ್ರಮಾಣದಲ್ಲಿಲ್ಲವಾದರೂ ಇದನ್ನು ಮಕ್ಕಳು ಹಸಿಯಾಗಿ ತಿನ್ನುತ್ತಾರೆ. ಹಿರಿಯರು ಇದನ್ನು ತುಸು ಪ್ರಮಾಣದಲ್ಲಿ ಅಡುಗೆಯಲ್ಲಿ ಬಳಸುತ್ತಾರೆ. ಉಪ್ಪಿನಕಾಯಿ ಗೊಜ್ಜು ತಂಬುಳಿ ಮಾಡಿ ಸೇವಿಸುತ್ತಾರೆ. ಧಾರೆಯ ಅಂಚುಗಳು ಚೆನ್ನಾಗಿ ಬೇಯುವದಿಲ್ಲವಾದ್ದರಿಂದ ಅದನ್ನು ತೆಗೆದುಹಾಕಿ ಕೊಚ್ಚಿ ಬೇಯಿಸಿ ಸಿಹಿ ಸೇರಿಸಿ ಕುದಿಸಿ ಬಾಟ್ಲಿಯಲ್ಲಿ ಕಾದಿಟ್ಟುಕೊಂಡರೆ ಬೇಸಿಗೆ ಕಾಲದಲ್ಲಿ ಮತ್ತು ಜ್ವರದಿಂದ ಬಳಲುತ್ತಿದ್ದವರಿಗೆ ಶರಬತ್ ತಯಾರಿಸಿ ಕೊಡಬಹುದು. ಬಾಯಾರಿಕೆಯನ್ನು ನೀಗಿ ದೇಹಕ್ಕೆ ಇದು ತಂಪು ನೀಡುತ್ತದೆ. ಇದರ ಮಾಗಿದ ಹಣ್ಣು ಮತ್ತು ಹಣ್ಣಿನ ರಸ ಸೇವನೆ ರಕ್ತಮೂಲ ವ್ಯಾಧಿಗೆ ಉತ್ತಮ ಮದ್ದು.ರಸ ಜ್ವರ ನಿವಾರಣೆ ಮಾಡುತ್ತದೆ. ಹಣ್ಣುಗಳನ್ನು ನಕ್ಷತದಾಕಾರದಲ್ಲಿ ಕತ್ತರಿಸಿ ನಾಲ್ಕಾರು ಬಿಸಿಲಿನಲ್ಲಿ ಒಣಗಿಸಿ ಉಪ್ಪಿನ ಪುಡಿ ಚಿಮುಕಿಸಿಟ್ಟುಕೊಂಡರೆ ಅಡುಗೆಯಲ್ಲಿ ಬಳಸಬಹುದು. ಸಾಮಾನ್ಯ ಜ್ವರವಿರುವಾಗ ಕುಡಿಯುವ ನೀರಿನಲ್ಲಿ ನೆನೆಯಿಸಿ ಸಿಹಿ ಸೇರಿಸಿ ಪಾನಕ ಮಾಡಿ ಕುಡಿಯಬಹುದು.   


ಇದರ ಮೂಲ ನೆಲೆ ಬ್ರೆಜಿಲ್ ದೇಶವೆಂದೂ ಪೋರ್ಚುಗೀಸರ ಮೂಲಕ ಇದು ಭಾರತವನ್ನು ಪ್ರವೇಶಿಸಿತೆಂದು ತಿಳಿಯಲಾಗುತ್ತದೆ.ದೇಹದ ಗಾಯಗಳಿಂದಾಗುವ ರಕ್ತ ಸ್ರಾವವನ್ನು ನಿಲ್ಲಿಸಲು ಇದು ಉಪಯೋಗವಿದೆ. ಇದರ ಹುಳಿ ಹಣ್ಣುಗಳನ್ನು ಹಿತ್ತಾಳೆ ಪಾತ್ರೆಯನ್ನು ಬೆಳಗುವದಕ್ಕಾಗಿ ಹುಣಸೆ ಹಣ್ಣಿನಂತೆ ಬಳಸುತ್ತಾರೆ, ಹುಳಿ ಜಾತಿಯ ಈ ಹಣ್ಣುಗಳನ್ನು ಪಾತ್ರೆಗಳ ಮೇಲಿನ ಜಂಗು ಮತ್ತು ಇತರ ಕಲೆಗಳನ್ನು ತೆಗೆಯಲು ಬಳಸುತ್ತಾರೆ. ಇದು ಬಿಳಿಬಟ್ಟೆಯ ಮೇಲಿನಜಂಗು ಕಲೆಯನ್ನು ತೆಗೆಯುತ್ತದೆ. ಬ್ರಾಜಿಲ್ದಲ್ಲಿ ಕಿಡ್ನಿ ಮತ್ತು ಬ್ಲಾಡರ ತೊಂದರೆಗಳಿಗೂ ಸರಾಯಿ ಕುಡಿತದ ತೊಂದರೆಗಳಿಗೂ ಇದನ್ನು ಮದ್ದಾಗಿ ಬಳಸಲಾಗುತ್ತದೆ ಹವಾಯಿಯಲ್ಲಿ ಇದರ ಶರಬತ್ ಕುಡಿಯುತ್ತಾರೆ. ಚೀನಿಯರು ಇದನ್ನು ಮೀನದ ಅಡುಗೆಯಲ್ಲಿ ಬಳಸುತ್ತಾರೆ. ಹೀಗೆ ದೇಶ ವಿದೇಶಗಳ ಜಾನಪದರು ಇದರ ಆಹಾರ ಮೌಲ್ಯ ಮತ್ತು ಔಷಧ ಮೌಲ್ಯವನ್ನು ಅರಿತು ಇದನ್ನು ಬಳಸುತ್ತಿದ್ದಾರೆ. 
    
     ಅಳಿವಿನ ಅಂಚಿನಲ್ಲಿರುವ ಈ ಗಿಡವನ್ನು ನಮ್ಮ ನಮ್ಮ ಮನೆಯ ಮುಂದೆ ನೆಟ್ಟು ಮನೆಯಂಗಳಕ್ಕೆ ಶೋಭೆಯನ್ನು ತಂದುಕೊಳ್ಳುವದಲ್ಲದೆ ನಮ್ಮ ನಮ್ಮ ಆರೊಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದರ ಪ್ರಯೋಜನ ಪಡೆಯ ಬಹುದಲ್ಲವೇ? ಇದರ ಗಿಡ ತಯಾರಿಸಿಕೊಳ್ಳುವದು ನಿಮಗೆ ಸುಲಭವಲ್ಲ. ಆದ್ದರಿಂದ ನಿಮ್ಮ ಊರಿನ ಅರಣ್ಯ ಇಲಾಖೆಯವರನ್ನು  ನಿಮ್ಮ ಶಿಕ್ಷಕರೊಂದಿಗೆ ಭೆಟ್ಟಿಯಾಗಿರಿ. ಬೀಜದ ಮತ್ತು ಕಸಿ ಗಿಡಗಳನ್ನು ತಯಾರಿಸಿ ನಿಮ್ಮ ಮತ್ತು ಪರ ಊರಿನ ಆಸಕ್ತ ಶಾಲಾ ಮಕ್ಕಳಿಗೆ ಹಂಚಲು ವಿನಂತಿಸಿಕೊಳ್ಳಿರಿ.

ನಮ್ಮ ಗಿಡ ಮರಬಳ್ಳಿಗಳು-ಕಸ್ತೂರಿ ಅರಿಶಿನ


ಕಸ್ತೂರಿ ಅರಿಶಿನ   Curcumaa aromatica,salisb ,yello zedoary 

      ಇದನ್ನು  ಉತ್ತರ ಕನ್ನಡ  ಕರಾವಳಿಯ ಬಹು ಜನರು ನೋಡಿಲ್ಲ. ಇತ್ತೀಚೆಗೆ ಕೆಲವು ಸೌಂದರ್ಯ ಪ್ರಜ್ಞೆಯುಳ್ಳ  ಹುಡುಗಿಯರು ಪತ್ರಿಕೆಗಳಲ್ಲಿ ಇದರ ಹೆಸರನ್ನು ಓದಿರಬಹುದು. ಕೇರಳಿಗರು ಇದನ್ನು ಕಸ್ತೂರಿ ಮಂಜಿಲ್ ಎನ್ನುತ್ತಾರೆ. ಸಂಸ್ಕೃತದಲ್ಲಿ ಇದಕ್ಕೆ ವನ ಹರಿದ್ರಾ ಎಂಬ ಹೆಸರಿದೆ.
      
  ಇದು ಅರಿಶಿನದ ಗಿಡದ ಹೋಲಿಕೆಯ್ಳ್ದಳ್ಳದ್ದು . ಅರಿಶಿನದ ಗಿಡಕ್ಕಿಂತ ಹೆಚ್ಚು ಬಲಶಾಲಿ ಎತ್ತರವಾಗಿ ಬೆಳೆಯುತ್ತದೆ. ಇದರ ಗಡ್ಡೆಯ ಅರಿಶಿನದ ಗಡ್ಡೆಯನ್ನು ಹೆಚ್ಚು ಹೋಲುತ್ತದೆ. ಅರಿಶಿನದ ಬಣ್ಣ ಮತ್ತು ಅದರ ಪರಿಮಳ ಇದಕ್ಕಿದೆಯಾದರೂ ಇದಕ್ಕೆ ಅರಿಶಿನಕ್ಕಿಂತ ಬೇರೆಯಾದ ಘಾಡವಾದ ದಿವ್ಯ ಪರಿಮಳವಿರುತ್ತದೆ. ಅರಿಶಿನ ಗಿಡದ ಬಳಿಯಲ್ಲಿ ಇದು ಬೆಳೆದರೆ ಇದನ್ನು ಗಿಡವಾಗಿರುವಾಗಲೇ ಗುರುತಿಸಿ ಪ್ರತ್ಯೇಕಿಸಿಕೊಳ್ಳಬೇಕು. ಏಕೆಂದರೆ ಇದರ ಗಡ್ಡೆಯನ್ನು ನೋಡಿ ಸುಲಭದಲ್ಲಿ ಗುರುತಿಸಲಾಗುವದಿಲ್ಲ. ಆದರೆ ಗಿಡವು ಬಿಸಿಲಿನಲ್ಲಿ ಬೆಳೆದು ನಿಂತಾಗ ಪ್ರತಿ ಎಲೆಯ ನಡುವೆ ಎಲೆಯ ತುದಿಯಿಂದ ಬುಡದವರೆಗೆ ಉದ್ದವಾಗಿರುವ ಬೆರಳಿನಷ್ಟು ಅಗಲದ ಕುಂಕುಮ ಬಣ್ಣದ ಮೋಹಕವಾದ ಪಟ್ಟಿಯನ್ನು ಕಾಣಬಹುದು.

     ಇದು ಈ ಕರಾವಳಿಯಲ್ಲಿ   ಕಾಡು ಕಚೋರವೆಂದು ಗುರುತಿಸಲಾಗುವ  ಕಾಡರಶಿಣಕ್ಕಿಂತ  ಬೇರೆಯಾದ ನಡು ಪಟ್ಟಿಯನ್ನು ಹೊಂದಿರುತ್ತದೆ. ಅಂದರೆ ಕಾಡು  ಅರಿಶಿಣದ ನಡು ಪಟ್ಟಿಯು ಎಲೆಯ  ನಡುವಿನವರೆಗೆ ಮಾತ್ತ್ರ  ಇರುತ್ತದೆ.  ಆದರೆ ಕಸ್ತೂರಿ ಅರಿಶಿಣದ ನಡು ಪಟ್ಟಿಯು  ಎಲೆಯ ಬುಡ ಭಾಗವನ್ನು ಮುಟ್ಟುತ್ತದೆ..  

    ಕರಾವಳಿಯಲ್ಲಿ  ಕಸ್ತೂರಿ ಅರಶಿಣವನ್ನು ಮನೆ ಅರಶಿಣದಂತೆ  ಬಳಸುತ್ತಿರುವದು ಕಂಡು ಬಂದಿಲ್ಲ.  ಗ್ರಂಥಿಗೆ ಅಂಗಡಿಗಳಲ್ಲಿ ಇದರ ಪುಡಿ ಸಾಕಷ್ಟು ದೊರೆಯುತ್ತದೆ. ಮುಖಕಾಂತಿಗಾಗಿ ಅನಾವಶ್ಯಕ. ರೋಮ ಮತ್ತು ಮೊಡವೆ ನಿವಾರಣೆಗಾಗಿ ಅದರ ಪುಡಿಯನ್ನು ಲೇಪನವಾಗಿ ಬಳಸಲಾಗುತ್ತದೆ.  

    ಇದರ ಪುಡಿಯನ್ನು ಹಾಲಿನ ಕೆನೆಯಲ್ಲಿ ಅಥವಾ ಕಡಲೆ ಹಿಟ್ಟಿನ ಜೊತೆ ನೀರಿನಲ್ಲಿ ಕಲಸಿ ಮುಖಕ್ಕೆ ಲೇಪಿಸಿಕೊಳ್ಳಬೇಕೆಂದು ಸೌಂದರ್ಯವರ್ಧನೆ  ಕುರಿತು  ಟಿಪ್ಪಣಿಸುವವರು  ಬರೆಯುತ್ತಾರೆ..

     ಮುಖ ಮತ್ತು ಮೈ ಕಾಂತಿಯನ್ನು ಹೆಚ್ಚಿಸುವ  ಹರ್ಬಲ್ ಔಷಧಗಳಲ್ಲಿ ಇದರ ಬಳಕೆಯಿದೆ. ಚೀನಾದೇಶದಲ್ಲಿ ಇದನ್ನು ಕ್ಯಾನ್ಸರ್ ನಿರೋಧಕ ಔಷಧ ತಯಾರಿಕೆಯಲ್ಲಿ ಬಳಸುತ್ತಿರುವದಾಗಿ ತಿಳಿದು ಬರುತ್ತದೆ. ಮೇಘಾಲಯದ ಖಾಸಿ ಬುಡ ಕಟ್ಟಿನವರು ಹೊಟ್ಟೆಯ ಜಂತು ನಿವಾರಣೆಗೂ ಇದನ್ನು ಬಳಸುತ್ತಿರುವದಾಗಿ ತಿಳಿದು ಬರುತ್ತದೆ. ಮನೆಯಂಗಳದಲ್ಲಿ ಇದರ ಚಿಕ್ಕ ಗಡ್ಡೆಯನ್ನು ನೆಟ್ಟು ಇದರ ಸಂತತಿಯನ್ನು ಹೆಚ್ಚಿಸಿ   ನಿಮ್ಮ ಪರಿಚಿತರಿಗೆ  ನೀಡಿ  ಸಂತೋಷ ಪಡಬಹುದು.
                             
  

Thursday 26 July, 2012

ನಮ್ಮ ಗಿಡ ಮರ ಬಳ್ಳಿಗಳು- ಅಡಸೋಗೆ


        CqÉظÉÆUÉ 
           Adhathoda vasica,Nees.Acanthaceae


       ಇದು ಸದಾ ಹಸುರಾಗಿರುವ ಚಿಕ್ಕ ಗಿಡ. ಇದರ ಎಲೆಗಳು ಮಾವಿನೆಲೆಗಿಂತ ದೊಡ್ಡ ಮತ್ತು ಉದ್ದವಾಗಿರುತ್ತವೆ. ಈ ಗಿಡ ಬಿಳಿ ಹೂಗಳನ್ನು ಹೊಂದಿರುತ್ತದೆ. ಹೂಗಳ ಮೇಲೆ ತಿಳಿ ನೀಲಿ ರೇಖೆಯಿರುತ್ತದೆ. ಎಲೆಗಳು ಎದುರು ಬದುರಾ ಗಿರುತ್ತವೆ.  ಎಲೆಯ ತೊಟ್ಟು ಕಾಂಡಕ್ಕೆ ಕೂಡುವಲ್ಲಿ ಕಾಂಡವು ತುಸು ದಪ್ಪವಾಗಿರುತ್ತದೆ. ಭಾರತದ ಎಲ್ಲ ಕಡೆ ಇದು ಬೆಳೆಯುತ್ತದೆ. 

        ಇದಕ್ಕೆ ಕನ್ನಡದಲ್ಲಿ ಅಡ್ಸೊಗೆ, ಅಡ್ಡೆಸೊಗೆ, ಆಡುಸೊಗೆ, ಆಡು ಮುಟ್ಟದ ಗಿಡ, ಇತ್ಯಾದಿ ಹೆಸರುಗಳಿವೆ. ಇದರ ಟೊಂಗೆಗಳನ್ನು ಬೇಲಿಯುಲ್ಲಿ ಚುಚ್ಚಿದರೆ ಸಾಕು ಚೆನ್ನಾಗಿ ಬೆಳೆದು ನಮ್ಮ ತೋಟವನ್ನು ದನಕರುಗಳ ಕಾಟದಿಂದ ಕಾಯುತ್ತವೆ. ಅಡ್ಡೆ ಎಂದರೆ ಬೇಲಿ. ಸೊಗೆ ಎಂಬುದು ಒಂದು ಗಿಡದ ಅಂಗವನ್ನು ಸೂಚಿಸುತ್ತದೆ. ಬೇಲಿ ಮಾಡಿ  ತೋಟ ಮಾಡುವವರು ಮೂಲತಃ ಇದನ್ನು ಅಡ್ಡೆಗೆ ಸೋಗೆಯಾಗಿ ಬಳಸುತ್ತಿದ್ದ ಕಾಲದಲ್ಲಿ ಇದಕ್ಕೆ ಅಡ್ಸೊಗೆ, ಅಡ್ಡೆಸೊಗೆ ಎಂಬ ಹೆಸರುಗಳು ರೂಢಿಗೆ ಬಂದವು. ಇದಕ್ಕೆ ಸಂಸ್ಕೃತದಲ್ಲಿ ವಾಸ, ವಾಸಕಲ್ಪ ಎಂಬ ಹೆಸರುಗಳಿವೆ ಆಯುರ್ವೇದದಲ್ಲಿ ತೀರ ಪರಿಚಿತವಾದ ಗಿಡವಿದು. ಅಲ್ಲಿ ಇದನ್ನು ವೈದ್ಯರ ತಾಯಿಯೆ0ದು ಕರೆದು ಗೌರವಿಸಲಾಗುತ್ತದೆ ಇದರ ವೈಜ್ಞಾನಿಕ ಹೆಸರು ಅಡತೊಡ ಜೈಲಾನಿಕ ಎಂದಾಗಿರುತ್ತದೆ.

         ಅಡ್ಡೆಸೊಗೆ ಹಿತ್ತಲವನ್ನಷ್ಟೇ ಅಲ್ಲ, ನಮ್ಮ ಆರೋಗ್ಯವನ್ನು ಕಾಯುವ ಶಕ್ತಿಯನ್ನು ಹೊಂದಿದೆ. ಇದು ಕೆಮ್ಮು, ದಮ್ಮು, ನೆಗಡಿ ಮುಂತಾದ ರೋಗಗಳಿಗೆ ದಿವ್ಯವಾದ ಔಷಧವಾಗಿದೆ. ಇದನ್ನು ತಿಳಿದುಕೊಂಡು ಔಷಧ ತಯಾರಕರು ಇದರ ಎಲೆಯಿಂದ ಸಿರಿಪ್ ತಯಾರಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ನಮ್ಮ ಹಿತ್ತಲದಲ್ಲಿ ಸುಲಭವಾಗಿ ಬೆಳೆಯುವ ಇದರ ಉಪಯೋಗವನ್ನು ತಿಳಿಯುದೆ. ಪೇಟೆಯು ಮದ್ದಿಗೆ ಬೆಲೆ ತರುತ್ತಿದ್ದೇವೆ. ಇದನ್ನು ಮನೆ ಮದ್ದಿನಲ್ಲಿ ಬಳಸುವುದು ಕಷ್ಟವಲ್ಲ. 

          ಇದರ ಬೇರು ಎಲೆ ಹೂಗಳೆಲ್ಲವೂ ಔಷಧಿಯಾಗಿವೆ. ನಾಲ್ಕು ಎಲೆಯನ್ನು ಎರಡು ಕಪ್ ನೀರಿನಲ್ಲಿ ಕುದಿಸಿ ತುಸು ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಿ ಎರಡು ದಿನ ಮೂರು ಹೊತ್ತು ಆಹಾರ ಸೇವನೆಗೆ ಮೊದಲು ಸೇವಿಸಬೇಕು. ಇದರಿಂದ ಕೆಮ್ಮು ಕಫಗಳು ದೂರವಾಗುತ್ತವೆ. ಇದನ್ನು ಮಕ್ಕಳಿಗೆ ವಯಸ್ಸಿಗನುಗುಣವಾಗಿ ನೀಡಬೇಕು. 
 
         ಬೇರನ್ನು ತುಸು ಜೇನಿನಲ್ಲಿ ತೇದು ನೆಗಡಿ ಕಫದಿಂದ ಬಳಲುತ್ತಿರುವ ಮಕ್ಕಳಿಗೆ ದಿನಕ್ಕೆ ಮೂರುಬಾರಿ ನೆಕ್ಕಿಸಿದರೆ ಕಫ ಕರಗುತ್ತದೆ. ಮಕ್ಕಳಿಗೆ ಅಡ್ಡೆಸೊಗೆಯ ಅಂದರೆ ಅಡುಸೊಗೆಯ ಎಲೆಯು ಒಂದು ಚಮಚ ರಸವನ್ನು ತುಸು ಬಿಸಿ ಮಾಡಿ ಒಂದು ಚಮಚ ಜೇನು ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಸಬಹುದು.

         ನೆಗಡಿ, ಜ್ವರವಿದ್ದಾಗ, ಹತ್ತಿಪ್ಪತ್ತು ಅಡ್ಡಸೊಗೆಯ ಎಲೆಯನ್ನು ಕುದಿಸಿ ಸ್ನಾನದ ನೀರಿಗೆ ಕೂಡಿಸಿ ಆ ನೀರಿನಿಂದ ಮೈಗೆ ಸ್ನಾನ ಮಾಡಬೇಕು. ( ಗೃಹವೈದ್ಯಗ್ರಂಥ)

        ಅಡ್ಡೆಸೊಗೆಯ ಎಲೆಯ ರಸವು ಮಹಿಳೆಯರ ಮುಟ್ಟಿನ ತೊಂದರೆಯನ್ನು ನಿವಾರಿಸಬಲ್ಲದು ಮುಟ್ಟಿನ ಹೊಟ್ಟೆ ನೋವಿನಿಂದ ತೊಂದರೆ ಪಡುವ ಮಹಿಳೆಯರು ಅಡ್ಡೆಸೊಗೆ ಎಲೆಯ ಎರಡು ಚಮಚ ರಸವನ್ನು  ಜೇನು ತುಪ್ಪ ಬೆರೆಸಿ ಸುಮಾರು 10 ರಿಂದ 15 ದಿನ ಸೇವಿಸಬೇಕು. 

       ಅಡ್ಡೆಸೊಗೆಯು ಎಲೆ ಚರ್ಮರೋಗ ನಿವಾರಕವೂ ಅಹುದು. ಎಲೆ ಮತ್ತು ಅರಶಿನ ಅರೆದು ಮೈಗೆ ಹಚ್ಚಿ ಅರ್ಧತಾಸಿನ ಬಳಿಕ ಅಟ್ಟಲಕಾಯಿಯು ನೊರೆ ಹಚ್ಚಿ ಸ್ನಾನ ಮಾಡಿದರೆ ಮೈಮೇಲಿನ ನವೆ, ಕಜ್ಜಿ ದೂರವಾಗುತ್ತದೆ. ಚರ್ಮರೋಗ ನಿವಾರಣೆಗಾಗಿ ಆಗಾಗ ಈ ರೀತಿ ಸ್ನಾನವು ಅನುಕೂಲಕರವಾಗಿದೆ. ಅಡ್ಡೆಸೋಗೆಯ ಎಲೆಯ ರಸದಲ್ಲಿ ಹಾಲ್ಬಳ್ಳಿ ಬೇರನ್ನು ತೇದು ಹಚ್ಚುವದರಿಂದ ಮುಖದ ಕಪ್ಪು ಕಲೆಗಳು ಮಾಯುತ್ತವೆ, ಅಡ್ಡೆಸೊಗೆಯ ಔಷಧ ಗುಣಗಳು ನೂರಾರು. ಮೂಲವ್ಯಾಧಿ ರಕ್ತ ಹೀನತೆ ಜಂತು ಹುಳು ಪಾದದ ಉರಿ ಮುಂತಾದವುಗಳನ್ನು ನೀಗಬಲ್ಲದು.  ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಪ್ರಯುತ್ನಿಸಿರಿ. ಒಂದೆರಡು ಟೊಂಗೆ ತಂದು ನಿಮ್ಮ ಬೇಲಿಗೆ ನೆಟ್ಟಿರಿ. ಹಚ್ಚ ಹಸುರಾಗಿ ಸದಾ ಹಸನ್ಮುಖಿಯಾಗಿರುವ ಇದನ್ನು ಕುಂಡದಲ್ಲಿ ಕೂಡ ನೆಟ್ಟುಕೊಳ್ಳಬಹುದು. ಅನೇಕ ವರ್ಷ ಬಾಳುತ್ತ ಈ ಹಸಿರು ವೈದ್ಯೆ ನಿಮ್ಮ ಹಾಗೂ ಕುಟುಂಬದವರ ಮತ್ತು ನೆರೆಹೊರೆಯವರ ಆರೋಗ್ಯ ರಕ್ಷಣೆಯ ಹೊರೆ ಹೊರಬಲ್ಲಳು.

Wednesday 25 July, 2012

ನಮ್ಮ ಗಿಡ ಮರ ಬಳ್ಳಿಗಳು- ಕರಿಮುಳ್ಳಣ್ಣು


ಕರಿಮುಳ್ಳಣ್ಣು  Zizipus oenoplia L.C. Mill


 ಬೇಸಿಗೆ ಕಾಲಿಡುತ್ತಲೇ ಹಳ್ಳಿ ಮಕ್ಕಳು ಕಾಡಿನ ಹಣ್ಣಿನ ಕನಸು ಕಾಣಲುತೊಡಗುವದು ಸಾಮಾನ್ಯವಾಗಿರುತ್ತದೆ; ಪಟ್ಟಣದ ಶಾಲಾ ಮಕ್ಕಳಿಗೆ ತಮ್ಮ ಪರೀಕ್ಷೆ ಮುಗಿಯುತ್ತಲೇ ಹಳ್ಳಿಯ ಅಜ್ಜಿ ಮನೆಗೆ ಹೋಗುವ ತವಕ. ಮನೆಯಲ್ಲಿ ತೋಟದ ಹಣ್ಣು ಪೇಟೆಯ ಹಣ್ಣುಗಳು ದೊರೆಯುತ್ತಿದ್ದರೂ ಕಳೆದ ವರ್ಷ ಅಜ್ಜಿ ಮನೆಯ ಗುಡ್ಡದ ಬದಿಯ ಕಾಡಿನಲ್ಲಿ ಬಿಳಿ ಮುಳ್ಳಣ್ಣು, ಕರಿ ಮುಳ್ಳಣ್ಣು, ಚಂಪೇರ ಹಣ್ಣು , ಕಡಜಲ ಹಣ್ಣು, ಮುಳ್ಳು ಗುಜ್ಜರ ಹಣ್ಣು, ಚಿರಕಲ ಹಣ್ಣು, ಗೇರ ಹಣ್ಣು, ನೇರಲ ಹಣ್ಣು,  ಕುನ್ನೇರಲ ಹಣ್ಣು, ಬಿಳಿಕಾರೆ ಹಣ್ಣುಗಳನ್ನು ತಿಂದ ನೆನಪು ಪರೀಕ್ಷೆಗಾಗಿ ಓದಲು ಕುಳಿತಾಗಲೆಲ್ಲ ಕಾಡುತ್ತದೆ. ಹೀಗೆ ಕಾಡುವ ಹಣ್ಣುಗಳಲ್ಲಿ ಕರಿಮುಳ್ಳಣ್ಣೂ ಒಂದಾಗಿದೆ. ಇದು ಹಣ್ಣು ಕೊಡುವ ಕಾಲ ಡಿಸೆಂಬರ ಅನಂತರ ಒಂದೆರಡು ತಿಂಗಳು ಮಾತ್ರ ಬಳಿಕ ಈ ಗಿಡ ತನ್ನ ಎಲೆಗಳನ್ನೆಲ್ಲ ಪೂರ್ಣ ಉದುರಿಸಿ  ಒಣಗಿ ಜಿಗ್ಗಿನಂತಾಗುತ್ತದೆ. 
 
        ಈಗ ಬೇರೆ ಹಿಂಡು ಹಿಂಡುಗಳಲ್ಲಿ ಬಿಳಿ ಮುಳ್ಳಣ್ಣು ಕಣ್ಸೆಳೆಯುತ್ತದೆ. ಮುತ್ತಿನ ಬಣ್ಣದ ಬಿಳಿ ಮುಳ್ಳಣ್ಣಿನ ಮುಂದೆ  ಕಪ್ಪು ಬಣ್ಣದ  ಇದು ಕರಿ ಮುಳ್ಳಣ್ಣು ಎನಿಸಿಕೊಂಡಿತು. ಆದರೆ ಇದು ಬಿಳಿ ಮುಳ್ಳಣ್ಣಿನಷ್ಟು ದೊಡ್ಡದಲ್ಲ. ಇದು ಕಾಳು ಮೆಣಸಿನಷ್ಟು ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತದೆ. ತುಸು ಹುಳಿ ಸಿಹಿ ರುಚಿ. ಚೀಪಿ ತಿನ್ನಬಹುದಾದ ಒಂದೇ ಬೀಜದ ಹಣ್ಣು ಇದು. ಬೀಜ ಗಟ್ಟಿ. ಬೀಜವನ್ನು ತಿನ್ನುವ ರೂಢಿಯಿಲ್ಲ. ರಸ ಅತ್ಯಲ್ಪ. ಚೀಪುವಾಗ ರಸಾನುಭವವಾಗುವ ಕಾಲಕ್ಕೆ ಸರಿಯಾಗಿ ಇದರ ಸಿಪ್ಪೆ ನಾಲಿಗೆಯಲ್ಲಿ ಉಳಿದುಕೊಳ್ಳುತ್ತದೆ. ಆದರೆ ಸಿಪ್ಪೆ ಉಗುಳಬಹುದಾದ ಮಾಲಲ್ಲ. ಜಗಿದು ನುಂಗಬೇಕಾದ ಜೀವಸತ್ವದ ಗಣಿ. 
 
       ಇದು ತಿನ್ನಬಹುದಾದ ಹಣ್ಣೆಂದು ನಿಮಗೆ ಹೇಳಿದವರು ಯಾರು? ಇದಕ್ಕೆ ಉತ್ತರ ಪರಂಪರೆ. ನಾವು ನಿತ್ಯ ಉಣ್ಣುವ ಅನ್ನ ಊಟದಲ್ಲಿ ಬಳಸುವ ಹೀರೆ ಮೊಗ್ಗೆ ಮುಂತಾದವನ್ನು ನಾವು ಸೇವಿಸಲು ಕಲಿತದ್ದು ಪರಂಪರೆಯಿಂದ. ಇದನ್ನು ಮೊಟ್ಟ ಮೊದಲು ಸೇವಿಸುವ ಧೈರ್ಯ  ಮಾಡಿದ ಸ್ತ್ರೀ-ಪುರುಷ ಯಾರೋ ಗೊತ್ತಿಲ್ಲ.
 
       ಕರಿ ಮುಳ್ಳಣ್ಣಿನ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ನಾವು ನೀವು ಭಯಪಡದೆ ಇದನ್ನು ತಿನ್ನಬಹುದು. ಇದರಲ್ಲಿ ಶರ್ಕರ, ಪಿಷ್ಟ, ಕಬ್ಬಿಣ, ರಂಜಕಗಳಿವೆ. ಇದು ಶಕ್ತಿವರ್ಧಕ. ಹಿರಿಯರು ಮಕ್ಕಳಿಗೆ ಸಾಮಾನ್ಯ ಜ್ವರ; ಹೊಟ್ಟೆ ನೋವು ಬಂದಾಗ ಈ ಹಣ್ಣಿನ ಕಷಾಯ ನೀಡಬಹುದು. ತೊಗಟೆಯ ಕಷಾಯದಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ ಎಲೆಯ ರಸದಿಂದ ಹಸಿಗಾಯ ನಿವಾರಣೆಯಾಗುತ್ತದೆಯೆಂಬ ವರದಿಗಳಿವೆ. ಬೇರನ್ನು ನಾಡ ಮದ್ದುಗಾರರು ಚವಿ ರೋಗಕ್ಕೆ, ಚರ್ಮ ರೋಗಕ್ಕೆ  ಮದ್ದಾಗಿ ಬಳಸುತ್ತಾರೆ. ಇದು ಎಸಿಡಿಟಿಗೂ ಮದ್ದು. ಆದರೆ ಹಣ್ಣನ್ನು ಕೊಯ್ಯಲು ಹೋದಾಗ ಕೈ  ಮತ್ತು ಕಾಲುಗಳನ್ನು ಎಚ್ಚರಿಕೆಯಿಂದಿಡಿ. ಎಡಗೈಯ್ಯಲ್ಲಿ ಕಾಯಿ ಹಣ್ಣುಗಳಿಂದ ತುಂಬಿದ ಮುಳ್ಳು ಮತ್ತು ಎಲೆಗಳ ಸುಂದರ ಹೆಣಿಗೆಯ ಟೊಂಗೆಯನ್ನು ಮೆಲ್ಲಗೆ ಹಿಡಿದು ಹಣ್ಣನ್ನು ಆಯ್ದುಕೊಳ್ಳುವದು ಒಂದು ನೋಡಿ ಕಲಿಯುವ ಕಲೆ. ಆದರೂ ಇದು ತನ್ನ ಮುಳ್ಳಿನಿಂದ ಪರಚದಿರುವದಿಲ್ಲ. ಈ ಅನುಭವವಿರುವ ಕರಾವಳಿಯ ಪೂರ್ವದಲ್ಲಿರುವ ಗಟ್ಟದ ಮಕ್ಕಳು ಇದನ್ನು ಪರಿಗೆಯೆಂದರು. ಸೂಜಿಯ ಮೊನೆಯಂತಹ ಇದರ ಮುಳ್ಳುಗಳನ್ನು ಮತ್ತು ಕಪ್ಪು ಬಣ್ಣದ ಹಣ್ಣುಗಳನ್ನು ಕಂಡ ಅಂಕೋಲೆಯ ಸುತ್ತಣಜನ ಇದನ್ನು ಕರಿಸೂಜಿ ಮುಳ್ಳು ಎಂದರು. ಇಂಗ್ಲಿಷಿನಲ್ಲಿ ಜಾಕಲ ಜುಜುಬಿ ಎಂದರು .ಝಿಝಿಪಸ್ ಒನೋಪಲಿಎಂಬುದು ಇದರ ಸಸ್ಯ ಶಾಸ್ತ್ರೀಯ ಹೆಸರು ರಾಮ್ನೇಸಿ ಕುಟುಂಬ.
 
        ಈ ಮುಳ್ಳು ಹಿಂಡನ್ನು ಗಮನಿಸಿರಿ. ಅಲ್ಲೆಲ್ಲ ಹತ್ತಾರು ಔಷಧ ಗಿಡ ಬಳ್ಳಿಗಳು ಕಂಡುಬರುತ್ತವೆ. ಇವುಗಳನ್ನು ರಕ್ಷಿಸಲು ಇಲ್ಲೊಂದು ಅಪೂರ್ವ ರಕ್ಷಣಾ ವ್ಯವಸ್ಥೆಯಿದೆ. ಈ ಗಿಡದ ಟೊಂಗೆ ಟೊಂಗೆಗೆ ಎಲೆ ಎಲೆಯ ಸಂದಿನಲ್ಲಿ ಅಪೂರ್ವ ಮುಳ್ಳುಗಳ ಜೋಡಣೆ ಕಾಣುತ್ತದೆ. ಒಂದು ಮುಳ್ಳು ಸೂಜಿ ಮೊನೆಯಂತೆ ಚೂಪಾಗಿ ತೊಂಬತ್ತಂಶದ ಕೋನದಲ್ಲಿ ಹಾಗೂ ಬದಿಯಲ್ಲಿಯ ಇನ್ನೊಂದು ಮುಳ್ಳು ಬೆಕ್ಕಿನ ಉಗುರಿನಂತೆ ಬಾಗಿ ನಲವತೈದು ಅಂಶದ ಕೋನದಲ್ಲಿ ಜೋಡಿಯಾಗಿ ವೈರಿಗಳನ್ನು ಪರಚಲು ಸಿದ್ಧವಾಗಿ ನಿಂತಿರುತ್ತವೆ. ಆದರೆ ಈ ಔಷಧ ಗಿಡಗಳನ್ನು ಮೇಯಲು ಬರುವ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಂಡರೂ ಇದು ತನ್ನನ್ನು ರಕ್ಷಿಸಿಕೊಳ್ಳಲು ಅಸಮರ್ಥವಾಗುವ ಪರಿಸ್ಥಿತಿ ಉಂಟಾಗಿದೆ. ಇದರ ಮುಳ್ಳು ಮನುಷ್ಯನ ಕಣ್ಣಿಗೆ ಬಿದ್ದು ಕಮರುವ ಸ್ಥಿತಿ ಬಂದಿದೆ. ಈತ ತನ್ನ ತೋಟಕ್ಕೆ ಇದರ ಹಸಿರು ಬೇಲಿ ಮಾಡುವ ಬದಲು ಪ್ರತಿ ಮಳೆಗಾಲದ ಆರಂಭದಲ್ಲಿ ಇದನ್ನು ಕಡಿ ಕಡಿದು ತೋಟದ ಬೇಲಿಗೆ ಒಡ್ಡುತ್ತಿದ್ದಾನೆ. ಇಂತಹ ಅಪೂರ್ವ ಮುಳ್ಳು ಹಿಂಡುಗಳ ನಾಶಕ್ಕೆ ಕಾರಣನಾಗುತ್ತಿದ್ದಾನೆ. ಜೊತೆಗೆ ಈ ಹಿಂಡುಗಳ ಉಸ್ತುವಾರಿಯಲ್ಲಿದ್ದ ಔಷಧ ಗಿಡಗಳನಾಶಕ್ಕೂ ಕಾರಣನಾಗುತ್ತಿದ್ದಾನೆ. ಈಗ ನಾವು ತಲೆಯ ಮೇಲೆ ಕೈಯ್ಯಿಟ್ಟು ತೆಪ್ಪಗೆ ಕುಳಿತಿರ ಬೇಕೆ? ನಮ್ಮ ಮುದ್ದು ಕರಿಮುಳ್ಳಣ್ಣಿನ ಹಿಂಡನ್ನು ಉಳಿಸಿಕೊಳ್ಳುವ ಬಗೆ ಹೇಗೆ ಬಾಲಕರೆ ನೀವೇ ಹೇಳುತ್ತೀರಾ? ಬರೆಯುತ್ತೀರಾ?                    

Monday 23 July, 2012

ಪ್ರತಿಕ್ರಿಯೆ


ಭಾರತೀಯ ಸಂಸ್ಕೃತಿ ಮತ್ತು  ಮುಜರಾಯಿ ಇಲಾಖೆಯ ಡಂಭಾಚಾರದ ಪೂಜೆ.


       ಭಾರತೀಯ ಸಂಸ್ಕೃತಿಯಲ್ಲಿ ಪೂಜೆಗೆ ಸ್ಥಾನವಿದೆ ನಿಜ. ಅದು ಅಂದು ಮುಗ್ಧ ಮಾನವ ತನ್ನ ಮನಸ್ಸಿನ ತುಮುಲ ನಿವಾರಣೆಗೆ ಕಂಡುಕೊಂಡ ಒಂದು ಸುಲಭ ಮಾರ್ಗ. ತನ್ನ ತೋಟದಲ್ಲಿ ಬೆಳೆದ ಒಂದು ಹಣ್ಣು ಕಾಯಿ. ಅದೂ ಇಲ್ಲದಿದ್ದರೆ ನಾಲ್ಕು ಗರಿಕೆ. ಪತ್ರೆ. ಹೂ. ಅ¦ರ್ಪಿಸಿ  ಕೈ ಮುಗಿದು ಕ್ಷಣಕಾಲ ದೇವರನ್ನು ಧ್ಯಾನಿಸಿ, ಅಂತರಂಗದಲ್ಲಿ ಆ ದೇವರೊಂದಿಗೆ ಮಾತಾಡಿ ಕೃತಜ್ಞತಾ ಭಾವದೊಂದಿಗೆ ಆತ್ಮೀಯವಾಗಿ ಕೈಮುಗಿದು ಮನದ ದುಗುಡವನ್ನು ಇಳಿಸಿಕೊಂಡು ಹಿಂತಿರುಗುವದು  ಭಕ್ತನ ಪ್ರಕೃತಿ ಸಹಜ ಪೂಜೆಯ ಒಂದು ಕ್ರಮ.  ಆದರೆ ಕಾಲ ಕ್ರಮೇಣ ದೇವರು ಮತ್ತು ಭಕ್ತನ ನಡುವೆ ಮಧ್ಯವರ್ತಿಗಳ ಪ್ರವೇಶದೊಂದಿಗೆ ಪೂಜೆಯಲ್ಲಿ ಡಂಭಾಚಾರ ದುಂದು ವೆಚ್ಚ ಹೆಚ್ಚಾಯಿತು. ಮಂತ್ರಿಗಳು ರಾಜಾಜ್ಞೆಯ ಮೂಲಕ ಕೋಟಿ ಕೋಟಿ ವ್ಯಯಿಸಿ ಪೂಜೆ ಮಾಡಿಸುವದು ಡಂಭಾಚಾರದ ಅಜ್ಞಾನದ ಪರಮಾವಧಿ. ಇದನ್ನು ಸಂಸ್ಕೃತಿ ಎನ್ನದಿರಿ.

     ಇತ್ತೀಚಿನ ದಿನಗಳಲ್ಲಿ ದೇವರ ಹೆಸರಿನಲ್ಲಿ ನಡೆಯುವ ಇಂಥ ಪೂಜೆಗಳನ್ನು ಭಾರತೀಯ ಸಂಸ್ಕೃತಿಯ ದ್ಯೋತಕವೆಂದು ತೋರುವದಕ್ಕೆ ನಾಚಿಕೆಯಾಗುತ್ತದೆ. ಈ ಪೂಜೆಗಳು ಸಂಸ್ಕೃತಿಯ ದ್ಯೋತಕಗಳಲ್ಲ ವಿಕೃತಿಗಳು. ಸಂಸ್ಕೃತಿಯ ಬಲಿಗಂಬಗಳು. 
                     
    ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿಯ ಸಂಪತ್ತನ್ನೆಲ್ಲ ಹೊರ ತಂದು ಬರಗಾಲದ ಕಾಮಗಾರಿಗೆ. ಸರಿಯಾದ ಗೋಡೆಯಿಲ್ಲದ ಮನೆಯಲ್ಲಿ ವಾಸಿಸುತ್ತ ಮನೆಯ ಗೋಡೆ ಬಿದ್ದು ಸಾಯುವವರನ್ನು ತಡೆಯುವದಕ್ಕೆ. ಕುಡಿಯುವ ನೀರನ್ನು ಒದಗಿಸುವದಕ್ಕೆ, ಹೆಂಗಸರು ಮಕ್ಕಳು ವೃದ್ಧರು. ರೋಗಿಗಳಿಗಾಗಿ ಶೌಚಾಲಯ ನಿರ್ಮಾಣಕ್ಕೆ ವಿನಿಯೋಗಿಸಲು ಇದು ಸಕಾಲ. ಜನ ದೇವರ ಬಳಿ ಠೇವಣಿಯಾಗಿ ಕೊಟ್ಟ ಈ ದುಡ್ಡು ಜನಕ್ಕೆ ಮುಟ್ಟಲಿ. ನಿಮ್ಮ ವರುಣ ಮೆಚ್ಚುವ ಇಂಥ ಕೆಲಸ ಮಾಡಿ. ಇದೇ ನಿಜವಾದ ಪೂಜೆ .   





Saturday 21 July, 2012

ನಮ್ಮ ಗಿಡ ಮರಬಳ್ಳಿಗಳು-ಬಾಯಿ ಒಡಕನ ಗಿಡ



ಬಾಯಿ ಒಡಕನಗಿಡ

Euphorbia hirta



      ಇದು ಭಾರತೀಯರಿಗೆ ಹೆಚ್ಚು ಪರಿಚಿತವಾದ ಗಿಡ. ಇದನ್ನು ಆಹಾರ ಪರಿಕರಗಳ ಜೊತೆ ಅಟ್ಟು ಸೇವಿಸುತ್ತಾರೆ ದಕ್ಷಿಣ ಕರ್ನಾಟಕದಲ್ಲಿ ಬೆರಕೆ ಸೊಪ್ಪಿನಜೊತೆ ಇದರ ಒಂದೆ ರಡು ಚಿಗುರುಗಳನ್ನು ಸೇರಿಸುತ್ತಾರೆ. ಮಲೆನಾಡಿನ ಭೂಮಿ ಹುಣ್ಣಿವೆಯ ಅಡುಗೆಯಲ್ಲಿ ಇದಕ್ಕೆ ಸ್ಥಾನ ಕಲ್ಪಿಸಲಾಗಿದೆ. ಕರಾವಳಿಯಲ್ಲಿ ಇದನ್ನು ಅಗಾಗ ತಂಬುಳಿ ಮಾಡಿ ಸೇವಿ ಸುತ್ತಾರೆ. ಇದರ ದೇಟು ಮತ್ತು ಹೂವುಗಳ ಬಣ್ಣವನ್ನು ಗಮನಿಸಿ. ಇದರಲ್ಲಿ ಬಿಳಿ ಮತ್ತು ಕೆಂಪು ಎಂದು ಎರಡು ವಿಧಗಳನ್ನು ಗುರುತಿಸುತ್ತಾರೆ.
  
      ಇದರ ಹೂಗೊಂಚಲು ನೆನೆಸಿದ ಕೆಂಪಕ್ಕಿಯನ್ನು ನೆನಪಿಸುವ ಕಾರಣ ಇದರ ಒಂದು ಬಗೆಯ ಗಿಡಕ್ಕೆ ಕೆಂಪು ನೆನೆಯಕ್ಕಿ ಗಿಡವೆಂಬ ಹೆಸರಿದೆ. ಗಿಡವನ್ನು ಮುರಿದಾಗ ಬಿಳಿಹಾಲು ಹೊರಬರುವ ಕಾರಣ ಇದು ಇನ್ನೊಂದು ಊರಿನಲ್ಲಿ ಹಾಲು ಕುಡಿಯೆಂಬ ಹೆಸರು ಪಡೆದಿದೆ. ಇದರ ದೇಟುಗಳು ಹಸಿರು ಮತ್ತು ಹವಳದ ಬಣ್ಣದಲ್ಲಿರುತ್ತವೆ.  ಬೆಂಗಳೂರಿನಲ್ಲಿ ಇನ್ನೊಂದು ಪ್ರಕಾರದ ಬಾಯಿ ಒಡಕನ ಗಿಡ ದೊರೆಯುತ್ತಿದ್ದು ಇದರ ಬಳಕೆಯೂ ಜಾರಿಯಲ್ಲಿದೆ.ಇದಕ್ಕೆ  ಸಾಸಿವೆಯಷ್ಟು ಚಿಕ್ಕ ಅಚ್ಚ ಬಿಳಿ ಬಣ್ಣದ ಹೂವುಗಳಿರುತ್ತವೆ, ಕೆಂಪು ನೆನೆಯಕ್ಕಿ ಗಿಡವನ್ನು ಸಸ್ಯ ವಿಜ್ಞಾನಿಗಳು ಯರ್ಪೋಬಿಯಾ ಹಿರ್ಟಾ ಎಂದು ಗುರುತಿಸಿದರೆ ಬಿಳಿಯ ಹೂವಿನ ನೆನೆಯಕ್ಕಿ ಗಿಡವನ್ನು ಯಫೋರ್ಬಿಯಾ ಪಾರ್ವಿ  ಫ್ಲೋರಾ ಎನ್ನುತ್ತಾರೆ. ಸಂಸ್ಕೃತದಲ್ಲಿ ದುಗ್ಧಿಕಾ, ನಾಗಾರ್ಜುನಿ ಎನ್ನುತ್ತಾರೆ.
       ಬಾಯಿ ಒಡಕನಗಿಡವು ಯಾವುದೇ ತಂಪು ಭೂಮಿಯಲ್ಲಿ ಕಳೆಗಿಡವಾಗಿ ಕಂಡುಬರುತ್ತದೆ. ಎಲೆಗಳು ಅಭಿಮುಖ ಜೋಡಣೆಯಲ್ಲಿರುತ್ತವೆ. ಎಲೆಗಳ ಅಂಚು ಗರಗಸದ ಸಣ್ಣ ಹಲ್ಲಿನಂತಿದೆ. ಎಲೆಗಳ ಬುಡಭಾಗವು ಅಸಮವಾಗಿರುವುದು. ಈ ಗಿಡದ ವಿಶೇಷವಾಗಿದೆ. ಎಲೆಗಳ ಕಂಕುಳಲ್ಲಿ ಹೂಗೊಂಚಲು ಕಾಣುತ್ತದೆ. ಹೂಗಳು ಬಹಳ ಚಿಕ್ಕವು. ಕಾಯಿಗಳು ಗಸಗಸೆಯಷ್ಟು ಸಣ್ಣವು. 
 
         ಕರ್ನಾಟಕದಲ್ಲಿ  ಕರಾವಳಿ ಪ್ರದೇಶದಲ್ಲಿ ಇದನ್ನು ಬಾಯಿ ಒಡಕನ ಗಿಡವೆಂದು ಗುರುತಿಸಲು ಪ್ರಮುಖ ಕಾರಣ ಇದರ ಮದ್ದಿನ ಗುಣ. ಇದು ಬಾಯೊಳಗೆ ಹುಟ್ಟುವ ಬೊಕ್ಕೆಗಳ ಶಮನಕ್ಕೆ ಅತ್ಯುತ್ತಮ ಔಷಧವೆಂದು ಗುರುತಿಸಲಾಗಿದೆ.
 
         ಬಾಯಿ ಹುಣ್ಣಾದಾಗ ಅಥವಾ ಬಾಯಿ ಹುಣ್ಣಾಗದಂತೆ ತಡೆಯುವ ಸಲುವಾಗಿ ಇದರ ಗಿಡವನ್ನು ಅಡುಗೆಯಲ್ಲಿ ಆಗಾಗ ಬಳಸಲಾಗುತ್ತದೆ. ಆರೆಂಟು ಫಲಭರಿತ ಕುಡಿಗಳನ್ನು ಅರ್ಧ ಚಮಚ ಜೀರಿಗೆ ಆರೆಂಟು ಕಾಳು ಮೆಣಸುಗಳ ಜೊತೆಯಲ್ಲಿ 1 ಚಮಚ ತುಪ್ಪ ಹನಿಸಿಕೊಂಡು ಬಾಡಿಸಿ (ಹುರಿಯ ಬೇಕಾಗಿಲ್ಲ) ಒಂದು ಹಿಡಿ ತೆಂಗಿನ ಕಾಯಿಯ ಸುಳಿಯನ್ನು ಸೇರಿಸಿಕೊಂಡು ಅರೆದು ಅದಕ್ಕೆ ಒಂದು ಚಮಚ ಉಪ್ಪು ಹಾಗೂ ಒಂದು ಕಪ್ಪು ಕಡೆದ ಮೊಸರು ಸೇರಿಸಿ ಮಜ್ಜಿಗೆಯ ಹದಕ್ಕೆ ಬರುವಂತೆ ನೀರನ್ನು ಬೆರೆಸಿ ತಂಬುಳಿಯ ತಯಾರಿಸಿ ಸೇವಿಸುವ ಪರಂಪರಾಗತ ಪದ್ಧತಿ ಜನಪದ ಅಡುಗೆಯಲ್ಲಿದೆ. ಇದನ್ನು ಕುಡಿಯಲು, ಅನ್ನ ಕಲಸಿ ಉಣ್ಣಲು ಬಳಸಲಾಗುತ್ತದೆ. 

          ಫಲ ಭರಿತವಾದ ಹೂ ಗೊಂಚಲು ಹಸಿಯಾಗಿ ತಿನ್ನುವದಕ್ಕೆ ರುಚಿಕರವಾಗಿರುತ್ತದೆ. ಇದರಲ್ಲಿ ಮಧುವನ್ನು ಹೀರಲು ಬರುವ ಚಿಕ್ಕ ಜೀವಿಗಳನ್ನು ಕಾಣಬಹುದು. ಆದ್ದರಿಂದ ಇವುಗಳನ್ನು ತೊಲಗಿಸಲು ಹೂಗೊಂಚಲನ್ನು ಉಪ್ಪು ಬೆರೆಸಿದ ನೀರಿನಲ್ಲಿ ತೊಳೆಯಬಹುದು. ಎಲೆಗಳ ಕಷಾಯದಿಂದ ಮೈ ತೊಳೆದರೆ ಅನೇಕ ಚರ್ಮರೋಗಗಳು ಗುಣಗುತ್ತವೆ. ಇದು ಕೂದಲಿನ ಆರೋಗ್ಯವನ್ನೂ ಕಾಯಬಲ್ಲದು. ಕೂದಲು ನೆರೆಯುವುದನ್ನು ತಪ್ಪಿಸಬಲ್ಲದು.
 
          ಆಸ್ಟ್ರೇಲಿಯದ ಜನಪದ ವೈದ್ಯ ಪದ್ಧತಿಯಲ್ಲಿ ಇದನ್ನು ಅಸ್ತಮಾ ರೋಗ ನಿವಾರಣೆಗಾಗಿ ಬಳಸುತ್ತಾರೆ.  ಆದ್ದರಿಂದ ಇದಕ್ಕೆ ಆಸ್ಟ್ರೇಲಿಯನ್ ಅಸ್ತಮಾ ಹರ್ಬ ಎಂಬ ಹೆಸರಿದೆ.ಫಿಲಿಫಾಯಿನ್ಸನಲ್ಲಿ ಇದನ್ನು ಡೆಂಗ್ಯು ಜ್ವರದ ಸಂದರ್ಭದಲ್ಲಿ  ಮನೆಮದ್ದಾಗಿ ಬಳಸುವದುಂಟು.
 
         ಆಫ್ರಿಕಾದ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಇದನ್ನು ರಕ್ತಭೇದಿಗೆ ಔಷಧವಾಗಿ ಬಳಸುತ್ತಾರೆಂದು ವರದಿಗಳಿವೆ. ಆಸ್ಟ್ರೇಲಿಯ ಆಫ್ರಿಕಾಗಳ ಜನಪದ ವೈದ್ಯ ಪದ್ಧತಿಯಲ್ಲಿ ರಕ್ತದ ಏರೊತ್ತಡ ನಿವಾರಣೆಗಾಗಿ ಇದನ್ನು ಬಳಸಲಾಗುತ್ತದೆ. ಇದು ಈ ರೋಗಕ್ಕೆ ಔಷಧವೆಂದು ವೈಜ್ಞಾನಿಕವಾಗಿ ದೃಢಟ್ಟಿದೆ.
 
        ಆಧುನಿಕ ವೈಜ್ಞಾನಿಕ ಪ್ರಯೋಗಗಳಿಂದ ಇದಕ್ಕೆ ಅನೇಕ ರೋಗಕಾರಕ ಬೆಕ್ಟೀರಿಯಾ ಶಿಲೀಂದ್ರಗಳನ್ನು ನಾಶ 
ಪಡಿಸುವ ಗುಣವಿದೆಯೆಂದು ತಿಳಿದು ಬರುತ್ತದೆ. ಇದು ಭೇದಿ, ಕೆಮ್ಮು, ಹೊಟ್ಟೆಹುಳಗಳನ್ನು ದೂರಮಾಡುತ್ತದೆಯೆಂದು ತಿಳಿದು ಬರುತ್ತದೆ. ಅತ್ಯಮೂಲ್ಯವಾದ ಈ ಔಷದ ಸಸ್ಯವನ್ನು ಕಂಡಲ್ಲಿ ಕಿತ್ತು ಹಾಕದೆ ಬೆಳೆಯಗೊಡಿರಿ, ಬಳಸಿ ಆರೋಗ್ಯವಂತರಾಗಿ.

ಚಿತ್ರ ಕೃಪೆ ಅಂತರ್ಜಾಲ

Thursday 19 July, 2012

ಪ್ರತಿಕ್ರಿಯೆ


                             ಶೌಚಾಲಯ ಮತ್ತು  ಸರಕಾರ


       14 ಜುಲೈ 12 ರ ಪ್ರಜಾವಾಣಿಯ ಭೂಮಿಕಾದಲ್ಲಿ ವಿವಿಧ ಚಿಂತಕರಿಂದ ವ್ಯಕ್ತವಾಗಿರುವ ನಮ್ಮ ರಾಜ್ಯದ ಶೌಚಾಲಯ ಸಮಸ್ಯೆಯ ಕುರಿತ ಪ್ರತಿಕ್ರಿಯೆ ಆಧುನಿಕ ಸ್ವತಂತ್ರ ಭಾರತದ ದಯನೀಯ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ. ಈ ದೇಶದ ಆಡಳಿತಕ್ಕೆ ದೇಶದ ಶೌಚಾಲಯ ಪರಿಸ್ಥಿತಿಯನ್ನು ಸುಗಮಗೊಳಿಸುವದು ಒಂದು ಚಿಕ್ಕ ಆದರೆ ಅಷ್ಟೇ ಮಹತ್ವದ ಮತ್ತು ಅಗತ್ಯದ ಕೆಲಸ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 
ಅರವತ್ತೈದು ವರ್ಷ ಕಳೆದರೂ ಇದು ಸಾಧ್ಯವಾಗಲಿಲ್ಲವೆಂಬುದು ದೇಶಕ್ಕೆ ನಾಚಿಕೆಗೇಡಿನ ಸಂಗತಿ.
     
     ಒಂದು ಮನೆಗೆ ಶೌಚಾಲಯವಿಲ್ಲವೆಂದಾದರೆ ಅದಕ್ಕೆ ಅವರು ಹೊಣೆ, ಇವರು ಹೊಣೆ ಎಂದು ಜಾರಿಕೊಳ್ಳದೆ ಸರಕಾರವೇ ಇದಕ್ಕೆ ಹೊಣೆಯಾಗಬೇಕು
 
      ದೇವಸ್ಥಾನ ನಿರ್ಮಾಣಕ್ಕಾಗಿ ಲಕ್ಷಗಟ್ಟಲೆ ಮತ್ತು ಮಠ ಮಾನ್ಯಗಳಿಗೆ ಕೋಟಿಗಟ್ಟಲೆ ಅನುದಾನ ನೀಡುವ ಈ ಸರಕಾರ ಬಡವರಿಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡುವಾಗ ಪಕ್ಷಪಾತ ಮಾಡುವುದೇಕೆ?.ಶೌಚಾಲಯನಿರ್ಮಾಣಕ್ಕೆ ಸರಕಾರ ಕೊಡುವ ಅನುದಾನ ಶೌಚಾಲಯದ ನೆಲಗಟ್ಟು ನಿರ್ಮಾಣಕ್ಕೂ ಸಾಲುವ ದಿಲ್ಲವೆಂಬ ಹೇಳಿಕೆಗಳಿವೆ. ಇದರಿಂದಾಗಿಸಂಡಾಸನಿರ್ಮಿಸಿಕೊಳ್ಳಲು ಮನಸ್ಸಿ ದ್ದರೂ ಬಡವರು ಈ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಷ್ಟಿಷ್ಟು ಪುಡಿಗಾಸು ಬೀಸಾಡಿ ಶೌಚಾಲಯ ನಿರ್ಮಿಸಿಕೊಳ್ಳಿ ಎನ್ನುವ ಬದಲು ಸರಕಾರವೇ ಮುಂದೆ ನಿಂತು ಆಧುನಿಕ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಮುಂದಾಗಲಿ.  ಬಡವರ ಮನೆಗೆ ಉತ್ತಮ ಶೌಚಾಲಯ ನಿರ್ಮಿಸಿ ಕೊಡುವದು ದೇವಾಲಯ ನಿರ್ಮಿಸುವದಕ್ಕಿಂತ ಆಸ್ಪತ್ರೆ ನಿರ್ಮಿಸುವದಕ್ಕಿಂತ ನೂರುಪಟ್ಟು ಹೆಚ್ಚಿನ ಮೌಲ್ಯವುಳ್ಳದ್ದು. ಇದನ್ನು ಅರಿಯದ ಪ್ರಜಾಪ್ರತಿನಿಧಿಗಳು ಸರಕಾರದಲ್ಲಿರುವಾಗ ಯಾರಿಗೆ ದೂರುವದು? ಯಾರಿಗೆ ತಿಳಿಸುವದು?.

      ಪ್ರಜೆಗಳ ದುಡ್ಡಿನಿಂದ ವಿಧಾನಸೌಧದಲ್ಲಿ ಶಾಸಕರಿಗೆ ಮಂತ್ರಿಗಳಿಗೆ ಅದ್ದೂರಿ ಶೌಚಾಲಯ ವಿರುವುದಾದರೆ ಅವರನ್ನು ಆರಿಸಿ ಕಳಿಸುವ ಪ್ರಜೆಗಳಿಗೆ ಯಾಕೆ ತಗಡು ಬಾಗಿಲ ಕಟ್ಟಿದ ಮಣ್ಣು ಹೊಂಡದ ಶೌಚಾಲಯ? ವಿಧಾನಸೌಧದಲ್ಲಿ ಶಾಸಕರಿಗೆ ಮಂತ್ರಿಗಳಿಗೆ ಅದ್ದೂರಿ ಶೌಚಾಲಯವಿರುವಂತೆ ಬಡವರಿಗೆ ವಿಶೇಷವಾಗಿ ಮಹಿಳೆಯರಿಗಾಗಿ ಮಕ್ಕಳಿಗಾಗಿ ಮುದುಕರಿಗಾಗಿ ಉತ್ತಮ ಶೌಚಾಲಯ ಏಕೆ ಬೇಡ.?

       ಐಷಾರಾಮಿ ಅಹ್ಲುವಾಲಿಯಾ ಅವರಿಗೆ ಮೀಸಲಾದ ಎರಡು ಟಾಯಲೆಟ್ ನವೀಕರಣಕ್ಕೆ ಮುವತ್ತೈದು ಲಕ್ಷ  ಖರ್ಚಾದ ವಿಷಯ  ಹಳ್ಳಿಸುಬ್ಬ ಬ್ಲಾಗ್ನಲ್ಲಿ ಓದಿದೆ. ಇಂಥ ಘಟನೆಗಳು ನಮ್ಮ ದೇಶವನ್ನು ದುರಂತದತ್ತ ಒಯ್ಯುತ್ತಿರುವ ರಾಜಕೀಯ ಸುನಾಮಿಗಳು. ಪ್ರತಿಬಾರಿ ಸರಕಾರ ಬದಲಾದಾಗಲೆಲ್ಲ ನಮ್ಮ ಶಾಸಕರಿಗೆ ಮಂತ್ರಿಗಳಿಗೆ ಅದ್ದೂರಿ ಶೌಚಾಲಯದ ನವೀಕರಣ ನಡೆಯುತ್ತದೆ. ಅದಕ್ಕೆಷ್ಟು ಖರ್ಚಾಗುತ್ತದೆ? ಅದರ ಲೆಕ್ಕವನ್ನು ದೇಶದ ಈ ಬಡ ಪ್ರಜೆಗೆ ತಿಳಿಸುವವರು ಯಾರು? ತಿಳಿಸಿದರೂ, ತಿಳಿದರೂ ಅವನೇನು ಮಾಡಿಯಾನು?

       ಸದ್ಯ ಶೌಚಾಲಯ ನಿರ್ಮಾಣ ವರ್ತಮಾನ ಸರಕಾರದ ಪ್ರಥಮ ಆದ್ಯತೆಯ ಕಾರ್ಯವಾಗಲಿ. ನಮ್ಮ ರಾಜ್ಯದಲ್ಲಿ ಪೂರ್ಣ ಅಂದರೆ ನೂರಕ್ಕೆ ನೂರು ಶೌಚಾಲಯ ನಿರ್ಮಾಣ ಸಾಧ್ಯವಾಗುವವರೆಗೆ ಬಜೆಟ್ ಹಣದಲ್ಲಿ ದೇವರಿಗೆ ಮಠಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಲಿ. ಶೌಚಾಲಯ ನಿರ್ಮಾಣವೆಂದರೆ ಅದು ಕಾಟಾಚಾರದ ತಗಡು ಹೊಂಡ ವಾಗಿರುವದು ಬೇಡ.  ಉತ್ತಮ ಶೌಚಾಲಯವೇ ಆಗಿರಲಿ. ಪ್ರಜೆಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ಪುಡಿಗಾಸು ಹೊತಾಕುವ ಯೋಜನೆಯನ್ನು ಸರಕಾರ ಕೈಬಿಟ್ಟು ಹಣ ಸೋರಿ ಹೋಗದಂತೆ ಊರಿನ ಪಂಚರ ಸಮಕ್ಷಮ ಉತ್ತಮ ಶೌಚಾಲಯ ನಿರ್ಮಾಣ ಮಾಡುವ ಯೋಜನೆಯನ್ನು ತುರ್ತಾಗಿ ಜಾರಿಗೆ ತರಲಿ. 







Wednesday 18 July, 2012

ನಮ್ಮ ಗಿಡಮರ ಬಳ್ಳಿಗಳು- ಹುರುಡೆ



ಹುರುಡೆ  Cyperus bulbosus

      ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿರುವ ರೇವೆ ಮಣ್ಣಿನ ಬತ್ತದ ಗದ್ದೆಯ ಕೊಯಲು ಮುಗಿದು  ಗದ್ದೆಯ ಮಣ್ಣೆಲ್ಲ ಒಣಗಿದ ಬಳಿಕ ಅಲ್ಲಿ ಮತ್ತೊಂದು ಬೆಳೆ ಕೊಯ್ಲಿಗೆ ಬರುತ್ತದೆ. ಇದಕ್ಕೆ ಮನುಷ್ಯರ ಕೈಯ್ಯಿನ ನಾಟಿ ಬೇಕಿಲ್ಲ. ಕೃಷಿ ಕೆಲಸವೂ ಬೇಕಾಗಿಲ್ಲ. ಇದು ನಿಸರ್ಗವು ಉತ್ತಿ ಬಿತ್ತಿ ಸಿದ್ಧಗೊಳಿಸುವ ಬೆಳೆ. ಈ ಉಚಿತ ಆಹಾರವ ಬೆಳೆಯೇ ಹುರುಡೆ. ಈ ಬೆಳೆಯನ್ನು ತಮ್ಮ ಆಹಾರವಾಗಿ ಸ್ವೀಕರಿಸಿದವರು ಪ್ರಾಜ್ಞರಾದ ಕಾಡುವಾಸಿಗಳು ; ಇತ್ತೀಚೆಗೆ ಬಡವರು ಹಾಗೂ ದನ ಕಾಯುವ ಮಕ್ಕಳು ಆಹಾರವಾಗಿ ಸ್ವೀಕರಿಸಿದ್ದಾರೆ. ಆದರೆ ಬತ್ತ ಬಿತ್ತಿ ಅಪಾರ ಧಾನ್ಯ ಬೆಳೆಯುವ ಬೆಳೆಗಾರರಿಗೆ ಇದೊಂದು ಕಳೆ.


   ಹುರುಡೆಯ ಹುಲ್ಲನ್ನು ಗದ್ದೆಯ ಕಳೆಯೆಂದು ಇವರು ಗುರುತಿಸುತ್ತಾರೆ. ಗದ್ದೆಯ ಕಳೆ ಕೀಳುವಾಗ ಈ ಹುಲ್ಲನ್ನು ಕಿತ್ತು ಬೀಸಾಡುತ್ತಾರೆ. ಆದರೂ ಇವುಗಳ ಸಂತತಿ ಬತ್ತದ ಗದ್ದೆಯಲ್ಲಿ ನಿರಾತಂಕವಾಗಿ ಬೆಳೆಯುತ್ತದೆ.


  ಇದರ ಎಲೆಗಳು ಉಳ್ಳಾಗಡ್ಡೆಯ ಎಲೆಗಳಂತೆ ಕೊಳವೆಯಾಕಾರ ದಲ್ಲಿರುತ್ತವೆ. ವಿರಲವಾಗಿ ಬೆಳೆದಿರುವ ಗಿಡಗಳ ಎಲೆಗಳು ಉಳ್ಳಾಗಡ್ಡೆ ಎಲೆಯಷ್ಟು ದಪ್ಪವಾಗಿರುತ್ತವೆ. ಹಾಗೂ ಇವುಗಳಿಗೆ ಬುಡದಲ್ಲಿ ಕಬ್ಬಿಗಿರುವಂತಹ ಒಂದೆರಡು ಗಂಟುಗಳಿರುತ್ತವೆ. ದಟ್ಟವಾಗಿ ಬೆಳೆದಿರುವ ಹುರುಡೆಯ ಹುಲ್ಲು ಸೂಜಿಗಿಂತ ತುಸು ಗಡುತರವಾಗಿರುತ್ತವೆ. ಈ ಹುಲ್ಲುಗಳಿಗೆ ಬುಡದಲ್ಲಿ ಶೇಂಗಾ ಕಾಳಿನ ಗಾತ್ರದ ಬಟಾಟೆಯನ್ನು ಹೋಲುವ ಗಡ್ಡೆಗಳಿರುತ್ತವೆ. ಬಣ್ಣವು ಬಟಾಟೆಯಂತೆ. ಗಡ್ಡೆಗಳ ಮೊಳಕೆಗಳು ಕೂಡ ಶೇಂಗಾ ಬೀಜದ ಮೊಳಕೆಯಂತೆ ಕಾಣುತ್ತವೆ. 
     


      
   ಹೂಗಳು ಗಿಡದ ಕೊಳವೆಯಂತಹ ಎಲೆಯ ತುದಿಯಲ್ಲಿ ಕಾಣುತ್ತವೆ. ಪ್ರತಿ ಹೂವಿನಲ್ಲಿ ಪರಾಗ ಕಣಗಳು ಅಪಾರ. ಗಿಡಕ್ಕೆ ತುಸು ಕೈ ಸೋಂಕಿದರೆ ಸಾಕು. ತಕ್ಷಣ ಪರಾಗ ಕಣಗಳು ಹಾರುತ್ತವೆ. ಆಗ ಚಿಕ್ಕ ಬಿಳಿ ಧೂಳಿನ ಹೊಗೆ ಹಾರಿದಂತೆ ಭಾಸವಾಗುತ್ತದೆ. ಪರಾಗಕಣಗಳು ಹಾರಿದ ಬಳಿಕ ಹೂಗಳ ಅಂದವು ಕಡಿಮೆಯಾಗುತ್ತದೆ.


ವಾಮನ ರೂಪಿ ಈ ಹುರುಡೆ ಗಡ್ಡೆಗಳನ್ನು ಸಸ್ಯ ವಿಜ್ಞಾನಿಗಳು “Cyperus bulbosus ಎಂದು ಗುರುತಿಸುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಇನ್ನೊಂದು ಬಗೆಯ ಗಡ್ಡೆಯ ಹೆಸರು ಕೊನ್ನಾರಿ ಇದಕ್ಕೆ ಕರಿ ಹುರುಡೆಯ್ದೆಂದು ಸ್ಥಳೀಯವಾಗಿ ಹಾಗೂ ಭದ್ರಮುಷ್ಠಿಯೆಂದು ಸಂಸ್ಕೃತದಲ್ಲಿ ಹೆಸರಿದೆ. ಇದರ ಸಸ್ಯಶಾಸ್ತ್ರೀಯ ದ್ವಿನಾಮವು Cyperus rotundus” ಇದು ಆಯುರ್ವೇದದಲ್ಲಿ ಜನಪದ ವೈದ್ಯದಲ್ಲಿ ಪ್ರಸಿದ್ಧ  ಔಷಧ ಪರಿಕರವಾಗಿದೆ. ಆದರೆ ಹುರುಡೆಯ ಆಹಾರ ಮೌಲ್ಯ ಔಷಧ ಮೌಲ್ಯಗಳ ಬಗ್ಗೆ ಹೆಚ್ಚು ತಿಳಿದು ಬರುತ್ತಿಲ್ಲ. ಇದು ಗದ್ದೆಕೊಯಲಾದ ಬಳಿಕ ನೆಲದಡಿಯಲ್ಲಿ ಗಡ್ಡೆಗಳನ್ನು ಉಳಿಸಿಕೊಂಡು ಬದುಕುತ್ತದೆ 


       ಎಪ್ರಿಲ್ ಮೇ ತಿಂಗಳ ಸುಮಾರಿಗೆ ಮನ್ಸೂನು ಮಳೆಯ ಪ್ರಾರಂಭಕ್ಕೆ ಮೊದಲು ಬೇಸಾಯಗಾರರು ಗದ್ದೆಯನ್ನು ಹೂಡಿ ಮಣ್ಣನ್ನು ಸಡಿಲುಗೊಳಿಸುತ್ತಾರೆ. ಇದು ಹುರಡಿ ಕೊಯ್ಲಿಗೆ ಸುಸಂಧಿ. ರಜೆ ದೊರಕಿಸಿಕೊಂಡಿರುವ ಶಾಲಾ ಮಕ್ಕಳು ಹಾಗೂ ದನ ಕಾಯುವ ಮಕ್ಕಳು ಕೈಯಲ್ಲೊಂದು ಗರಟೆ, ಚೂಪಾದ ಕೋಲು, ಅಥವಾ ನೀಲಿ ಕಲ್ಲಿನ ಚಿಪ್ಪಿ ಹಿಡಿದು ಗದ್ದೆಗಿಳಿಯುತ್ತಾರೆ. ಅಲ್ಲಿಯೇ ಮರಳನ್ನು ಕೆದರಿ ಗಡ್ಡೆಗಳನ್ನು ತಮ್ಮ ಗರಟೆಗಳಲ್ಲಿ ತುಂಬಿಕೊಳ್ಳುತ್ತಾರೆ. ಕೆಲವು ಗಡ್ಡೆಗಳನ್ನು ಹಸಿಯಾಗಿ ಅಲ್ಲಿಯೇ ತಿನ್ನುತ್ತಾರೆ. 

ಮನೆಯ ಚಿಕ್ಕ ದೊಡ್ಡ ಮಕ್ಕಳೆಲ್ಲ ಒಟ್ಟಾಗಿ ಗಡ್ಡೆಯನ್ನು ಆಗೆಯಲು ಹೋದಾಗ ತಾವು ತಿಂದು ಹೆಚ್ಚಾದುದನ್ನು ತಾಯಿಯ ಮಡಲಿಗೆ ಸುರಿಯುತ್ತಾರೆ. ಇವು ಅವಳ ಚಿಕ್ಕ ಮಡಕೆಯನ್ನು ತುಂಬಿಕೊಳ್ಳುತ್ತವೆ. ಇವಳು ಈ ಗಡ್ಡೆಗಳನ್ನು ತೊಳೆದು ತುಸು ಉಪ್ಪು ಮತ್ತು ನೀರು ಸೇರಿಸಿ ಬೇಯಿಸುತ್ತಾಳೆ. ಬೆಂದ ಗಡ್ಡೆಗಳು ಸಿಹಿಗೆಣಸಿನ ರುಚಿಯನ್ನು ಹೊಂದಿದ್ದು ಇವು ಮನೆಮಂದಿಗೆಲ್ಲ ಆ ದಿನದ ವಿಶೇಷ ಖಾದ್ಯವಾಗುತ್ತವೆ. ಹಸಿಗಡ್ಡೆಗಳನ್ನು ಹಂಚಿನ ಮೇಲೆ ಹುರಿದಾಗ ಅದರ ರುಚಿ ಇನ್ನೊಂದು ತೆರನಾಗಿರುತ್ತವೆ. 

ಹುರುಡೆಯು ಬರಗಾಲದ ಸಮಯದಲ್ಲಿ ಬಡವರ ಕೈಗೆಟಕುವ ಆಹಾರವೆಂದು ಪ್ರಖ್ಯಾತಿಯಿದೆ. ಮೇ ತಿಂಗಳ ಹೊತ್ತಿಗೆ ಬಡವರ ಮನೆಯಲ್ಲಿ ಕಾಳುಕಡ್ಡಿಯ ಬರಗಾಲವಿರುತ್ತದೆ. ಆದ್ದರಿಂದ ಬಡವರು; ಬುಡಕಟ್ಟು ಜನರು ಕುಟುಂಬ ಸಮೇತ ಹುರುಡೆ ಆಗೆಯಲು ಹೋಗುತ್ತಾರೆ. ಹೂಟಿ ಮಾಡಿರುವದರಿಂದ ಗದ್ದೆಯ ಮೇಲ್ಮಣ್ಣು ಒಣಗಿರುತ್ತದೆ. ಹಲವಾರು ವರ್ಷಗಳಿಂದ ಈ ಗಡ್ಡೆಗಳನ್ನು ಆರಿಸಿ ಅನುಭವವಿರುವ ಈ ಬುಡಕಟ್ಟು ಕುಟುಂಬಗಳು ಮುಂಜಾನೆಯೆ ಗಡ್ಡೆಗಳಿಗಾಗಿ ಹೊರಡುತ್ತವೆ. ಹುರುಡೆಯ ಹುಲ್ಲು ಸುಳಿವು ಸಿಗದಂತೆ ಒಣಗಿ ಮಣ್ಣಾಗಿ ಹೋಗಿರುತ್ತವೆಯಾದರೂ ಗಡ್ಡೆಗಳನ್ನು ಹುಡುಕುವ ಕಲೆ ಇವರಿಗೆ ಗೊತ್ತಿರುತ್ತದೆ. ಈ ಹಿಂದೆ ಒಂದೊಂದು ಕುಟುಂಬವು ಮೂರು ನಾಲ್ಕು ಕೆ.ಜಿ.ಯಷ್ಟು ಹುರುಡೆಯನ್ನು ಆರಿಸಿ ಒಯುತ್ತಿದ್ದರೆಂದು ಜನ ತಿಳಿಸುತ್ತಾರೆ. 

ಜನಪದ ಅಡುಗೆ ದೋಸೆ:  ಈ ಹಸಿ ಹುರುಡೆಯನ್ನು ತೊಳೆದು ನಾಲ್ಕು ತಾಸು ನೆನೆಸಿದ ತುಸು ಅಕ್ಕಿಯೊಂದಿಗೆ ಅರೆದು (ರುಬ್ಬಿ) ಹಿಟ್ಟನ್ನು ತಯಾರಿಸಿ ದೋಸೆ ಎರೆದು ಉಣ್ಣುತ್ತಾರೆ. ಇದು ಬಡ ಬುಡಕಟ್ಟು ಜನರಿಗೆ ಮೃಷ್ಟಾನ್ನ ಭೋಜನ. 

ಗದ್ದೆಗಳಲ್ಲಿ ಹುರುಡೆಗಳ ಸಂಖ್ಯೆ ಅಪಾರ. ಆದರೆ ಇವುಗಳ ಗಾತ್ರ ಕಿರಿದು ಶ್ರಮಕ್ಕೆ ತಕ್ಕ ಉತ್ಪನ್ನವಲ್ಲ. ಆದರೂ ಹುರುಡೆಯನ್ನು  ಅಗೆದು ತಿನ್ನುವಲ್ಲಿ ದೋಸೆ ಮಾಡಿ ಮೆಲ್ಲುವಲ್ಲಿ ಇವರಿಗೆ ದೊರೆಯುವ ಆನಂದಕ್ಕೆ ಬೆಲೆ ಕಟ್ಟಲಾದೀತೆ?

ಇತ್ತೀಚೆಗೆ ಈ ಕಾಡು ಆಹಾರವನ್ನು ಸಂಗ್ರಹಿಸಿ ತಿನ್ನುವವರು ಕಂಡುಬರುತ್ತಿಲ್ಲ. ಕಳೆನಿವಾರಕಗಳ ಬಳಕೆಯಿಂದಾಗಿ ಗದ್ದೆಯಲ್ಲಿ ಹುರುಡೆ ಕೆಳಗೆ ಕುತ್ತು ಬಂದಿದೆ. ಇವುಗಳ ಬಗೆಗಿನ ಜನಜ್ಞಾನ ದೂರವಾಗುತ್ತಿದೆ. 



Monday 16 July, 2012

ನಮ್ಮ ಗಿಡ ಮರಬಳ್ಳಿಗಳು-ಕಾಡರಶಿನ


 ಕಾಡರಶಿನ -Curcuma Zedoaria Roscoe

      ಹೆಸರೇ ಸೂಚಿಸುವಂತೆ ಇದು ಊರಂಚಿನ ಕಾಡುಗಳಲ್ಲಿ ತಂತಾನೆ ಬೆಳೆದುಕೊಳ್ಳುವ ಅರಿಶಿನ ಕುಟುಂಬಕ್ಕೆ ಸೇರಿದ ಒಂದು ಪ್ರಭೇದ. ಕಚೋರ ಎಂಬ ಗಿಡವನ್ನು ತಿಳಿದಿರುವ ಕೆಲವರು ಕಾಡರಿಶಿನವನ್ನು ಕಚೋರವೆಂದು ಕರೆಯುವುದುಂಟು. ಯಾಕೆಂದರೆ ಇದು ನಾಡಿನಲ್ಲಿ ಬೆಳೆಯುವ ಕಚೋರದಂತೆ ಪರಿಮಳಭರಿತವಾದ ಗಡ್ಡೆಯನ್ನು ಹೊಂದಿ ಕಾಡರಿಶಿನವನ್ನು ಗುರುತಿಸುವುದು ಸುಲಭ. ಹೇಗೆ? ಎಲೆಯನ್ನು ನೋಡಿರಿ.ಎಲೆಗಳು ಅರಶಿನದ ಎಲೆಗಳನ್ನು ಹೋಲುತ್ತಿವೆಯಾದರೂ ಇದರ ಎಲೆಯ ಅರ್ಧ ಭಾಗದ ನಟ್ಟ ನಡುವೆ ಉದ್ದವಾಗಿ ಕಂದು ಬಣ್ಣದ ಪಟ್ಟಿಯಿರುತ್ತದೆ. ಬಿಸಿಲು ಹೆಚ್ಚಾದಾಗ ಈ ಬಣ್ಣ ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ಮಳೆಗಾಲದ ಪ್ರಾಂಭದಲ್ಲಿ ಎಲೆ ಹೊರಬರುವ ಮುನ್ನವೆ ಹೂ ಕಾಣಿಸಿಕೊಳ್ಳುತ್ತದೆ. ಹೂಗಳ ಬಣ್ಣ ಕೆಂಪು, ಮೇಲೆ ಗುಲಾಬಿ ಬಣ್ಣದ ದಪ್ಪ ರಕ್ಷಕ ದಳವು ದೊಡ್ಡದಾಗಿ ಕಾಣಿಸಿ ಕೊಳ್ಳುತ್ತದೆ.                   


      ಬೇಸಿಗೆಯಲ್ಲಿ ಗಿಡವು ಸಾಯುತ್ತದೆ. ಆಗ ಗಡ್ಡೆಯನ್ನು ಅಗೆದು ಅದರ ಮೇಲ್ಪದರನ್ನು ಚಾಕುನಿಂದ ಕೆತ್ತಿದರೆ ಒಳಗೆ ನೀಲಿ ಬಣ್ಣ ಕಾಣಿಸಿಕೊಳ್ಳುತ್ತದೆ. ಈ ನೀಲಿ ಬಣ್ಣದ ಗಡ್ಡೆ ತುಂಬ ಕಹಿ, ಆದರೆ ಇದರಲ್ಲಿ ಅತ್ಯಂತ ಬೆಳ್ಳಗಿನ ಮೈದಾ ಹಿಟ್ಟನ್ನು ಹೋಲುವ ಕಹಿಯಿಲ್ಲದ ಹಿಟ್ಟು ತುಂಬಿಕೊಂಡಿರುತ್ತದೆ. ಈ ಹಿಟ್ಟನ್ನು ಹೊರತೆಗೆಯುವದು ಜಾಣ್ಮೆಯ ಹಾಗೂ ಶ್ರಮದ ಕೆಲಸವಾಗಿರುತ್ತದೆ.

      ಕಾಡಿನ ಬಳಿಯ ಜನರು ಈ ಗಡ್ಡೆಗಳನ್ನು ಅಗೆದು ತಂದು ಗಡ್ಡೆಯ ಮೇಲ್ಭಾಗವನ್ನು ಹೆರೆಸಿ ತೆಗೆದು ಕೊಚ್ಚಿ ಅರೆಯುವ ಕಲ್ಲಿನಲ್ಲಿ ಅರೆಯುತ್ತಾರೆ. ಅರೆದು ತೆಗೆದ ಕಲಕವನ್ನು ಕೊಡಗಟ್ಟಲೆ ನೀರು ಹಿಡಿಯುವ ತಪ್ಪಲೆಗಳಲ್ಲಿ ಕದಡುತ್ತಾರೆ. ಕದಡಿದ ಕಲಕವನ್ನು ಕೆಲತಾಸು ಹಣಿಯ ಬಿಟ್ಟರೆ ಮೇಲುಗಡೆ ತನ್ನಲ್ಲಿಯ ಹಿಟ್ಟನ್ನು ನೀರಿಗೆ ಬಿಟ್ಟುಕೊಟ್ಟು ಸಿಪ್ಪೆಯ ಜಿಡುಕು ತೇಲುತ್ತಿರುತ್ತದೆ. ಇದನ್ನು ಹೊರಹಾಕುವ ಸಲುವಾಗಿ ಪಾತ್ರೆಯಲ್ಲಿಯ ನೀರನ್ನು ನೆಲಕ್ಕೆ ಮೆಲ್ಲಗೆ ಮರುಗುತ್ತಾರೆ ಪಾತ್ರೆಯ ತಳದಲ್ಲಿ. ಭಾರವಾದ  ಹಿಟ್ಟು ನಿಂತಿರುತ್ತದೆ. ಇದಕ್ಕೆ ಮತ್ತೆ ಕೊಡ ತುಂಬ ನೀರನ್ನು ಹಾಕಿ ಕದಡುತ್ತಾರೆ. ಇದು ಹಣಿದ ಬಳಿಕ  ಮತ್ತೆ ಮೇಲಿನ ನೀರನ್ನು ಮೆಲ್ಲಗೆ ಚಲ್ಲುತ್ತಾರೆ. ಈರೀತಿ ಮೂರು ನಾಲ್ಕು ಸಾರೆ ಮಾಡುತ್ತಾರೆ. ಕೊನೆಯಲ್ಲಿ ಹಿಟ್ಟನ್ನು ಅಡಕೆಯ ಹಾಳೆಗೆ ಹಾಕಿ ಬಿಸಿಲಿನಲ್ಲಿ ಮೂರು ನಾಲ್ಕು ದಿನ ಒಣಗಿಸುತ್ತಾರೆ. ಬಾಟ್ಲಿಯಲ್ಲಿ ಸಂಗ್ರಹಿಸಿ ರಕ್ಷಿಸುತ್ತಾರೆ. ಇದನ್ನು ಕಚರಾಹಿಟ್ಟು ಎನ್ನುವದುಂಟು. ಈ ಹಿಟ್ಟು ಆಹಾರದಂತೆ ಔಷಧದಂತೆ ಬಳಕೆಯಲ್ಲಿದೆ.

      ಒಂದೆರಡು ಚಮಚ ಕಚರಾ ಹಿಟ್ಟನ್ನು ಒಂದು ಕಪ್ ನೀರಿನಲ್ಲಿ ಗಂಟಿಲ್ಲದಂತೆ ಕದಡಿ ಕುದಿಯುತ್ತಿರುವ ಹತ್ತು ಕಪ್ ನೀರಿಗೆ ಹಾಕಿದರೆ ಕೆಲವು ಸೆಕೆಂಡುಗಳಲ್ಲಿ ಪಾಯಸ ಸಿದ್ಧವಾಗುತ್ತದೆ. ಅತಿಸಾರ ರೋಗಿಗಳು ಈ ಪಾಯಸಕ್ಕೆ ತುಸು ಉಪ್ಪು ಬೆರಸಿ ದಿನಕ್ಕೆ ನಾಲ್ಕಾರು ಬಾರಿ ಸೇವಿಸಿದರೆ, ರೋಗ ದೂರವಾಗುತ್ತದೆ. ಇದಕ್ಕೆ ಹಾಲು, ಸಕ್ಕರೆ, ಯಾಲಕ್ಕಿ ಪುಡಿ, ಗೇರುಬೀಜದ ತುಂಡುಗಳನ್ನು ಸೇರಿಸಿದರೆ  ಅತಿಥಿಗಳ ಜೊತೆ ಮೆಲ್ಲಬಹುದಾದ ರುಚಿಯಾದ ಖೀರು ತಯಾರಾಗುತ್ತದೆ. ಈ ಹಿಟ್ಟಿನಿಂದ ಸೂಪ್ ತಯಾರಿಸಬಹುದು. ಬೇಸಿಗೆಯಲ್ಲಿ ಬಾಳಕ ಮಾಡಿ ಸಂಗ್ರಹಿಸಿಕೊಳ್ಳಬಹುದು. ಈ ಗಿಡವನ್ನು ,ಇದರ ಹಿಟ್ಟನ್ನು ಒಮ್ಮೆ ಕಣ್ಣಾರೆ ಕಾಣಿರಿ. ಪಾಯಸ ಅಟ್ಟು ಸೇವಿಸಿರಿ. ಹಿಟ್ಟಿನ ತಯಾರಿಕೆಯಲ್ಲಿ ಹಳ್ಳಿಗರ ಆಸಕ್ತಿ ದೂರವಾಗುತ್ತಿದೆ. ನೀವು ಇದಕ್ಕೆ ಹೆಚ್ಚಿನ ಬೆಲೆಕೊಟ್ಟು ಕೊಂಡುಕೊಂಡು ತಯಾರಕರನ್ನು ಪ್ರೋತ್ಸಾಹಿಸಿರಿ.  ಇದನ್ನು ಎರ್ರಾಬಿರಿ ಕಿತ್ತು ಇದರ ಸಂತತಿ ನಾಶವಾಗದಂತೆ ಕಾಪಾಡಿಕೊಳ್ಳಲು ತಿಳಿಸಿರಿ.[ಹಿಟ್ಟು ತಯಾರಿಸುವಾಗ ಉಳಿದಿರುವ ಸಿಪ್ಪೆ ಸಣ್ಣಗಣ್ಣೆಗಳನ್ನು ಇದು ಬೆಳೆಯಲು ತಕ್ಕ ಪರಿಸರದ ನೆಲದಲ್ಲಿ ಚಲ್ಲದರೆ ಅಲ್ಲಿ ಗಿಡಗಳು ಹುಟ್ಟಿಕೊಳ್ಳುತ್ತವೆ ನೀವು ನಿಮ್ಮ ಪಾಳು ಭೂಮಿಯಲ್ಲಿ ನೆಟ್ಟು ಬೆಳೆಯಿರಿ. ಹಿಟ್ಟು ತಯಾರಿಸಿ ಬಳಸಿರಿ. ಭಾಗದ ನಡುವೆ ಕಡು ನೀಲಿಬಣ್ಣದ ಗೆರೆಯಿರುತ್ತದೆ. ಗಡ್ಡೆಯ ನೀಲಿ ಬಣ್ಣದ ಪದರು ಕಂಡುಬರುತ್ತದೆ. ಗಡ್ಡೆ ಕಹಿರುಚಿಯುಳ್ಳದ್ದು.
       
      ಗಿಡವು ಒಣಗಿದ ಬಳಿಕ ಗಡ್ಡೆಯನ್ನು ಕಿತ್ತು, ತೊಳೆದು, ಕೊಚ್ಚಿ, ಅರೆದು, ನೀರಿನಲ್ಲಿಟ್ಟು ಸೋಸಿ, ಬಿಳಿಯ ಹಿಟ್ಟನ್ನು ಪಡೆಯುತ್ತಾರೆ. ಈ ಹಿಟ್ಟಿನಲ್ಲಿ ಕಹಿಗುಣವಿರುವುದಿಲ್ಲ. ಆರಾರೂಟಿನ ಹಿಟ್ಟಿನಂತೆ ಬೆಳ್ಳಗಿರುತ್ತದೆ. ಕರಾವಳಿಯ ಹಳ್ಳಿಗರು ಇದನ್ನು ಕಚರಾ ಹಿಟ್ಟು ಎನ್ನುತ್ತಾರೆ. ಇದು ಆರಾರೂಟಿನ ಹಿಟ್ಟಿಗಿಂತ ಹೆಚ್ಚು ಔಷಧ ಗುಣಗಳನ್ನು ಹೊಂದಿದೆಯೆಂಬ ನಂಬಿಕೆಯಿದೆ.
       
     ಇದರ ಹಿಟ್ಟಿನಿಂದ ಗಂಜಿ, ಪಾಯಸ, ಕಡಿ, ಚಿಪ್ಸ ತಯಾರಿಕೆ ರೂಢಿಯಲ್ಲಿದೆ. ಅತಿಸಾರ, ಅಜೀರ್ಣಜ್ವರ, ವಿಷಮಜ್ವರಗಳಲ್ಲಿ ಇದರ ಗಂಜಿಯನ್ನು ನೀಡಿ ಆರೈಕೆ ಮಾಡುತ್ತಾರೆ.
       
      ಒಂದು ಚಿಕ್ಕ ಗಡ್ಡೆ ನೆಟ್ಟರೆ ಮುಂದಿನ ವರ್ಷ ಹತ್ತು ಚದುರ ಅಡಿ ಜಾಗಕ್ಕೆ ನೆಡಬಹುದಾದಷ್ಟು ಬೀಜದ ಗಡ್ಡೆ ದೊರೆಯತ್ತದೆ. ಹೆಚ್ಚು ಆರೈಕೆ ಕೇಳದ ಇದನ್ನು ನಿಮ್ಮ ನೆಲದಲ್ಲಿ ನೆಟ್ಟು, ಗಡ್ಡೆ ಪಡೆದು ಹಿಟ್ಟು ತಯಾರಿಸಿಕೊಳ್ಳಿರಿ. ಹಿಟ್ಟು ಮೂರ್ನಾಲ್ಕು ವರ್ಷ ಕೆಡುವುದಿಲ್ಲ. ಪೇಟೆಯಲ್ಲಿ 200 ರೂ.ಗೆ ಒಂದು ಕೆ.ಜಿ ದೊರೆಯಬಹುದಾದರೂ ಅದರಲ್ಲಿ ಕಲಬೆರಕೆ ಇದ್ದೀತು. ನಿಮ್ಮ ಆರೋಗ್ಯಕ್ಕಾಗಿ ಇದನ್ನು ನೆಟ್ಟು ಬೆಳೆಸಿ ಹಿಟ್ಟನ್ನು ಪಡೆಯುವದೇ ಉತ್ತಮ.







ನಮ್ಮ ಮರ ಗಿಡ ಬಳ್ಳಿಗಳು-ಗೇರಮರ


ಗೇರಮರ Anacardium occidentale. L.

      ಭಾರತದಲ್ಲಿ  ಮೂರುಬಗೆಯ  ಗೇರುಮರಗಳು ಪರಿಚಿತವಾಗಿವೆ.  ಮೊದಲನೆಯದಾಗಿ ಆಯುರ್ವೇದ ಕಾಲದಿಂದ ಪರಿಚಿತವಾಗಿರುವ ಕೇರು. ಇದನ್ನು ಕರಾವಳಿ ಪ್ರದೇಶದಲ್ಲಿ ಗುಡ್ಡೆಗೇರು ಎಂದು ಗುರುತಿಸುತ್ತಾರೆ. ಬಯಲು ಸೀಮೆಯಲ್ಲಿ ಇದರ ಬೆಳೆ ಹೆಚ್ಚು. ಎರಡನೆಯದು ಹೊಳೆಗೇರು. ಇದರ ರಸವು ಮನುಷ್ಯರ ಚರ್ಮಕ್ಕೆ ತಾಗಿದರೆ ಆ ಭಾಗವು ಬಾತುಕೊಳ್ಳುವದುಂಟು. ಮೂರನೆಯದು. ಕರಾವಳಿಯ ಹಳ್ಳಿಯಲ್ಲಿ ನೆಲೆಸಿರುವ ನೀವೆಲ್ಲರೂ ಬಲ್ಲ ಗೇರು ಮರ.  ಮಕ್ಕಳು ಒಣಗೇರು ಬೀಜವನ್ನು ಬಳಸಿ ಪಿನ್ನೆ ಎಂಬ ಆಟವನ್ನು ಆಡುತ್ತಾರೆ.     
    


      ಸಾಮಾನ್ಯವಾಗಿ. ಆಯಾ ಹಣ್ಣಿನ ಬೀಜವು ಅದರ ತಿರುಳಿನಲ್ಲಿರುತ್ತದೆ. ಇದು ಹಣ್ಣುಗಳ ನೈಸರ್ಗಿಕ ಗುಣ. ಆದರೆ ಗೇರಹಣ್ಣಿನ ಹೊರಗೆ ಇದರ ಬೀಜವಿರುತ್ತದೆ. ಇದು ಗೇರಹಣ್ಣಿನ ವಿಶಿಷ್ಟ ಗುಣ. ದಕ್ಷಿಣ ಅಮೇರಿಕಾದ ಬ್ರಾಜಿಲ್ ಇದರ ತವರೂರಾಗಿದ್ದು ಇದು ಭಾರತಕ್ಕೆ ವಲಸೆ ಬಂದ ಹಣ್ಣು ಎನ್ನಲಾಗುತ್ತದೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ಅಂದರೆ 1560 ರ ಹೊತ್ತಿಗೆ ಗೇರ ಮರವು ಭಾರತಕ್ಕೆ ಬಂದಿರಬೇಕೆಂದು ತಿಳಿಯಲಾಗುತ್ತದೆ. ಪೋರ್ಚುಗೀಸರು ಈ ಬೆಳೆಯನ್ನು ಭಾರತಕ್ಕೆ ತಂದರೆಂಬ ಅಭಿಪ್ರಾಯವಿದೆ. ಈ ಮಾತಿಗೆ ಗೇರಹಣ್ಣಿಗಿರುವ ಪರ್ಯಾಯ ನಾಮವಾದ ಗೋವೆಹಣ್ಣು ಎಂಬ ಹೆಸರು ಪುಷ್ಟಿಯನ್ನೀಯುತ್ತದೆ ಇದನ್ನು ಪಟ್ಟಣಗಳಲ್ಲಿ ಗೋಡಂಬಿ ಎಂದು ಗುರುತಿಸುತ್ತಾರೆ. ಇದಕ್ಕೆ ಇಂಗ್ಲೀಷಿನಲ್ಲಿ ಕಾಷ್ಯುಪ್ರುಟ ಕೊಂಕಣಿ, ಹಿಂದಿ, ಗುಜರಾಥಿ, ಉರ್ದು ಭಾಷೆಗಳಲ್ಲಿ ಕಾಜು ಎಂಬ ಹೆಸರುಗಳಿವೆ. .ಭಾರತದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಹೆಕ್ಟೇರು ಪ್ರದೇಶದಲ್ಲಿ ಗೇರನ್ನು ಬೆಳೆಸಲಾಗುತ್ತದೆ.ಮಲೆನಾಡು ಬಯಲ ನಾಡುಗಳಲ್ಲಿಯೂ ಇದನ್ನು ಬೆಳೆಸಲಾಗುತ್ತದೆ.ಕಲ್ಲು ಮರಳು ಮುಂತಾದ ಯಾವುದೇ ತರದ ಭೂಮಿಯಲ್ಲಿಯೂ ಇದು ಬೆಳೆಯುವುದಲ್ಲದೆ ಒಂದು ವರ್ಷ ನೀರು ಹನಿಸಿದರೆ ಸಾಕು. 4-5 ವರ್ಷಗಳಲ್ಲೆ ಗಿಡ ಫಲ ಕೊಡಲಾರಂಬಿಸುತ್ತದೆ. 
ಇದರ ಬೆಲೆಯುಳ್ಳ ಭಾಗ ಬೀಜದ ಒಳತಿರುಳು [ಪಪ್ಪು] ಇದು ವಿದೇಶಿ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ವಸ್ತು. ಒಳ ತಿರುಳನ್ನು ಕೂಡ ವಾಣಿಜ್ಯ ಕ್ಷೇತ್ರದಲ್ಲಿ ಗೇರುಬೀಜವೆಂದು ಗುರುತಿಸಲಾಗುತ್ತದೆ.

     ಇದು ವಿದೇಶದಿಂದ ನಮ್ಮ ದೇಶಕ್ಕೆ ಬಂದ ಬೆಳೆಯಾಗಿದ್ದರೂ ಕರಾವಳಿಯ ಸಾಂಸ್ಕೃತಿಕ ,ವೈದ್ಯಕೀಯ ಮತ್ತು ಆಹಾರ ಕ್ಷೇತ್ರಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಯುಗಾದಿ ಹಬ್ಬದ ದಿನ ಕರಾವಳಿಗ ದನಗಾಹಿಗಳು ಹಸಿರು ಬಣ್ಣದ ಹಸಿ ಗೇರು ಬೀಜವನ್ನು ಸುಲಿದು ಅದರ ಒಳ ಬೀಜವನ್ನು ತಮ್ಮ ತಮ್ಮ ಒಡೆಯನ ಮನೆಗೆ ಕೊಟ್ಟು ಉಂಡು ಹೋಗುವ ರೂಢಿ ಹಳ್ಳಿಗಳಲ್ಲಿದೆ.

     ಯುಗಾದಿ ಹಬ್ಬದ ದಿನ ಅಡುವ ಪಾಯಸಕ್ಕೆ ಹಸಿ ಗೇರು ಬೀಜವನ್ನು ಸುಲಿದು ಒಳಗಿನ ಹೂಂಗನ್ನು ಸೇರಿಸಿ ಅಡುವದು, ಒಣ ಗೇರು ಬೀಜಗಳನ್ನು ಹದವಾಗಿ ಸುಟ್ಟು ಒಡೆದು ಒಳಗಿನ ಹೂಂಗನ್ನು ಕೃಷ್ಣಾಷ್ಟಮಿಯ ದಿನದ ಪಂಚ ಕಜ್ಜಾಯಕ್ಕೆ ಸೇರಿಸಿ ಬೆರೆಸಿ ಕೃಷ್ಣನಿಗೆ ಅರ್ಪಿಸಿ ತಿನ್ನುವದು ಸಂಪ್ರದಾಯವಾಗಿದೆ. ಹೀಗೆ ಇದು ನಮ್ಮ ಧಾರ್ಮಿಕ ಆಚರಣೆಯಲ್ಲಿ ಸೇರಿಕೊಂಡಿದೆ. ತಿರುಳನ್ನು ಹಲ್ಲಿನಿಂದ ಜಗಿದು ತಿನ್ನುವಾಗ ಅದು ಅಸಾಧಾರಣ ರುಚಿಯನ್ನು ನೀಡುತ್ತದೆ. ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ತಿನ್ನ ಬೇಕೆನಿಸುತ್ತದೆ. ಹಸಿ ಹಸಿರು ಬೀಜವನ್ನು ಮೆಟಗತ್ತಿಯಲ್ಲಿ ಎರಡಾಗಿ ಸೀಳಿ ಒಳ ತಿರುಳನ್ನು ಕಡ್ಡಿಯ ಸಹಾಯದಿಂದ ಪಡೆಯುವುದುಂಟು. ಒಣಗಿ ಒಣಗಿ ತುಸು ಕೇಸರಿ ಬಣ್ಣಕ್ಕೆ ತಿರುಗಿದ ಬೀಜವನ್ನು ಹಿಡಿದು ಕಲ್ಲಿನಿಂದ ಪೆಟ್ಟು ಕೊಟ್ಟಾಗ ಬೀಜ ಒಡೆದು ಎರಡೂ ಹೋಳಾಗುತ್ತದೆ. ಕಡ್ಡಿಯಿಂದ ಅದರ ಬಿಳಿ ಬೀಜವನ್ನು ಹೊರತೆಗೆದು ಒರೆಸಿ ತಿನ್ನಬಹುದು ಅಥವಾ ಈ ಹೋಳುಗಳನ್ನು ನೆಲಕ್ಕೆ ಬಡಿದಾಗ ಒಳಗಿನ ಬೀಜದ ತಳ್ಳೆ ಹೊರ ಬೀಳುತ್ತದೆ. ಇದನ್ನು ಬಟ್ಟೆಯಿಂದ ಒರೆಸಿ ತಿನ್ನಬಹುದು 
    ಅಂಕೋಲೆಯ ಹಾಲಕ್ಕಿ ಒಕ್ಕಲಿಗ ಮಹಿಳೆಯರು ಗೇರು ಎಲೆಗಳನ್ನು ಕೊಟ್ಟೆಯಂತೆ ಸೆಟ್ಟು ಅದರಲ್ಲಿ  ಕಡ್ಡಿಯ ಸಹಾಯದಿಂದ ಸುಲಿದ ಗೇರು ಬೀಜವನ್ನು ತುಂಬಿ ಮಾರುತ್ತಾರೆ.
     ಹಿಂದೆ ಬೀಜವನ್ನು ನೆನೆಹಾಕಿ ಸಂಸ್ಕರಿಸಿ ತಿರುಳನ್ನು ತೆಗೆದು ಮಾರಾಟಕ್ಕೆ ಸಿದ್ಧಪಡಿಸುವ ಗ್ರಹ ಕೈಗಾರಿಕೆಗಳಿದ್ದವು. ಅಂಕೋಲಾ ತಾಲೂಕಿನ ಕೇಣಿ ಎಂಬ ಊರಿನ ಒಂದು ಜನ ವರ್ಗವು ಈ ಗುಡಿ ಕೈಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಈಗ ಊರೂರುಗಳಲ್ಲಿ ಗೇರಬೀಜ ಸಂಸ್ಕರಿಸುವ ಪ್ಯಾಕ್ಟರಿಗಳಿವೆ. ಇಲ್ಲಿ ಬೆಲೆ ಹೆಚ್ಚು ಇಲ್ಲಿಂದ ಸಾಕಷ್ಟು ಪ್ರಮಾಣದಲ್ಲಿ ಗೇರು ಬೀಜವು ಸರಬರಾಜಾಗುವದರಿಂದ  ಭಾರತೀಯರ ಅಡುಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೇರು ಬೀಜ(ಒಳ ಬೀಜ) ವು ಪಾಯಸ, ಬರ್ಪಿ, ಬಿಸ್ಕಿಟ್, ಪಲ್ಯದಲ್ಲಿ ಸಾಕಷ್ಟು ಬಳಕೆಯಾಗುತ್ತದೆ. ಕೇರಳದ ಆವಿಯಲ್ ಅಡಿಗೆಯಲ್ಲಿ ಹಾಗೂ ಕರಾವಳಿಯ ಸಮಾರಂಭದ ಪಲ್ಯದಲ್ಲಿ ಇದರ ಬಳಕೆ ಹೆಚ್ಚು. ಇದು ಪೌಷ್ಟಿಕಾಂಶವುಳ್ಳದ್ದೂ ಆಗಿದೆ.
    ಬೀಜದ ಸಿಪ್ಪೆ ಬಹು ಪ್ರಯೋಜನಕಾರಿ. ಸಿಪ್ಪೆಯಿಂದ ತೆಗೆದ ಎಣ್ಣೆಯನ್ನು ಗೆರೆಣ್ಣೆಯೆನ್ನುತ್ತಾರೆ. ಈ ಎಣ್ಣೆಯು ಒರಲೆಗಳಿಗೆ ಪ್ರತಿರೋಧ ಒಡ್ಡುತ್ತದೆ. ದೋಣಿ ಮುಂತಾದ ಮರದ ಸಾಮಾನುಗಳನ್ನು ಇದು ಹೆಚ್ಚು ಕಾಲ ಬಾಳಿಸುತ್ತದೆ.  ಕೆಂಪು ಹಳದಿ ಬಣ್ಣಗಳಲ್ಲಿ ದೊರೆಯುವ ಇದರ ಹಣ್ಣು ಬಹು ಆಕರ್ಷವಾಗಿ ಕಾಣುತ್ತದೆ. ಗೋವಾದಲ್ಲಿ ಗೇರು ಹಣ್ಣಿನಿಂದ ಪೆನ್ನಿ ಎಂಬ ಹೆಸರಿನ ಸರಾಯಿ ತಯಾರಿಸುತ್ತಾರೆ. ತಾಂಜಾನಿಯಾದಲ್ಲಿ ಗೇರು ಹಣ್ಣನ್ನು ಒಣಗಿಸಿ ಆಹಾರಕ್ಕಾಗಿ ರಕ್ಷಿಸಿಕೊಳ್ಳುತ್ತಾರೆ. ಆದರೆ ಈ ಹಣ್ಣು ಭಾರತದಲ್ಲಿ 
ಜನಪ್ರಿಯವಾಗಿಲ್ಲ. ಇದಕ್ಕೆ ಮುಖ್ಯ  ಕಾರಣ ಅದರಲ್ಲಿಯ ಒಂದು ತರದ ಒಗರು ಹಾಗೂ ನಾಲಿಗೆ ಮತ್ತು ಗಂಟಲು ತುರಿಸುವ ಗುಣ.
     ಆದರೆ ಗೇರು ಹಣ್ಣಿನಲ್ಲಿ ಅನೇಕ ರೋಗ ನಿವಾರಕ ಶಕ್ತಿಯೂ ಪೌಷ್ಟಿಕಾಂಶವೂ ಇರುವುದೆಂಬುದನ್ನು ಬಹುಜನರು ಅರಿತಿರುವುದಿಲ್ಲ. ಹಣ್ಣಿನಲ್ಲಿ ಶರ್ಕರಪಿಷ್ಟಾದಿಗಳು  ಸಸಾರಜನಕ, ಕೊಬ್ಬು ಕ್ಯಾಲ್ಸಿಯಂ  ರಂಜಕ  ಹಾಗೂ ಸಿ.ಜೀವಸತ್ವಗಳಿವೆ.. ಅನುಭವಿ ವೈದ್ಯರು ಗೇರುಹಣ್ಣಿನ ವೈದ್ಯಕೀಯ ಗುಣಗಳನ್ನು ತಿಳಿಸುತ್ತಾರೆ. ಅವರ ಹೇಳಿಕೆಯಂತೆ. ಗೇರುಹಣ್ಣಿನ ರಸಕ್ಕೆ ಕೊಂಚಭಾಗ ಜೇನುತುಪ್ಪವನ್ನು ಬೆರೆಸಿ, ನಿತ್ಯ ಒಂದು ಬಾರಿ ಸೇವಿಸುವದರಿಂದ ಅತಿಸಾರ, ಕಡಿಮೆಯಾಗಿ ಮೂತ್ರ ವಿಸರ್ಜನೆಯಾಗುತ್ತದೆ. ಹಾಗೂ ಮೂತ್ರದಲ್ಲಿರುವ ಅತಿಯಾದ ಆಮ್ಲತೆ ಹುಡುಗಿಯರಲ್ಲಿ ನೋವಿನಿಂದ ಕೂಡಿದ ಋತುಸ್ರಾವ ಇತ್ಯಾದಿಗಳು ನಿವಾರಣೆಯಾಗುತ್ತವೆಯೆಂಬ ಜನಾಭಿಪ್ರಾಯಗಳಿವೆ. ದನಗಳು ಗೇರ ಹಣ್ಣನ್ನು ಪ್ರೀತಿಯಿಂದ ತಿನ್ನುತ್ತವೆ. ದನಗಳ ನೆಗಡಿ ರೋಗಕ್ಕೆ  ಗೇರಹಣ್ಣಿನ ಸರಾಯಿ ಉಪಯೋಗಿಸಲಾಗುತ್ತದೆ
 
     ತಿನ್ನುವದಕ್ಕಾಗಿ ಗೇರುಹಣ್ಣು ಬಹುಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತಿದ್ದರೂ ಹಳ್ಳಿಗಳಲ್ಲಿ ಜನಪದ ರೀತಿಯ ಅಡಿಗೆಗಳಲ್ಲಿ ಇದು ತುಸು ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.. 
   
  ಪೂರ್ಣ ಹಣ್ಣಾಗಲು ಒಂದೆರಡು ದಿನ ಇರುವಾಗ ದೊರೆಯುವ ಬಲಿತ ಕಾಯಿಯನ್ನು ಬಂಡಿ ಎನ್ನುತ್ತಾರೆ. ಇದನ್ನು ಕೆಂಡದಲ್ಲಿ ಹುಗಿದು ಕೆಲ ಹೊತ್ತು ಇಟ್ಟರೆ ಮೇಲಿನ ಭಾಗ ಸುಟ್ಟು ಕಪ್ಪಾಗುತ್ತದೆ. ಅದು ಆರಿದ ಮೇಲೆ ಒಳ ತಿರುಳನ್ನು ಸುಟ್ಟ ಬದನೆಕಾಯಿಯನ್ನು ಅಡುವಂತೆ ಬಜ್ಜಿ ಹಸಿ ಗೊಜ್ಜುಗಳನ್ನು ಅಡುತ್ತಾರೆ. ಬಲಿತ ಹಣ್ಣುಗಳಿಂದ ತಯಾರಿಸುವ ಇಡ್ಲಿ ದೋಸೆಗಳು ಪರಿಮಳ ಮತ್ತು ರುಚಿಯಿಂದ ಮೋಹಗೊಳಿಸುತ್ತವೆ. ಗೇರು ಬೀಜದ ಸೊನೆ ಚರ್ಮ ಹಾನಿಕಾರಕ. ಚರ್ಮವನ್ನು ಅರಿಶಿನ ನೀರಿನಿಂದ ತೊಳೆದರೆ ಇದರ ಹಾನಿಕಾರಕ ಗುಣ ಕಡಿಮೆಯಾಗುತ್ತದೆ. 
 
ಚಿಗುರನ್ನು ಕೂಡ ತಂಬುಳಿಗೆ ಬಳಸಬಹುದು. ಎಲುವು ಕೂಡಿಸುವ ಮನೆ ಮದ್ದುಗಾರರು. ನಾಡ ವೈದ್ಯರು ಇದರ ತೊಗಟೆಗಳನ್ನು ಬ್ಯಾಂಡೆಜಾಗಿ ಬಳಸುತ್ತಾರೆ. ಗೇರು ಕಟ್ಟಿಗೆ ಮತ್ತು ಒಣ ಎಲೆ ಉತ್ತಮ ಉರುವಲು. ಊರಲ್ಲಿ ಗೇರು ಬೆಳೆ ಪ್ರಾರಂಭವಾದಾಗ ಹಳದಿ ಪುರದಲ್ಲಿ ಗೇರು ಬಂಡಿ ತೇರು ನಡೆಯುತ್ತದೆ. ತೇರಿಗೆ ಗೇರು ಬಂಡಿ ಕಟ್ಟುತ್ತಾರೆ.
ಜಗತ್ತಿನ ಬಹುದೂಡ್ಡ ಗೇರು ಮರವು ಬ್ರಾಜಿಲ್ದಲ್ಲಿದ್ದು 81 ಸಾವಿರ ಚದುರ ಅಡಿ ವಿಸ್ತಾರವನ್ನು ವ್ಯಾಪಿಸಿಕೊಂಡಿರುವುದಾಗಿ ತಿಳಿದುಬರುತ್ತದೆ.
ನಿಮ್ಮ ಮನೆಯ ತೋಟದಲ್ಲಿ ಸ್ಥಳ ವಿದ್ದರೆ ಗೇರುಗಿಡವೊಂದನ್ನು ಬೆಳೆಸಿರಿ 


Sunday 15 July, 2012

ನಮ್ಮ ಗಿಡ ಮರ ಬಳ್ಳಿಗಳು-ಬಿಂಬಲಕಾಯಿ


 ©A§®PÁ¬Ä.Avrrhoa bilimbi

   EzÀÄ EAqÉÆãÉùAiÀiÁ, ªÀįÉùAiÀiÁ ªÀÄÆ®zÉÝAzÀÄ ¸À¸Àå «eÁÕ¤UÀ¼ÀÄ ºÉüÀÄvÁÛgÉ. C°èAzÀ EzÀÄ CeÉðAn£Á, D¸ÉÖçðAiÀiÁ ¨Áæf¯ï, PÉÆîA©AiÀÄ, PÀÆå¨Á, UÀAiÀiÁ£Á, ¨sÁgÀvÀ, ²æîAPÁ, ªÀÄÄAvÁzÀ zÉñÀUÀ½UÉ ºÀgÀrvÀÄ, J£À߯ÁUÀÄvÀÛzÉ. EAqÉÆãÉùAiÀiÁ, ªÀįÉùAiÀiÁ ²æîAPÁ dªÀiÁPÁ ¨sÁgÀvÀUÀ¼À°è EzÀgÀ ºÉ¸ÀgÀÄ ©°A©. EzÀg ¸À¸Àå±Á¹ÛçÃAiÀÄ ºÉ¸ÀgÀÄ CªïgÉÆ©°A©[Avrrhoa bilimbi] EzÀgÀ°èAiÀÄ ªÉÆzÀ® ¨sÁUÀªÀÅ CgÉéAiÀÄ ªÀÄÆ®zÀ ªÉÊzÀå£À ºÉ¸ÀgÀÄ. PÀ£ÀßqÀ PÀgÁªÀ½AiÀÄ°è ©A§®PÁ¬Ä. ©A§Ä½PÁ¬Ä JA§ ºÉ¸ÀgÀÄUÀ½AzÀ EzÀÄ ¥ÀjavÀ. PÉÆAPÀtÂAiÀÄ°è ©A§Ä¼ï ªÀÄgÁpAiÀÄ°è ©A§Ä¯Á JAzÀÄ ºÉ¸ÀgÀÄUÀ½ªÉ. EzÀPÉÌ ªÀUÀÎgÀuÉ J¯ÉAiÀÄ VqÀzÀ ºÁUÉ UÀj ªÀiÁzÀjAiÀÄ J¯ÉUÀ¼ÀÄ. ºÀ®¹£À ªÀÄgÀzÀ ºÁUÉ EzÀÄ vÀ£Àß VqÀzÀ ¨ÉÆqÉØUÉ ºÀÆ ºÀtÄÚ vÀ¼ÉAiÀÄÄvÀÛzÉ .VqÀ  ºÀƪÀÅ PÁ¬Ä ©mÁÖUÀ ªÀÄ£ÉAiÀÄ ªÀÄÄAzÉ C®APÁjPÀ VqÀªÁV ªÀÄ£ÉUÉ ±ÉÆèsÉ vÀgÀÄvÀÛzÉ. ©¹®Ä PÁ®zÀ°è EzÀPÉÌ ºÀÆ PÁ¬ÄUÀ¼À ¸ÀA¨sÀæªÀÄ. d£À F PÁ¬ÄUÀ¼À ºÉaÑ£À G¥ÀAiÉÆÃUÀ ªÀiÁrPÉƼÀîzÀ PÁgÀt EzÀgÀ ºÀtÄÚUÀ¼ÀÄ VqÀzÀ §ÄqÀzÀ°è gÁ²AiÀiÁV ©zÀÄÝ PÉƼÉvÀÄ ªÀÄuÁÚUÀÄvÀÛªÉ. PÀgÁªÀ½UÀgÀÄ EzÀ£ÀÄß ºÀÄt¸É ºÀtÄÚ mÉƪÉÄmÉÆà ºÀtÄÚ §zÀ°UÉ C®à¥ÀæªÀiÁtzÀ°è §¼À¸ÀÄwÛzÁÝgÉ. «ÄãÀÄ §¼ÀÄÑUÀ¼À ¥À¼ÉÝUÉ EzÀ£ÀÄß ºÀ¹AiÀiÁV DAiÀiÁ ªÀĸÁ¯ÉAiÀÄ eÉÆvÉ CgÉzÀÄ PÀÄ¢¹zÀgÉ ¥À¼ÉÝUÉ ªÀÄgÉAiÀÄzÀ gÀÄaAiÀÄ£ÀÄß PÉÆqÀÄvÀÛzÉ. EzÀgÀ C¥ÉàºÀĽ C£ÀßzÀ HlzÀ ¸ÉÆUÀ¸À£ÀÄß ºÉaѸÀÄvÀÛzÉ.
      C¥ÉàºÀĽAiÀÄ£ÀÄß CqÀĪÀ «zsÁ£À ¸ÀÄ®¨sÀ. ¤ÃªÀÇ ¤ªÀÄä »jAiÀÄgÀ ¸ÀºÁAiÀÄ¢AzÀ EzÀ£ÀÄß CqÀ§ºÀÄzÀÄ. CAiÀÄÄÝ ©A§è PÁ¬ÄUÀ¼À£ÀÄß  ªÀÄvÀÄÛ MAzÀÄ ºÀ¹ªÉÄt¸À£ÀÄß ¸ÀtÚUÉ PÉÆaÑj. JgÀqÀÄ PÀ¥ï ¤Ãj£À°è ¨ÉìĹj. vÀt¹, £ÀÄj¬Äj. EzÀPÉÌ LzÁgÀÄ PÀ¥ï PÀÄrAiÀÄĪÀ vÀtÂÚÃgÀÄ ¸ÀÄgÀÄ«j. ªÀÄÄPÁÌ®Ä ZÀªÀÄZÀ G¥ÀÅöà MAzÀÄ ZÀªÀÄZÀ ¨É®è ¸ÉÃj¹j.

     ªÀUÀÎgÀuÉ ¸ÀªÀn£À°è MAzÀÄ ZÀªÀÄZÀ CqÀÄUÉ JuÉÚ, MAzÀÄ MtªÉÄt¹£À £Á¯ÁÌgÀÄ vÀÄAqÀÄ ,¸Á¹ªÉ ºÀvÀÄÛ PÁ¼ÀÄ, MAzÀÄ G¢Ý£À ¨ÉüÉAiÀĵÀÄÖ EAUÀÄ, ZÀÆgÀÄ ªÀiÁrzÀ PÀj¨Éë£É¯É MAzÀÄ UÀj, ºÀvÀÄÛ PÁ¼ÀÄ G¢Ý£À ¨ÉÃ¼É ¸ÉÃj¹ ªÀUÀÎgÀuÉ ªÀiÁrj. C¥Éà ºÀĽ ¹zÀÞ. EzÀ£ÀÄß HlzÀ ¸ÀAzÀ¨sÀðzÀ ¥ÉÃAiÀĪÁV ªÀÄvÀÄÛ C£Àß PÀ®¹ GtÚ®Ä §¼À¸ÀÄvÁÛgÉ.
©A§® PÁ¬ÄUÀ¼À£ÀÄß MtV¹ ºÀĽAiÀÄ£ÀÄß  vÀAiÀiÁj¹PÉƼÀÄîªÀ ¥ÀzÀÞw C®è°è PÀAqÀħgÀÄvÀÛzÉ. EzÀ£ÀÄß ¤ÃªÀÇ C£ÀĸÀj¸À§ºÀÄzÀÄ.
        ©A§®À PÁ¬ÄUÀ¼À£ÀÄß CqÀتÁV vɼÀîUÉ £ÀPÀëvÁæPÁgÀzÀ°è PÀvÀÛj¹Gj©¹°£À°è §mÉÖAiÀÄ ªÉÄÃ¯É ºÀgÀrj. CgɧgÉ MtVzÁUÀ CzÀgÀ ªÉÄÃ¯É vÀĸÀÄ ºÀÄr G¥ÀÅöà GzÀÄj¸À§ºÀÄzÀÄ. ºÀUÀÄgÀ CªÀ®QÌAiÀÄAvÀºÀ Mt ºÀĽ zÉÆgÉAiÀÄÄvÀÛzÉ. ªÀµÀð UÀlÖ¯É ¨Á¼ÀÄvÀÛzÉ. ªÀļÉUÁ®zÀ°è PÁqÀÄ PɸÀ«£À ¸ÉƦà£À PÀgÀUÀ°UÉ EzÀÄ vÀPÀÌ eÉÆÃrAiÀiÁUÀÄvÀÛzÉ. EzÀÄ PÀgÀUÀ°AiÀÄ°èAiÀÄ ¨Á¬Ä vÀÄjPÉ UÀÄtªÀ£ÀÄß ºÉÆÃUÀ¯Ár¸ÀĪÀzÀ®èzÉ PɸÀÄ«£À ¸ÉÆ¥Àà£ÀÄß gÀ¸ÀªÀvÁÛV PÀgÀV¸ÀÄvÀÛzÉ. EzÀPÉÌ PÀqÉè ¨ÉüÉAiÀĵÀÄÖ ¸ÀtÚ ZÀÆgÀĪÀiÁrzÀ ¨É¼ÀÄî½îAiÀÄ£ÀÄß vÀĸÀÄ JuÉÚAiÀÄ°è ¨ÉìĹ ¸ÉÃj¹zÀgÉ  PÀgÀUÀ°AiÀÄ ¥ÀjªÀļÀ UÀqÀzÁÝVgÀÄvÀÛzÉ. UÉÃgÀÄ ©ÃdzÀ  ZÀÆgÀÄUÀ¼À£ÀÄß JuÉÚAiÀÄ°è §AUÁgÀ §tÚ §gÀĪÀAvÉ ºÀÄjzÀÄ ¸ÉÃj¹zÀgÉ ªÀÄPÀ̼ÀÆ EzÀ£ÀÄß ªÉÄaÑ GtÄÚvÁÛgÉ. ¥Á®Pï ¥À¤Ãgï JA§ CqÀÄUÉAiÀÄ£ÀÄß «ÄÃj¸ÀĪÀ F CqÀÄUÉUÉ ¸Áxï ¤ÃqÀĪÀ ©A§® PÁ¬Ä ªÀÄvÀÄÛ CzÀgÀ ºÀĽAiÀÄ£ÀÄß HlzÀ ºÉÆwÛUÉ £É£ÉAiÀĨÉÃPÀÄ.
 ©A§® PÁ¬ÄUÀ¼À£ÀÄß PÉÆaÑ SÁgÀ ¸ÉÃj¹ EAV£À ªÀUÀÎgÀuÉ ªÀiÁrzÀgÉ ¢ÃrÃgï G¦à£À PÁ¬Ä ¹zÀÞ.  ¨É¼ÉzÀ PÁ¬ÄUÀ¼À gÀ¸À »Ar K®QÌ ªÀÄvÀÄÛ ¹» ¨Égɹ ¥Á£ÀPÀ vÀAiÀiÁj¹ ¸Éë¹j.ºÉZÀÄÑ PÁ¬ÄUÀ¼ÀÄ zÉÆgÉAiÀÄĪÁUÀ Erà PÁ¬ÄUÀ¼À£ÀÄß ¨ÉìĹ CgÉzÀÄ G¥ÀÅöà ¸ÉÃj¹ gÀQë¹PÉÆAqÀgÉ PÁ¬ÄUÀ¼ÀÄ zÉÆgÉAiÀÄzÀ ¸ÀAzÀ¨sÀðzÀ°è §¼À¸À§ºÀÄzÀÄ.
      PÀ£ÁðlPÀzÀ PÀgÁªÀ½AiÀÄ®èµÉÖà C®è. .¨sÁgÀvÀzÀ ºÀ®ªÉqÉ ºÁUÀÆ dUÀwÛ£À d£À¥ÀzÀ CqÀÄUÉAiÀÄ°è ªÀÄvÀÄÛ  d£À¥ÀzÀ OµÀzsÀzÀ°èÀ EzÀgÀ ¸ÁPÀµÀÄÖ §¼ÀPɬÄzÉ. ªÀįÉòAiÀiÁzÀ°è §ºÀ¼À ¹»AiÀiÁVgÀĪÀ  EvÀgÀ ºÀtÄÚUÀ¼À eÉÆvÉ EzÀgÀ PÉ®ªÀÅ §°vÀ PÁ¬ÄUÀ¼À£ÀÄß ¸ÉÃj¹ gÀ¸ÁAiÀÄ£À vÀAiÀiÁj¸ÀÄvÁÛgÉ.
 ¦°¥sÁ¬Ä£Àì£À°è J¯ÉUÀ¼À PÀµÁAiÀĪÀ£ÀÄß ZÀªÀÄðgÉÆÃUÀPÉÌ §¼À¸ÀÄvÁÛgÉ. F PÀµÁAiÀĪÀÅ ¨Á¼ÀAwAiÀÄjUÉ mÉƤPï JAzÀÄ w½AiÀįÁUÀÄvÀÛzÉ. PÉ®ªÀÅ  zÉñÀUÀ¼À°è EzÀÄ PÀ¥sÀPÉÌ ªÀÄzÁÝVAiÀÄÆ §¼ÀPÉAiÀÄ°èzÉ. §mÉÖAiÀÄ PÀ¯É vÉUÉAiÀÄ®Ä  EzÀgÀ gÀ¸ÀzÀ §¼ÀPɬÄzÉ. EzÀgÀ°è ¸ÁPÀµÀÄÖ PÉ°êAiÀÄA EgÀÄvÀÛzÉ. DºÁgÀªÁV OµÀzsÀªÁV d£ÀjUÉ ¥ÀæAiÉÆÃd£ÀPÁjAiÀiÁzÀ ©A§¯ PÁ¬ÄAiÀÄ VqÀ vÀ£Àß CAzÀzÀ PÁgÀt¢AzÀ ªÀÄ£ÉAiÀÄAUÀ¼ÀzÀ C®APÁgÀ VqÀªÁV ¨É¼ÉAiÀÄĪÀ CºÀðvÉAiÀÄ£ÀÄß ºÉÆA¢zÉ. ºÀtÄÚ PÁ¬Ä ºÀÆ ©mÁÖUÀ EzÀÄ ªÀÄPÀ̽UÉ CZÀÄѪÉÄZÀÄÑ. F VqÀ ¤ªÀÄä ªÀÄ£ÉAiÀÄAUÀ¼ÀzÀ°èzÉAiÉÄÃ? 

Saturday 14 July, 2012

ಕಾಯಕ ಮಾಡಿ ಕಾಯತೇದ ಕರ್ಕಿಯ ಗುರ್ಕಜ್ಜ ಒಂದು ನೆನಪು


ಕಾಯಕ ಮಾಡಿ ಕಾಯತೇದ
         ಕರ್ಕಿಯ ಗುರ್ಕಜ್ಜ  ಒಂದು ನೆನಪು
  
 ಈ ಲೇಖನವು ರವಿವಾರ ಜನವರಿ 1985ರಲ್ಲಿ`ನೆನಹು' ಲೇಖನ ಮಾಲೆಯಲ್ಲಿ ಪ್ರಕಟಗೊಂಡಿತ್ತು.  ಪತ್ರಿಕೆಯ ಹೆಸರು ನೆನಪಿಲ್ಲ. ಲೇಖನದ ಝೆರಾಕ್ಸ ಮಾತ್ರ ನನ್ನ ಬಳಿಯಿದೆ. ಅದನ್ನು ಮತ್ತೊಮ್ಮೆ ಈ ದಿನ ಬ್ಲಾಗ್ ನಲ್ಲಿ ನನ್ನ 70ನೇಯ ವರ್ಷದ ಈ ದಿನ ಪ್ರಕಟಿಸುತ್ತಿದ್ದೇನೆ.

  ನಮ್ಮ ದೇಶದ  ಕೆಲವು ರಾಜಮಾರ್ಗಗಳ ಎಡ ಬಲಕ್ಕೆ ಅಲ್ಲಲ್ಲಿ ನೆಟ್ಟು ಬೆಳೆಸಿದಂತಿರುವ ದೊಡ್ಡ ದೊಡ್ಡ ಸಾಲು ಮರಗಳನ್ನು ಕಾಣುತ್ತೇವೆ. ಆಗ ಈ ಮರಗಳನ್ನು ನೆಟ್ಟವರು ಯಾರು ಎಂಬ ಪ್ರಶ್ನೆ ಕುತೂಹಲಗೊಂಡ ನಮ್ಮ ಮುಂದೆ ನಿಲ್ಲುತ್ತದೆ. ಹಳೆಯ ಸಂಗತಿ ಬಲ್ಲವರು ಆಗ ನಮ್ಮ ಬಳಿಯಿದ್ದರೆ ನಮ್ಮ ಈ ಪ್ರಶ್ನೆಗೆ ಉತ್ತರವಾಗಿ ಒಂದು ಸುಂದರವಾದ ಕತೆ ಹೇಳುತ್ತಾರೆ.
   
  ' ಬಹು ಹಿಂದೆ ಒಬ್ಬ ಸೈನಿಕ  ಯುದ್ದದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ. ಆತ ಕೈಯೂರಿ ನಡೆಯುತ್ತ ತನ್ನ ಊರು ಮುಟ್ಟಿದ. ಅವನು ಅಂತಹ ಸ್ಥಿತಿಯಲ್ಲಿದ್ದರೂ ತನ್ನ ದೇಶದ ಸಲುವಾಗಿ ಏನಾದರೊಂದು ಒಳ್ಳೆಯ ಕೆಲಸ ಮಾಡಬೇಕೆಂಬಾಸೆ ಅವನಲ್ಲಿ ಜೀವಂತವಾಗಿತ್ತು. ಆತ ಗಿಡ ನೆಡುವ ಕೆಲಸವನ್ನು ಆರಿಸಿಕೊಂಡ. ತನ್ನ ಮರಣ ಕಾಲದವರೆಗೂ ಅವಿರತವಾಗಿ ಗಿಡ ನೆಡುತ್ತಲೇ ನಡೆದ. ಅವನು ನೆಟ್ಟ ಗಿಡಗಳೇ ಇಂದು ನಾವು ಕಾಣುವ ಸಾಲು ಮರಗಳು" ಎನ್ನುತ್ತಾರೆ.

   ಹೊನ್ನಾವರದ ಕರ್ಕಿಯಲ್ಲಿ ಸುಮಾರು ಹದಿನೈದು ವರ್ಷ ವಾಸಿಸಿ ಕಾಯಕ ಮಾಡಿ ಕಾಯ ತೇದು ಮರೆಯಾದ ಗುರ್ಕಜ್ಜ ಬಾಳಿದ ಜೀವನ ಕ್ರಮವನ್ನು ಕಣ್ಣಾರೆ ಕಂಡ ನನಗೆ ಈ ಮೇಲಣ ಕತೆ ಸತ್ಯ ಸಂಗತಿಯಾಗಿರಲೂ    ಬಹುದು ಎನಿಸುವುದುಂಟು.

    ಗುರ್ಕಜ್ಜನ ನಿಜ ಹೆಸರೇನು? ಆತ ಇಲ್ಲಿಗೆ ಎಲ್ಲಿಂದ ಬಂದ? ಇವನ ತಂದೆ ತಾಯಿ ಬಂಧು ಬಳಗ ಯಾರು? ಅರಿತವರಿಲ್ಲಿಲ್ಲ ಆತ ಸೈನ್ಯದಲ್ಲಿದ್ದವನೆಂದು ಕೆಲವರ ಊಹೆ. ನೇಪಾಳದ ಗೂರ್ಕರ ಜನಾಂಗದವ ನಿರಬಹುದೆಂಬುದು ಬಹು ಜನರ ಅಭಿಪ್ರಾಯ. ಹೀಗಾಗಿ ಆತ ಗುರ್ಕಜ್ಜನೆಂದು ಹೆಸರಾದ. ಆತನಿಗೆ ಹಿಂದಿ ಯಂತಹ ಭಾಷೆಯೊಂದು ಬರುತ್ತಿತು. ಕನ್ನಡ ಬರುತ್ತಿರಲಿಲ್ಲ. ಈ ಭಾಷಾ ಆಡಚಣೆಯಿಂದಲೋ, ಹುಟ್ಟು ಅಂರ್ತಮುಖಿಯಾಗಿರುವುದರಿಂದಲೋ  ಆತ ಜನರೊಂದಿಗೆ ಬೆರೆಯುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸ ವಾಯಿತು. ಅನೇಕ ವರ್ಷಗಳಿಂದ ಅವನು  ತೊಡುತ್ತಿದ್ದುದು ಒಂದು ನೀಲಿ ಚಡ್ಡಿ ಹಾಗೂ ಶರ್ಟಿನಂತಹ ಒಂದು ಅಂಗಿ. ಇತ್ತೀಚಿನ ಕೆಲವು ತಿಂಗಳು ಆತನ ಬಳಿ ಆ ಅಂಗಿಯೂ ಇರಲಿಲ್ಲವೇನೋ. ಒಳ ಚಡ್ದಿ ಮಾತ್ರ ಧರಿಸುತ್ತಿದ್ದ.

  ಗುರ್ಕಜ್ಜ  ಭಿಕ್ಷುಕನಾಗಿ  ಇಲ್ಲಿಗೆ  ಬಂದನೋ  ಏನೋ.  ಆದರೆ  ಕರ್ಕಿಯಲ್ಲಿ  ಆತ  ಭಿಕ್ಷುಕನಾಗಿ  ಬಾಳಲಿಲ್ಲ . ಆಲಸಿಯಾಗಿ  ಮೂಲೆ  ಹಿಡಿಯಲಿಲ್ಲ. ಅವನ  ಬಳಿ  ಭಿಕ್ಷಾ ಪಾತ್ರೆಯೂ ಇರಲಿಲ್ಲ. ಕಂತೆ ಬೊಂತೆ ಜೋಳಿಗೆಗಳೂ ಇರಲಿಲ್ಲ. ಹದಿನೈದು  ವರ್ಷಗಳ  ಹಿಂದೆಯೇ  ಎಪ್ಪತ್ತು ವರ್ಷ  ದಾಟಿರಬಹುದಾದ  ಆ  ಹಳದಿ  ಬಣ್ಣದ  ಗಿಡ್ಡ ದೇಹದ ಹಣ್ಣು ಹಣ್ಣು  ಮುದುಕ  ಗುರ್ಕಜ್ಜ  ತನ್ನ ಉಪಜೀವನಕ್ಕೆ ಆರಿಸಿಕೊಂಡ ದಾರಿ ಮಾತ್ರ  ಅಪೂರ್ವ .ಅದ್ವಿತೀಯ. ಆತ  ಆರಿಸಿಕೊಂಡ  ವೃತ್ತಿ ಅಂಗಡಿ ಮತ್ತು ಮನೆಯ ಆವರಣಗಳ  ಹಾಗೂ ಜನ ಬಳಸುವ ಓಣಿಗಳ ಸ್ವಚ್ಛತೆ. ಅವನ ವೃದ್ದಾಪ್ಯದ ಕಾರಣದಿಂದಲೋ. ಸ್ವಚ್ಛತೆಗಾಗಿ ಆತ ತಕ್ಕ ಹತ್ಯಾರ ಬಳಸುತ್ತಿದ್ದಿಲ್ಲ ವಾದುದರಿಂದಲೋ ಅವನ ಕೆಲಸ ನಿಧಾನವಾಗಿ ಸಾಗುತ್ತಿತ್ತು. ಅಂಗಡಿ ಮನೆಗಳ ಅಂಗಳ. ಹಾದಿ ಹಾಗೂ ಸುತ್ತಮುತ್ತ ಬೆಳೆದ ಹುಲ್ಲು ಕಸ ಕಡ್ಡಿ ತೆಗೆದು ಹೊರ ಚೆಲ್ಲಿ ಬರಿಗೈಯಿಂದ ಮಣ್ಣನ್ನು ಬದಿಗೆ ಸರಿಸಿ ಕಟ್ಟೆಯಂತೆ ಒಟ್ಟಿ ಆತ ಹೊರಟು ನಿಲ್ಲುತ್ತಿದ್ದ. ಆದರೆ  ತಾನು  ಇಂತಿಂಥ  ಕೆಲಸ  ಮಾಡಿದ್ದೇನೆ  ತನಗೆ  ಅದು  ಕೊಡಿ ಇದು  ಕೊಡಿ  ಎಂದು ಕೇಳುವ ಜಾಯಮಾನದವನಾಗಿರಲಿಲ್ಲ ಅವನು.  ಯಾರೂ ಹೇಳದೆ ತಾನೂ ಕೇಳದೆ ಎಸಗಿದ ತನ್ನ ಕಾರ್ಯಕ್ಕೆ ತಾನಾಗಿಯೇ ಪ್ರತಿಫಲ ಬೇಡುವುದು ತಪ್ಪು ಎಂಬುದು ಅವನ ತತ್ವವೋ ಏನೋ ತನ್ನ ಕೆಲಸ ಮುಗಿದೊಡನೆ ಇನ್ನೊಂದು ಮನೆ ಅಥವಾ ಅಂಗಡಿಯೆಡೆ ನಡೆದು ಬಿಡುವನು. ಅವನ ಈ ಸ್ವಭಾವನ್ನು ಬಲ್ಲ ಅಂಗಡಿ ಮಾಲಿಕರು, ಮನೆಯ ತಾಯಂದಿರು ಅವನು ಕೆಲಸ ಮುಗಿಸುತ್ತಲೆ ತಡಮಾಡದೆ ಒಂದು ಚಹವೋ ಸ್ವಲ್ಪ ಅನ್ನವೋ ಕೊಟ್ಟು ಕಳುಹಿಸುತ್ತಿದ್ದರು.
  
  ಆ ಹಣ್ಣು ಮುದುಕ ಕರ್ಕಿಯ ಬಸ್ ನಿಲ್ದಾಣದ ಸ್ವಚ್ಛತೆಯ ಕಾರ್ಯವನ್ನೂ ಮಾಡುತ್ತಿದ್ದ. ನಾಲ್ಕಾರು ಕಾಗದ ತುಂಡುಗಳನ್ನು ತನ್ನ ಕೈಗಳನ್ನೊ ಬಳಸಿ ಬಸ್ ನಿಲ್ದಾಣದ ಒಳಭಾಗವನ್ನು ಅದರ ಒಂದೆರಡು ಮಾರು ಅಂಗಳದ ಭಾಗವನ್ನು ಒಂದು ಹುಲ್ಲು ಕಡ್ಡಿಯೂ ಕಾಣದಂತೆ ಜಳ ಜಳ ಮಾಡುತ್ತಿದ್ದ .ಈ ಬಸ್ ನಿಲ್ದಾಣದಲ್ಲಿ ಭಿಕ್ಷುಕರು ಹುಚ್ಚರು ವಾಸ್ತವ್ಯ ಮಾಡಿ ಹೇಸಿಗೆ ಮಾಡಿ ಹೋಗುವುದುಂಟು. ಆದರೆ ಗುರ್ಕಜ್ಜ ಒಮ್ಮೆಯೂ ಆ ಸ್ಥಳವನ್ನೂ ತನಗಾಗಿ ಬಳಸಿದವನಲ್ಲ. ಆತ ಹಳೆಯ ಧರ್ಮಶಾಲೆಯ ಬಳಿ ಮಲಗುತ್ತಿದ್ದನಂತೆ.

  ಗುರ್ಕಜ್ಜನ ಆದರ್ಶಮಯ ಅನ್ನ ಗಳಿಕೆಯ ವಿಧಾನದ ಮಾತುಗಳು ಕರ್ಕಿಯಲ್ಲಿ ಹಿರಿ ಕಿರಿಯ ನೂರಾರು ಜನರ ಬಾಯಲ್ಲಿ ಅವನು ಬದುಕಿರುವಾಗಲೇ ಕೇಳಿ ಬರುತ್ತಿದ್ದವು. ಇತ್ತ ವೃದ್ದಾಪ್ಯದಿಂದ ಅವನ ಪಾದ ಮುಖಗಳು ಬಾತುಕೊಳ್ಳುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಆತನು ದುಡಿದು ಉಣ್ಣುವುದು ಸರಿಯಲ್ಲವೆಂದು ನನಗೊಮ್ಮೆ ಅನಿಸಿತು. ಸಾರ್ವಜನಿಕ ಕೆಲಸಗಳಲ್ಲಿ ಉತ್ಸಾಹಿಯಾಗಿದ್ದ ನನ್ನ ವಿದ್ಯಾರ್ಥಿಯೊಬ್ಬನು ಆತ ಸಾರ್ವಜನಿಕ ಗಣಪತಿ ಉತ್ಸವದ ತಯಾರಿಯಲ್ಲಿದ್ದಾಗ ಭೆಟ್ಟಿಯಾಗಿದ್ದೆ. ಅವನು ಗುರ್ಕಜ್ಜನ ವಿಷಯವನ್ನು ಚೆನ್ನಾಗಿ ಅರಿತವ. ಗುರ್ಕಜ್ಜನಿಗೆ ವೃದ್ದಾಪ್ಯ ವೇತನ ದೊರಕಿಸುವ ಅಥವಾ ಇನ್ನಾವುದಾದರೂ ಮಾರ್ಗದಿಂದ ಅವನಿಗೆ ಸಾಯುವ ಕಾಲಕ್ಕೆ ಅನ್ನದ ಬಾರಿಯನ್ನೂ ಮಾಡಿಕೊಡುವ ಬಗ್ಗೆ ಯೋಚನೆ ಮಾಡೋಣ. ಈ ಬಗ್ಗೆ ನಿನ್ನ ಗೆಳೆಯರನ್ನೆಲ್ಲ ಸಂಘಟಿಸು ಎಂದಿದ್ದೆ. ಆದರೆ ಕೆಲವೇ ದಿನಗಳಲ್ಲಿ ಆತ ತನ್ನ ಹೆಚ್ಚಿನ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಹೋದ. ಗುರ್ಕಜ್ಜನ ವಿಷಯ ಮಾತ್ರ  ನನ್ನ ಆಲಸ್ಯದ ಕಾರಣದಿಂದ ಮುಂದುವರಿಯಲಿಲ್ಲ. ನನ್ನ ಜಂಜಡದಲ್ಲಿಯೇ ನಾನು ಮುಳುಗಿದೆ.
   
  ಕಳೆದ ವರ್ಷ (1984) ಜೂನ್ ತಿಂಗಳಲ್ಲೊಮ್ಮೆ ನಾನು ವರ್ಗದಲ್ಲಿ ಪಾಠ ಪ್ರಾರಂಭಿಸುವ ಮುನ್ನ  ಒಬ್ಬ ವಿದ್ಯಾರ್ಥಿ ಎದ್ದು ನಿಂತು ``ಅಕ್ಕೋರೇ ಗುರ್ಕಜ್ಜ ಹೋಗಿ ಬಿಟ್ಟ''ಎಂದ. ಒಂದು ಕ್ಷಣ ಆ ಮಹಾಜೀವಿಯ ಕಾಯಕದ ರೀತಿ ಕಣ್ಮುಂದೆ ಹಾದು ಹೋಯಿತು.ಅವನ ಕೊನೆ ಹೇಗಾಯಿತೆಂದು ವಿವರ ಕೇಳಲು ನನಗೆ ಮನಸ್ಸಾಗಲಿಲ್ಲ. ವಿದ್ಯಾರ್ಥಿ ಇನ್ನು ಏನೋ ಹೇಳಲು ಬಾಯಿ ತೆರೆದ. ಆದರೆ ಅದನ್ನು ಕೇಳಿಸಿಕೊಳ್ಳಲು ನಾನು ಸಿದ್ದಳಿರಲಿಲ್ಲವೆಂದರಿತು ಸುಮ್ಮನಾದ. ಆತ ಹೇಳಬಹುದಾದುದನ್ನ ಕೇಳಿ ಸಹಿಸಿಕೊಳ್ಳುವ ಶಕ್ತಿ ಆಗ ನನ್ನಲ್ಲಿರಲಿಲ್ಲ. ನಾನು ಕೂಡ ಅವನಿಗಾಗಿ ಕೊನೆಗೂ ಏನೂ ಪ್ರಯತ್ನ ಮಾಡದೇ ಉಳಿದೆನಲ್ಲ ಎಂಬ ಅಪರಾಧ ಪ್ರಜ್ಞೆ  ಮಾತ್ರ ನನ್ನಲ್ಲಿ ಉಳಿಯಿತು.
   
  ಗುರ್ಕಜ್ಜ ತೀರಿಕೊಂಡ ಮೇಲೆ ಒಂದು ದಿನವೂ `ಸುಗತಿ' ಕಾಣದ ಕರ್ಕಿಯ ಬಸ್ ನಿಲ್ದಾಣದಲ್ಲಿ ನಾನು ದಿನವೂ ಬಸ್ಸಿಗಾಗಿ ಕಾದು ಕೂಡ್ರುತ್ತೇನೆ. ನಾರುವ ಸೋರುವ ಆ ಬಸ್ ನಿಲ್ದಾಣದ ನೋಟ ಬೇಡ ಬೇಡವೆಂದರೂ ಗುರ್ಕಜ್ಜನ ನೆನಪನ್ನು ಒತ್ತಿ ಒತ್ತಿ ತರುತ್ತದೆ. ಗುರ್ಕಜ್ಜ ಯಾರ ಋಣದಲ್ಲಿಯೂ ಬಾಳಲಿಲ್ಲ. ಆದರೆ ಕರ್ಕಿಯ ಬಸ್ ನಿಲ್ದಾಣದ ಲಾಭ ಪಡೆಯುವ ಸಾರ್ವಜನಿಕರಾದ ನನ್ನಂಥವರು ಮಾತ್ರ ಅವನ ಸೇವೆಯ ಋಣ ತೀರಿಸಲಾಗದೆ ಉಳಿದೆವು.