Saturday 30 June, 2012

ಜನಪದ ಗಣಿತ-Folk Mathemetics




   ಜನಪದ ಗಣಿತ ಪುಸ್ತಕದಲ್ಲಿ ಉತ್ತರದ ಸ್ಥಾನ: 
Folk Mathemetics
       

        ಸಾಮಾನ್ಯವಾಗಿ, ಒಗಟು, ಒಡಪುಗಳ ಸಂಗ್ರಹಕಾರರಂತೆ ಜನಪದ ಗಣಿತ ಸಂಗ್ರಹಕಾರರು ಆಯಾ ಗಣಿತಗಳ ಉತ್ತರವನ್ನು ಸವಾಲಿನ ಜೊತೆ ಮುದ್ರಿಸದೆ. ಬೇರೆಡೆ ಅಂದರೆ ಸಾಮಾನ್ಯವಾಗಿ ಪುಸ್ತಕದ ಕೊನೆಯ ಪುಟಗಳಲ್ಲಿ ಮುದ್ರಿಸುತ್ತಾರೆ.ಆದರೆ ಇಂತಹ ಸವಾಲುಗಳನ್ನು ಒಬ್ಬರೇ ಕುಳಿತು ಪುಸ್ತಕದಲ್ಲಿ ಓದುವ ಸಂದರ್ಭವು  ಬೇರೆಯಾಗಿರುತ್ತದೆ. ಹಾಗೂ ಇವುಗಳನ್ನು ಗುಂಪಿನಲ್ಲಿ ಒಡ್ಡುವ ಬಿಡಿಸುವ  ಸಂದರ್ಭಗಳು ಬೇರೆಯೆಂಬುದನ್ನು  ಸಂಗ್ರಹಕಾರರು ಗಮನಿಸಬೇಕು. ಇವುಗಳ ಮೌಖಿಕ ಸವಾಲಿನ ಸಂದರ್ಭದಲ್ಲಿ ಈ ಗಣಿತಗಳನ್ನು ಒಡ್ಡುವದು ಬಿಡಿಸುವದು ಒಂದು ಕ್ರೀಡೆಯ ರೂಪವನ್ನು ತಾಳುತ್ತದೆ. ಅಲ್ಲಿ ಎರಡು ಪಕ್ಷಗಳು ಏರ್ಪಡುತ್ತವೆ. ಒಂದು ಪಕ್ಷದಲ್ಲಿ ಸವಾಲುಗಾರನಿರುತ್ತಾನೆ. ಇವನನ್ನು ಸವಾಲೊಡ್ಡುವವ ಎಂದು ಹೆಸರಿಸಬಹುದು. ಒಂದು ಗುಂಪಿನಲ್ಲಿ ಒಬ್ಬ ಸವಾಲುಗಾರ ಒಂದು ಸಮಯಕ್ಕೆ ಒಂದು ಗಣಿತವನ್ನು ಮಾತ್ರ ಒಡ್ಡುತ್ತಾನೆ. ಎದುರು ಗುಂಪಿನಲ್ಲಿ ಒಬ್ಬರು ಅಥವಾ ಒಬ್ಬರಿಗಿಂತ  ಹೆಚ್ಚು ಎದುರಾಳಿಗಳಿರಬಹುದು.  ಇವರನ್ನು ಜವಾಬುಗಾರರೆಂದೂ ಕರೆಯಬಹುದು. ಈ ಕ್ರೀಡೆಯಲ್ಲಿ ಸವಾಲುಗಾರನು ಗಣಿತವನ್ನು ಒಡ್ಡಿದಾಗ ಉತ್ತರವನ್ನು ಹೇಳುವದಕ್ಕೆಂದು ಜವಾಬುಗಾರನಿಗೆ ಸಾಕಷ್ಟು ಅವಕಾಶವನ್ನು ನೀಡುವದುಂಟು. ಜವಾಬುಗಾರನು ತನಗೆ ದೊರತಷ್ಟು ಸಮಯವನ್ನು ಬಳಸಿಕೊಳ್ಳಲು ಬಯಸಿದರೆ ಸವಾಲುಗಾರ ತನ್ನ ಉತ್ತರವನ್ನು ಹೇಳದೆ ಜವಾಬುಗಾರನನ್ನು ಕಾಯಿಸುತ್ತಾನೆ. ಈ ಸಮಯವು ಕೆಲವು ಮಿನಿಟುಗಳಿಂದ ದಿನಗಟ್ಟಲೆ, ತಿಂಗಳುಗಟ್ಟಲೆಯಾಗಬಹುದು. ಸವಾಲುಗಾರ ಉತ್ತರ ನೀಡದೆ ಹೊರಟು ಹೋಗಲೂಬಹುದು. ಆಗ ಉತ್ತರಿಸಲು ಕುಳಿತವರು ಮತ್ತೆ ಮತ್ತೆ ಪ್ರಯತ್ನಿಸುತ್ತ ಕಾಲಕಳೆಯುತ್ತಾರೆ. ಆದ್ದರಿಂದ ಇಲ್ಲಿ ಜವಾಬುಗಾರರ ತಲೆ ಹರಿತವಾಗಲು ಹೆಚ್ಚು ಅವಕಾಶವಿರುತ್ತದೆ.

ಆದರೆ ಸವಾಲುಗಳು ಮೌಖಿಕರೂಪದಿಂದ ಲಿಖಿತರೂಪಕ್ಕೆ ಬಂದು ಪುಸ್ತಕವಾಗಿ ಒಬ್ಬರ ಕೈ ಸೇರಿದಾಗ ಈ ಸವಾಲುಗಳ ಜವಾಬುಗಳನ್ನು ನಾವು ಪುಸ್ತಕದಲ್ಲಿ ಎಲ್ಲಿ ಅಡಗಿಸಿಟ್ಟರೂ ಮೌಖಿಕ ಸವಾಲಿನಲ್ಲಿರುವಂತಹ ಬಿಸಿಯಿರುವುದಿಲ್ಲ. ಕೈಯಲ್ಲಿರುವ ಪುಸ್ತಕದಲ್ಲಿಯ ನಾಲ್ಕಾರು ಹಾಳೆಗಳ ಆಚೆಯಿರುವ ಉತ್ತರವನ್ನು ಕಂಡುಕೊಳ್ಳುವುದು ಓದುಗರಿಗೆ ಕಷ್ಟದ ಕೆಲಸವಲ್ಲ. ಉತ್ತರದ ಭಾಗಕ್ಕೆ ಒಂದು ಕಡ್ಡಿಯಿಟ್ಟು ತಕ್ಷಣ ಉತ್ತರ ನೋಡಿ ಆನಂದಿಸುವದು ಈ ಓದಿನ ರೂಪದ ಸವಾಲು ಜವಾಬಿನಲ್ಲಿ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಆಚೆ ಈಚೆ ಪುಟ ಮಡಚುವದು ಓದಿನ ಆನಂದಕ್ಕೆ ಅಡ್ಡಿತರುತ್ತದೆ. ಇದು ಈ ಓದುಗರಿಗೆ ಕಿರಿಕಿರಿಯನ್ನುಂಟುಮಾಡುವದುಂಟು.

ಸವಾಲನ್ನು ಓದಿದವರು ತುಸು ಹೊತ್ತು ಯೋಚಿಸಲಿಯೆಂಬುದು ಉತ್ತರವನ್ನು ದೂರ ಇಟ್ಟು ಪುಸ್ತಕ ಮುದ್ರಿಸುವವರ ಅಭಿಮತವಾಗಿದೆ. ಆದರೆ ಸವಾಲಿನ ಕೆಳಗೆ ಅಥವಾ ದೂರ ಇನ್ನೊಂದು ಪುಟದಲ್ಲಿ ಉತ್ತರ ಮುದ್ರಿಸಿ ಕೊಟ್ಟವರು ಕೂಡ ಸವಾಲನ್ನು ಓದಿ ತುಸು ಹೊತ್ತು ತಲೆಗೆ ಕೆಲಸ ಕೊಟ್ಟು ಆ ಬಳಿಕ ಉತ್ತರವನ್ನು ಓದಿಯೆಂದು ಅಲ್ಲಿ ಸೂಚಿಸಬಹುದಾಗಿದೆಯಾದರೂ ಬಾಳೆಹಣ್ಣನ್ನು ಕೈಗಿತ್ತು ಉಪವಾಸ ಮುಗಿಸಿ ಬಳಿಕ ತಿನ್ನಿ ಎನ್ನಲಾದೀತೆ? ಇದು ಮಂಗಗಳ ಉಪವಾಸದ ಕತೆಯಂತಾಗದೆ?. ಉತ್ತರವನ್ನು ಹೇಗೆಯೇ ಇಡಲಿ ಎಲ್ಲಿಯೇ ಇಡಲಿ ಮುದ್ರಿತ ಪುಸ್ತಕದಲ್ಲಿಯ ಉತ್ತರವನ್ನು ಕಂಡುಕೊಳ್ಳುವುದು ಓದುಗರಿಗೆ ಕಷ್ಟವಲ್ಲ. ಇದೇ ಮಾತು ಬ್ಲೊಗ್ನಲ್ಲಿ ಪ್ರಕಟಿಸುವ ಜನಪದ ಗಣಿತಕ್ಕೂ ಅನ್ವಯಿಸುತ್ತದೆ. ಆದರೂ ಓದುಗರು ತುಸು ಹೊತ್ತು ಸಮಸ್ಯೆಯ ಉತ್ತರಕ್ಕಾಗಿ ಸ್ವಯಂ ಪ್ರೇರಣೆಯಿಂದ ಪ್ರಯತ್ನಿಸಿ ಬಳಿಕ ಉತ್ತರ ನೋಡಬಹುದು. ಆದರೂ ಇಲ್ಲಿ ಗಮನಸಬೇಕಾದ ಒಂದು ವಿಷಯವೆಂದರೆ ಇಲ್ಲಿಯ ಹಲವಾರು ಗಣಿತಗಳ ಉತ್ತರಗಳು ದಿನಗಟ್ಟಲೆ ಪ್ರಯತ್ನಿಸಿದರೂ ಉತ್ತರ ನೀಡುವಂಥವಲ್ಲ. ಮೌಖಿಕ ಸವಾಲುಗಳಲ್ಲಿ ಸವಾಲುಗಾರನು ಎದುರಾಳಿಯನ್ನು ಕೆಲವು ಕಾಲ ಉತ್ತರ ಹೇಳದೆ ಕಾಯಿಸುವ ಕಾರಣ, ತುಸು ಹೊತ್ತು ಎದುರಾಳಿಯ ಮತ್ತು ಸವಾಲನ್ನು ಸ್ವೀಕರಿಸಿದ ಗುಂಪಿನವರ ತಲೆಗೆ ವ್ಯಾಯಾಮ ದೊರೆಯಬಹುದು. ಆದರೆ  ಈ ಸವಾಲು ಅಕ್ಷರ ರೂಪದಲ್ಲಿದ್ದಾಗ ಈ ಪುಸ್ತಕ ಓದುಗರಿಗೆ ಇವು ತಲೆನೋವಿನ ಅಂಶಗಳಾಗುತ್ತವೆ. ಯಾಕೆಂದರೆ ಪುಸ್ತಕ ಓದುವಾಗ ಮೌಖಿಕ ಸವಾಲಿನಲ್ಲಿರುವಂತೆ ಇಲ್ಲಿ ಕ್ರೀಡಾ ಪರಿಸರ ಏರ್ಪಟ್ಟಿರುವದಿಲ್ಲ. ಮೌಖಿಕ ಸವಾಲಿನಲ್ಲಿ ಸವಾಲುಗಾರನ ಹಾವಭಾವ ಒಡ್ಡುವ ಶೈಲಿಗಳು ಪ್ರಚೋದನಾ ತ್ಮಕವಾಗಿರುತ್ತವೆ. ಇಷ್ಟೇ ಅಲ್ಲ ಇಲ್ಲಿ ಸವಾಲು ಜವಾಬುಗಳ ಪರಿಸರವು ಕ್ರೀಡಾಂಗಣದ ಪರಿಸರವನ್ನು ನಿರ್ಮಿಸುತ್ತದೆ. ಇಲ್ಲಿ ಹಲವರಿದ್ದಾಗ ಈ ಕ್ರೀಡೆ ಇನ್ನಷ್ಟು ಚುರುಕುಗೊಳ್ಳುತ್ತದೆ. ಆದರೆ ಓದಿನಲ್ಲಿ ಇದು ಸಾಧ್ಯವಾಗುವುದಿಲ್ಲ.

ಆದ್ದರಿಂದ ಸಾಂಪ್ರದಾಯಿಕ ರೀತಿಯಂತೆ ಸವಾಲು ಜವಾಬುಗಳನ್ನು ಒಂದೇ ಪುಸ್ತಕದಲ್ಲಿ ದೂರ ದೂರವಿಡುವ ಬದಲು ಗಣಿತದ ಜೊತೆ ಜೊತೆಗೆ ಅದರ ಉತ್ತರವನ್ನು,ಇಟ್ಟು ವಿವರವನ್ನು, ರಹಸ್ಯಾದಿಗಳನ್ನು ಹೊಸ ಗಣಿತದ ಸೃಷ್ಟಿಗಿರುವ ಅವಕಾಶಗಳನ್ನು ಚರ್ಚಿಸುವತ್ತ ಜನಪದ ಗಣಿತ ಸಂಪಾದಕರು ಮನಸ್ಸು ಮಾಡಿದರೆ ಓದುಗರಿಗೆ ವಿಶೇಷ ರೀತಿಯ ಮನರಂಜನೆ ದೊರೆಯುವದೆಂಬುದನ್ನು  ಇಂತಹ ಜನಪದ ಗಣಿತ ಪುಸ್ತಕ ಓದುಗರು ಮನಗಾಣಬಹುದಾಗಿದೆ. ಇದು ನನ್ನ ಇಂತಹ  ಓದಿನ ಅನುಭವವವೂ ಅಹುದು. 

1970-73ರ ಹೊತ್ತಿಗೆ ಸುಧಾ ವಾರಪತ್ರಿಕೆಯ ಯುಗಾದಿ ವಿಶೇಷಾಂಕದಲ್ಲಿ ಭಾಸ್ಕರಾಚಾರ್ಯ, ಪ್ರೊ. ವಿ. ಕೆ. ದೊರೆಸ್ವಾಮಿ ಮುಂತಾದವರು ಈ ಬಗೆಯಾಗಿ ಜನಪದ ಗಣಿತಗಳನ್ನು ಸವಾಲಿನ ಜೊತೆ ಜೊತೆಯಾಗಿ ವಿಸ್ತೃತವಾಗಿ ಚರ್ಚಿಸಿ ಗಣಿತದ ಸವಾಲು ಜವಾಬುಗಳನ್ನು ಒಂದು ಉತ್ತಮ ಗಣಿತ ಪ್ರಬಂಧವಾಗಿ ಮಾರ್ಪಡಿಸಿ ಬರೆದಿದ್ದರು. (ಈ ಪತ್ರಿಕೆಗಳ ತುಂಡುಗಳನ್ನು ನನ್ನ ಜನಪದ ಗಣಿತಗಳ ಸಂಗ್ರಹದ ಹಸ್ತಪ್ರತಿಗಳು ಕಟ್ಟಿನಲ್ಲಿ ಸುರಕ್ಷಿತ ವಾಗಿಟ್ಟುಕೊಂಡಿದ್ದೇನೆ.  ನೋಡಿ ಪ್ರೊ ವಿ. ಕೆ. ದೊರೆ ಸ್ವಾಮಿ-ಯುಗಾದಿ ವಿಶೇಷಾಂಕ 1973 ಪುಟ 151, ಭಾಸ್ಕರಾಚಾರ್ಯ  - 1970 ರ ಸುಧಾ ಮಾರ್ಚ  29  ಪುಟ21 -ಸುಧಾ ಜೂನ 7, ಪುಟ 15  ಸುಧಾ ಮಾರ್ಚ 8  ಪುಟ 17) ಇವನ್ನು ಓದಿದಾಗ ನನಗೆ ದೊರೆತಂತಹ ಆನಂದ, ರಂಜನೆ ಓದುಗರಿಗೆ ದೊರೆಯಲಿಯೆಂದು ವಿವರಣೆ, ರಹಸ್ಯಗಳನ್ನು ಉತ್ತರದ ಜೊತೆ ಸೇರಿಸಿದ್ದೇನೆ. ಚರ್ಚಿಸಿದ್ದೇನೆ. ಇದರಿಂದ ಅಧ್ಯಯನಾಸಕ್ತ ಓದುಗರಿಗೆ ಹೆಚ್ಚು ಪ್ರಯೋಜನವಾಗುತ್ತದೆಯಲ್ಲದೆ ಸಾಮಾನ್ಯ ಓದುಗರಿಗೆ ಇದರಿಂದ ಮನರಂಜನೆ ದೊರೆಯುತ್ತದೆ. ಈ ಜನಪದ ಗಣಿತಗಳ ಓದಿನ ಮೊದಲ ಹಂತದಲ್ಲಿ ಇಂತಹ ಗಣಿತಗಳ ಸವಾಲೆಸೆಯಲು ಓದುಗರಿಗೆ ತರಬೇತಿ ದೊರೆಯುತ್ತದೆ. ಹೊಸ ಹೊಸ ಗಣಿತಗಳನ್ನು ರಚಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ.

ಓದುಗರು ಇದನ್ನು ಓದಿ ಮನನ ಮಾಡಿದ ಬಳಿಕ ಪುಸ್ತಕವನ್ನು ಬದಿಗಿಟ್ಟು ಹೊರಬಂದು ಮೌಖಿಕವಾಗಿ  ಸವಾಲೊಡ್ಡಬೇಕು. ಸವಾಲೊಡ್ಡುವಾಗ ಮಾತ್ರ ಎದುರಾಳಿಗೆ ಕೂಡಲೇ ಉತ್ತರ ಹೇಳದೆ ಕೆಲವು ಕಾಲ ಅವರನ್ನು ಗಣಿತ ಬಿಡಿಸುವ ಪ್ರಕ್ರಿಯೆಗೆ ಒಡ್ಡಬೇಕು. ಆಗ ಜನಪದ ಗಣಿತವು ಎದುರಾಳಿ ಅಥವಾ ಆ ಗುಂಪಿನ ನಡುವೆ ಈ ಹಿಂದೆ ತಿಳಿಸಿದಂತೆ ಅದೊಂದು ಕ್ರೀಡೆಯಾಗಿ ಮಾರ್ಪಡುತ್ತದೆ. ಆದ್ದರಿಂದಲೇ ಈ ಸಂದರ್ಭದ ಸವಾಲು ಜವಾಬಿನ ಕ್ರೀಡೆಯಲ್ಲಿ ಉತ್ತರವು ತಕ್ಷಣ ಹೊರಬೀಳಬಾರದು. ಆದರೆ ಓದು ಒಂದು ಕ್ರೀಡೆಯಲ್ಲವಾದ ಕಾರಣ ಅಲ್ಲಿ ಅದು ಮನರಂಜನೆಗೆ ದಾರಿ ಮಾಡಿಕೊಡುವ ಸುಲಭ ಪ್ರಕ್ರಿಯೆಯಾಗಬೇಕು. ಉತ್ತರವು ಸವಾಲಿನ ಜೊತೆಯಲ್ಲಿರಬೇಕು. 

ಪುಸ್ತಕ ಓದಿದವರು ಗುಂಪಿನ ನಡುವೆ ಅಥವಾ ಎದುರಾಳಿಯ ಅಂದರೆ ಜವಾಬುಗಾರರ ಎದುರು ಸಮಸ್ಯೆಯಿಟ್ಟು ಕೆಲವು ಕಾಲ ಅವರನ್ನು ತಲೆ ತುರಿಸಿಕೊಳ್ಳುವಂತೆ ಮಾಡಿ, ಕೊನೆಯಲ್ಲಿ ಉತ್ತರ ಹೇಳಿ ತಮ್ಮ ಜಾಣತನವನ್ನು ಅಲ್ಲಿ ಮೆರೆದು ಶಾಭಾಸ್ ಎನಿಸಿಕೊಂಡು ಸಂತೋಷ ಪಡಬಹುದು, ಬೀಗಬಹುದು. ಆದರೆ ಉತ್ತರ ಹೇಳುವುದರ ಜೊತೆಗೇ  ತಾನು ಉತ್ತರ ಪಡೆದ ರಹಸ್ಯವನ್ನು ಹೇಳಬಾರದು, ಇದರಿಂದ ಜನಪದ ಗಣಿತದ ಗಾಂಭೀರ್ಯಕ್ಕೆ ಚ್ಯುತಿ ಬರಬಹುದು. ಸವಾಲುಗಾರನು ತನ್ನ  ಎದುರಾಳಿ ಗೆಳೆಯರ ಗುಂಪಿನಲ್ಲಿ ಮಿಂಚುವದಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಸವಾಲುಗಾರ ಸಪಾತ್ರರಾದ ಕೆಲವರಿಗಷ್ಟೇ ಸಕಾಲದಲ್ಲಿ ಉತ್ತರ ಪಡೆಯುವ ರಹಸ್ಯವನ್ನು ಹೇಳುವದು ಒಳಿತು. ಇದರಿಂದಾಗಿ ಜನಪದ ಗಣಿತಗಳ ಪ್ರಸಾರದ ವೇಗ ಕಡಿಮೆಯಾಗಬಹುದಾದರೂ ಅದು ಗುಂಪಿನಲ್ಲಿ ತನ್ನ ಗಾಂಭೀರ್ಯ ಉಳಿಸಿಕೊಳ್ಳಲು ನೆರವಾಗುತ್ತದೆ. ಜವಾಬುಗಾರರ ತಲೆ ಚುರುಕುಗೊಳ್ಳಲು ಅವಕಾಶವಾಗುತ್ತದೆ. ಈ ರೀತಿಯಾಗಿ ಜನಪದ ಗಣಿತಗಳ ಗಾಂಭೀರ್ಯವನ್ನು ಉಳಿಸಿಕೊಂಡು ಗೆಳೆಯರ ಹಾಗೂ ಹಿರಿ ಕಿರಿಯರ ಗುಂಪನ್ನು ಚಕಿತಗೊಳಿಸುತ್ತ ಗಣಿತವನ್ನು ಕ್ರೀಡೆಯಾಗಿಸಿ ಚಲಿಸುವಲ್ಲಿ ಯಶಸ್ಸು ಪಡೆಯಬಹುದು. 


ಜನಪದ ಗಣಿತ-Folk Mathemetics


         ಜನಪದ ಗಣಿತ
 Folk Mathemetics -ಒಂದು ವಿವರಣೆ 
 

        ಗಣಿತವೆಂದ ಕೂಡಲೆ ನಮಗೆ ಶಾಲೆ ಕಾಲೇಜುಗಳಲ್ಲಿ ಕಲಿಸುವ ಸೂತ್ರಬದ್ಧ ಔಪಚಾರಿಕ ಗಣಿತದ ನೆನಪಾಗುತ್ತದೆ. ಈ ಗಣಿತಗಳಲ್ಲಿ ಒಂದು ಗಣಿತದ ಉತ್ತರವನ್ನು ಕಂಡುಕೊಳ್ಳುವದಕ್ಕಾಗಿ ಅದಕ್ಕಿರುವ ಒಂದು ನಿಗದಿತ ವಿಧಾನವನ್ನು ಅನುಸರಿಸುತ್ತೇವೆ. ಅಲ್ಲಿ ಗುಣಿಸುವ ಕಳೆಯುವ ಕೂಡಿಸುವ ಭಾಗಿಸುವ ಇತ್ಯಾದಿ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ಜನಪದ ಗಣಿತದ ಉತ್ತರವನ್ನು ಕಂಡುಕೊಳ್ಳುವ ವಿಧಾನವು ಅನೇಕ ಸಂದರ್ಭಗಳಲ್ಲಿ ಔಪಚಾರಿಕ ಗಣಿತ ಮಾದರಿಯದಲ್ಲ. ಇಲ್ಲಿಯೂ ಕೂಡಿಸುವ ಕಳೆಯುವ ಗುಣಿಸುವ ಭಾಗಿಸುವ ಇತ್ಯಾದಿ ಕ್ರಿಯೆಗಳು ನಡೆಯುತ್ತವೆಯಾದರೂ  ಅನೇಕ ಸಂದರ್ಭಗಳಲ್ಲಿ ಉತ್ತರವನ್ನು ಕಂಡುಕೊಳ್ಳುವ ವಿಧಾನವು ಇಂಥದ್ದೇ ಎಂದು ನಿಖರವಾಗಿ ಹೇಳಲಾಗುವದಿಲ್ಲ. ಜನಪದ ಗಣಿತಗಳು ಈ ಗಣಿತವನ್ನು ಬಿಡಿಸುವವರ ವ್ಯವಹಾರ ಕುಶಲತೆಯನ್ನು ಚುರುಕು ಬುದ್ದಿಯನ್ನು ಮಾತಿನ ವೈಖರಿಯನ್ನು ತರ್ಕ ಬುದ್ಧಿಯನ್ನು ಒರೆಗೆ ಹಚ್ಚುವಂತಿರುತ್ತವೆ.
     ಜನಪದ ಒಗಟುಗಳಲ್ಲಿ ನಡೆಯುವಂತೆ ಜನಪದ ಗಣಿತಗಳು ಮೂಲತಹ ವ್ಯಷ್ಟಿ ಸೃಷ್ಟಿಯಾಗಿದ್ದರೂ ಬೆಳೆಯುತ್ತ ಸಮಷ್ಟಿಯ ಸೊತ್ತಾಗಿ ಬಿಡುತ್ತವೆ. ಪ್ರಾರಂಭದ ಸವಾಲುಗಾರ ತನ್ನ ಪ್ರತಿಭೆಯಿಂದಲೋ, ಆಕಸ್ಮಿಕವಾಗಿಯೋ ಕಂಡುಕೊಂಡ ಗಣಿತವನ್ನು ಜಾಣ್ಮೆಯಿಂದ ಉಳಿಸಿಕೊಂಡು ಪ್ರಸಾರಕ್ಕೆ ನೆರವಾಗುತ್ತಾನೆ. ಮೊದಲು ಈ ಒಬ್ಬ ವ್ಯಕ್ತಿ ಕಂಡುಕೊಂಡ ರಹಸ್ಯವನ್ನು ವಾಹಕರಾದ ಸವಾಲುಗಾರರು ಮುಂದುವರಿಸುತ್ತಾರೆ.


Thursday 28 June, 2012

ನೈಋತ್ಯ ಮಾನ್ಸೂನು ಮತ್ತು ಕಾಡ ಕೆಸುವಿನೆಲೆ ಕರಗಲಿ.


ನೈಋತ್ಯ ಮಾನ್ಸೂನು ಮತ್ತು ಕಾಡ ಕೆಸುವಿನೆಲೆ ಕರಗಲಿ.

           ಭರತ ಖಂಡಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶದೊಂದಿಗೆ ಪಶ್ಚಿಮ ಕರಾವಳಿಯಲ್ಲಿ ಮುಂಗಾರು ಮಳೆಯ ನರ್ತನ ವೈಭವ ಪ್ರಾರಂಭವಾಗಿದೆ. 
                   ಇಲ್ಲಿ ಒಮ್ಮೆ ಮುಸಲ ಧಾರೆಯಾಗಿ ಮತ್ತೊಮ್ಮೆ ಕುಂಭದ್ರೋಣವಾಗಿ ಮಳೆ ಸುರಿದರೆ ಮತ್ತೊಮ್ಮೆ ತುಂತುರು  ಸಿಂಚನ. ಬಿಸಿಲು ಮಳೆಗಳ ಚಲ್ಲಾಟ ,ಕಣ್ಣುಮುಚ್ಚಾಲೆಯಾಟ. 
 ಬಾವಿ, ಹೊಳೆ ಹಳ್ಳ ಭರ್ತಿ, ಗುಡ್ಡ ತಗ್ಗುಗಳಲ್ಲೆಲ್ಲ ನೂರಾರು ಜಲಪಾತ! ತೊರೆ, ಹಳ್ಳ ಅಬ್ಬಿ  ಕಚ್ಚರಿಕೆಗಳಿಗೆಲ್ಲ ಸಮುದ್ರ ಸೇರುವ ತವಕ.
                                      ಅತ್ತ ನೇಗಿಲ ಯೋಗಿ ಭೂಮಿಯಲ್ಲಿ ಉಳುಮೆ ನಡೆಸಿದ್ದಾನೆ. ಆದರೆ ಇತ್ತ ಭೂರಮೆ ಉತ್ತದೆ ಬೆಳೆ ಬೆಳೆಸುತ್ತಿದ್ದಾಳೆ. ಇಂಬು ಸಿಕ್ಕಲೆಲ್ಲ ಬೀಜ, ಗಡ್ಡೆಗಳು ಜಿಗಿತಿವೆ. ಕೆಸು, ತಗಟೆ, ಪಾಂಡವರ ಹರಿಗೆ, ಮುಳ್ಳರಿವೆ, ಗೋಳಿ ಸೊಪ್ಪು,ಹೊನೆಗೊನೆಗಳು ಮಚಲೆ ಸೊಪ್ಪು  ಚಿಗುರತೊಡಗಿವೆ.  ಮರಗೆಸು ಮರದ ಸಂದಿಯಿಂದಲೇ ಇಣುಕ ತೊಡಗಿದೆ

                          ಅಡುಗೆ ಮನೆಯಲ್ಲಿ ಸಂಭ್ರಮ, ರೈತ ಬಿತ್ತಿ ಬೆಳೆವ ಬೆಳೆಗಿಂತ ಮುಂಚೆ ಭೂರಮೆ ಬಿತ್ತಿದ ಬೆಳೆ ಕೈಗೆಟಕುತ್ತಿದೆ. ಕಾಡು ಕೆಸು ನಳನಳಿಸುತ್ತಿದೆ. ತಗಟೆ ಹಚ್ಚಡ ಹಾಸಿದೆ. 

         ಪೇಟೆಯಲ್ಲಿ ಕೆಟ್ಟ ರಾಸಾಯನಿಕಗಳಿಂದ ತೊಯ್ದ ತುಟ್ಟಿ ಒಣ ತರಕಾರಿಗಳ ಆಟ. ಈಗ ಸಾಂಪ್ರದಾಯಿಕ ಅಡುಗೆ ಬಲ್ಲವರ ಕಣ್ಣು ಈ ಭೂಮಿ  ಬೆಳೆವ ಬೆಳೆಯ ಮೇಲೆ.. ಕಾಡುಕೆಸುವನ್ನು ಕರಗಲಿ ಮಾಡಿ ಗೊಜ್ಜು, ಪಲ್ಯ, ಸಾರು ಮಾಡಿ ತಿನ್ನುವ ಕನಸು.ಬಡಿಸುವ ನನಸು. ಈ ಬೆಳೆಯನ್ನು ಅಡುವ ಕಲೆ,  ಈವಿದ್ಯೆ ಇವರ ಕರಗತವಾಗಿದೆ. ನೋಡು ನೋಡುತ್ತಿರುವಾಗಲೇ ಗಮಗಮಿಸುವ ಕರಗಲಿ ಯಾದಿಯಾಗಿ ಹಲವು ಅಡುಗೆ ಗಳು ಸಿದ್ದ. 

    ನೀವು  ಕರಗಲಿ ಅಟ್ಟು ಉಣ್ಣಬೇಕಾ.?  ಹೀಗೆ ಮಾಡಿ.                                   

ನೀವು ನಿಮ್ಮ ಹಿತ್ತಲಲ್ಲಿ ಬೆಳೆದ ಅಥವಾ ಇತರ ಕಳಂಕ ರಹಿತ ಸ್ಥಳದಲ್ಲಿ ಬೆಳೆದ  ಕೆಸುವಿನೆಲೆಗಳನ್ನು ಆಯ್ದುಕೊಳ್ಳಿ. ಜೂನ್ ತಿಂಗಳಲ್ಲಿ ಈ ಎಲೆಗಳು ಚಿಕ್ಕವು.  ಎಳೆಯವು.ಒಂದು ಹಸ್ತದಷ್ಟಿರುತ್ತವೆ. ಮೂವತ್ತು ನಲವತ್ತು ಕೆಸುನೆಲೆಗಳನ್ನು ಬೆರಳುಗಳ ಸಂದಿಯೊಂದಿಗೆ ತೂರಿಸಿ ಸರಸರ ಎತ್ತಿಕೊಳ್ಳಿ [.ಕೆಸುವಿನೆಲೆ ಹರಿಯುವದೂ ಒಂದು ಸಾಂಪ್ರದಾಯಿಕ ಕೌಶಲವೆಂಬುದನ್ನು ಅರಿತಿರಿ.]
        ಎಲೆಗಳನ್ನು ತೊಳೆದು ಕೊಚ್ಚಿರಿ. ಒಂದು ಕಪ್ ನೀರು ಸೇರಿಸಿ. ಸಣ್ಣ ಉರಿಯ ಮೇಲಿಡಿ. ಬಿಂಬಲಕಾಯಿಯ ಹುಳಿಯಿದ್ದರೆ ಒಂದೆರಡು ಚಮಚ ತುಂಬ ಅದಕ್ಕೆ ಸೇರಿಸಿರಿ. ಅಥವಾ ನಾಲ್ಕಾರು ಬಿಂಬಲಕಾಯಿ ಕೊಚ್ಚಿ ಹಾಕಿ ಆರೆಂಟು ಸಣ್ಣ ಮೆಣಸು (ಸೂಜಿ ಮೆಣಸು) ಕೊಚ್ಚಿ ಹಾಕಿ. (ಪೇಟೆಯ ಹಸಿ ಮೆಣಸಾದರೆ ನಾಲ್ಕಾರು ಸಾಕು.)  ಒಂದು ಚಮಚ ಉಪ್ಪು ಸೇರಿಸಲು ಮರೆಯದಿರಿ. ಮೊನ್ನೆ ಹಲಸಿನ ಹಣ್ಣು ತಿಂದಿದ್ದರಲ್ಲವೆ? ಬೇಳೆ ಒಣಗಿಸಿಟ್ಟೀದ್ದೀರಾ? ನಾಲ್ಕಾರು ಬೇಳೆ ಜಜ್ಜಿರಿ. ಸುಲಿಯಿರಿ. ಚಿಕ್ಕ ಚಿಕ್ಕ ಚೂರು ಮಾಡಿ ಬೇಯುತ್ತಿರುವ ಕರಗಲಿಗೆ ಸೇರಿಸಿರಿ.ಬೇಳೆ ಚನ್ನಾಗಿ ಬೇಯಲಿ.


 ಕರಗಲಿ.

  ಕೆಸುವಿನೆಲೆ ಬೆಂದು ಕರಗಿ ಹಸಿರು ಮೊಸರಿನಂತಾಗುತ್ತದೆ. ಪನೀರಿಲ್ಲದ ಪಾಲಕ್ನಂತಾಗುತ್ತದೆ. ಹಸಿರು ಹಸಿರಾಗಿರುವ ಇದಕ್ಕೆ ಒಂದು ವಗ್ಗರಣೆ ಕೊಡಿ.  ಹೇಗೆ?
10 ಎಸಳು ಬೆಳ್ಳುಳ್ಳಿ ಸುಲಿದು ತುಸು ಜಜ್ಜಿರಿ,ಇದನ್ನು ನಾಲ್ಕು ಚ ಅಡುಗೆ ಎಣ್ಣೆಯಲ್ಲಿ ಕಮ್ಮಗೆ ಹುರಿಯಿರಿ. ಕರಗಲಿಗೆ ಸೇರಿಸಿ.ರಿ  ಬಿಸಿ ಅನ್ನಕ್ಕೆ ಕಲಸಿ ತಿನ್ನಿರಿ.  ಯಾ ಊಟದ ಜೊತೆ ನಂಜಿ ಕೊಳ್ಳಿರಿ.



 ಎಲ್ಲ ವಿಧದಲ್ಲಿಯೂ  ಪಾಲಕ ಪನೀರನ್ನು ಮೀರಿಸುವ ಈ ಹಸಿರು ಕರಗಲಿ ಬಡವರ, ಹಳ್ಳಿಗರ ಶ್ರೀಮಂತ ಆಹಾರ.  ಸಿರಿವಂತರಿಗೆ ತಕ್ಕ  ಆಹ್ಹಾರ.
ಇದು ಸಾವಿರಾರು ವರ್ಷಗಳಿಂದ ನಮ್ಮ ನಿಮ್ಮ ಹಿರಿಯರು ಬಳಸಿ ಈ ದಿನಗಳವರೆಗೆ ಕಾದಿಟ್ಟುಕೊಂಡ  ಜನಪದ ಜ್ಞಾನ.
 ಈ  ಕೆಸುವಿನ ಬಗೆಗಿನ ಜ್ಞಾನ. ಕರಗಲಿ ಆಡುವ ಕಲೆ ಮರೆಯಾಗದಿರಲಿ.           

 ಕಾಡಿನ ಬದಿಯಿಂದ  ಹಳ್ಳಿಯಿಂದ ಎಲೆ ಆಮದು ಮಾಡಿಕೊಂಡು ಅಟ್ಟು ತಿನ್ನಿ. ಪೇಟೆಯಲ್ಲಿ ಶುದ್ಧ ಭೂಮಿಯ ತುಂಡು ಕಾಣಬಹುದು, ಅಲ್ಲಿ  ಈ ಕೆಸುವನ್ನು ಅರಸಿ ಆರಿಸಿ  ತನ್ನಿ. ಎರಡು ತಿಂಗಳು ವಾರಕ್ಕೆರಡು ಬಾರಿ ಗಡದ್ದಾಗಿ ತಿನ್ನಿ. ಮನೆಗೆ ಬಂದ ನೆಂಟರಿಷ್ಟರಿಗೂ ರುಚಿಯ ಪರಿಚಯ ಮಾಡಿಸಿ.  ಮರೆಯಾಗುತ್ತಿರುವ   ಪ್ರತಿವರ್ಷ  ಭೂಮಿತಾಯಿಯೇ ನಿಂತು  ಬಿತ್ತಿ ಬೆಳೆಯುತ್ತಿರುವ ಇಂತಹ  ಆಹಾರ ಬೆಳೆಗಳ ಬಗ್ಗೆ ಜನ ಜಾಗ್ರತಿ ಮಾಡಿ. 

ಇಂತಹ ಕೆಲವು ಬೆಳೆಗಳ ಬಗ್ಗೆ ಆಗಾಗ ಬರೆಯಬೇಕೆಂದಿದ್ದೇನೆ.ಆಯ್ತಾ

Wednesday 27 June, 2012

ಜನಪದ ಗಣಿತ - Folk Mathematics



                   
 ಜನಪದ ಗಣಿತ  Folk Mathematics

      ನೀವು ಶಾಲೆಗೆ ಹೋಗುತ್ತಿರುವಾಗ ಊರಿನ ಹಿರಿಯ ಉತ್ಸಾಹಿಗಳೊಬ್ಬರು  ನಿಮ್ಮ ಬಳಿ ಬಂದು ನೀವು ಸಾಲೆಯಲ್ಲಿ ಏನು ಕಲಿತಿದ್ದೀರಿ ನೋಡೋಣ  ನನ್ನ ಪ್ರಶ್ನೆಗೆ ಉತ್ತರಿಸಿ ಎಂದು  ನಿಮಗೆ ಸವಾಲೆಸೆದದ್ದು ನೀವು ಉತ್ತರಿಸಲಾಗದೆ ಪೇಚಾಡಿದ್ದು ನೆನಪಿದೆಯೆ? ಆಗೊಂದು ಕಾಲವಿತ್ತು ಶಾಲಾ ಮಕ್ಕಳಿಗೆ ಮಗ್ಗಿ ಕೇಳುವದು ಜನಪದ ಗಣಿತ ಕೇಳಿ ಪೇಚಾಡಿಸುವದು ಮುಂತಾದ ಬುದ್ಧಿಗೆ ಸಾಣೆ ಹಿಡಿಯುವ ಕಾರ್ಯಗಳು  ಹಿರಿಯರಿಂದ ನಡೆಯುತ್ತಿದ್ದವು. ಟಿ.ವಿ. ಮನೆ ಮನೆಗೆ ಬಂದ ಮೇಲೆ ಇದು ಪರದೆಯ ಹಿಂದೆ ಸರಿದುಹೋಗಿದೆ. ಈಕೆಳಗಿನ ಗಣಿತಗಳನ್ನು ಓದುವಾಗ ಹಳೆಯ ನೆನಪು ಚಿಗುರಬಹುದು. ಗಣಿತ ಬಿಡಿಸುವದರಿಂದ ತಲೆ ಚುರುಕಾಗಬಹುದು. ಒಂದಿಷ್ಟು ರಂಜನೆ ದೊರೆಂಬಹುದು. ಎಂದುಕೊಂಡಿದ್ದೇನೆ. ಗಣಿತ ಬಿಡಿಸಿ ನೋಡಿ. ಈ ವಿದ್ಯೆ ನಿಮ್ಮದಾದ ಬಳಿಕ  ನಿಮ್ಮ ಜೊತೆಗಾರರಿಗೆ ಸವಾಲೆಸೆಯಿರಿ.
               
       ಇಲ್ಲಿ ಸವಾಲೆಸೆದಿರುವ ಜನಪದ ಗಣಿತಗಳನ್ನು ಸಂಗ್ರಹಿಸಿ ಸುಮಾರು ನಾಲ್ಕು ದಶಕಗಳು ಕಳೆದು ಹೋಗಿವೆ. 1971-72 ರಲ್ಲಿ ಜಾನಪದದ ಗಣಿಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪಂಚಗ್ರಾಮದ ನಡುವೆಯಿರುವ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯಲ್ಲಿ ಕೆಲವು ತಿಂಗಳು ನಾನು ಶಿಕ್ಷಕಳಾಗಿ ಕೆಲಸ ಮಾಡುತ್ತಿದ್ದಾಗ ಆ ಶಾಲೆಯ ವಿದ್ಯಾರ್ಥಿಗಳ ಆಟದ ಅವಧಿಯನ್ನು ನಾನು ಬಳಸಿಕೊಳ್ಳಲು ನನಗೆ ಅವಕಾಶ ನೀಡಲಾಗಿತ್ತು. ಆ ಅವಧಿಯಲ್ಲಿ ಅಲ್ಲಿಯ ವಿದ್ಯಾರ್ಥಿಗಳಿಂದ ಸಾಕಷ್ಟು ಜಾನಪದ ಸಂಗ್ರಹ ಮಾಡುವದು ನನಗೆ ಸಾಧ್ಯವಾಯಿತು. ಅಲ್ಲಿಯ ಜನಪದ ಆಟಗಳು,  ಜನಪದ ಕತೆಗಳು, ನಂಬಿಕೆಗಳು, ಒಗಟುಗಳು, ಜನಪದ ಗಣಿತಗಳು, ಆಚರಣೆಗಳು ಮುಂತಾದವುಗಳನ್ನು ಸಂಗ್ರಹಿಸಲು ವಿದ್ಯಾರ್ಥಿಗಳು ಆಸಕ್ತಿಯಿಂದ ನನ್ನೊಡನೆ ಸಹಕರಿಸುತ್ತಿದ್ದರು. ಆ ಬಳಿಕ ಕರ್ಕಿಯ ಚೆನ್ನಕೇಶವ ಫ್ರೌಡಶಾಲೆಯಲ್ಲಿ ಶಿಕ್ಷಕಳಾಗಿದ್ದಾಗ ಬಿಡುವಿನ ವೇಳೆಯಲ್ಲಿ ನಾನು ಈ ಮೊದಲು ಸಂಗ್ರಹಿಸಿದ ಕೆಲವು  ಜನಪದ ಗಣಿತಗಳನ್ನು ಅವರಿಗೆ ಕೊಟ್ಟು ಬಿಡಿಸಲು ಹೇಳುತ್ತಿದ್ದೆ. ಆಗ ಅವರೇ ನನಗೆ ಹಲವು ಗಣಿತಗಳ ಸವಾಲುಗಳನ್ನೊಡ್ಡುತ್ತಿದ್ದರು. ನಾನು ಅವುಗಳನ್ನು ಬಿಡಿಸುವ ಗೋಜಿಗೆ ಹೋಗದೆ ಬರೆದುಕೊಳ್ಳುತ್ತಿದ್ದೆ. 
          
      ಇದಾದ ಕೆಲವು ಕಾಲದ ಬಳಿಕ ಈ ಗಣಿತಗಳ ಅಧ್ಯಯನದ ಉದ್ದೇಶದಿಂದ ಇತರರ ಒಂದೆರಡು ಜನಪದ ಗಣಿತ  ಸಂಗ್ರಹಗಳನ್ನು ಕೊಂಡುಕೊಂಡೆ. ಗಣಿತ ವಿಷಯದಲ್ಲಿ ಅಜ್ಞಳಾದ ನನಗೆ ಈ ಪುಸ್ತಕಗಳಲ್ಲಿಯ ಗಣಿತಗಳು ಇನ್ನಷ್ಟು ಗಡುಸಾಗಿ ಕಂಡವು. ಇದರ ಜೊತೆಗೆ ಇವುಗಳಲ್ಲಿಯ  ಸಾಮಾಜಿಕ ಉಪಭಾಷೆಯು ತೊಡಕು ತಂದಿತು. ಈ ಪುಸ್ತಕದಲ್ಲಿಯ ಪಾಠಾಂತರಗಳು ಹಾಗೂ ಬೇರೆ  ಸಂಗ್ರಹದಲ್ಲಿಯ ಗಣಿತಗಳು ನನ್ನ ಸಂಗ್ರಹದಲ್ಲಿವೆಯೇ ಎಂಬುದನ್ನು ಕೂಡ ನೋಡಲು ಆಗ ನಾನು ಮನಸ್ಸು ಮಾಡಿರಲಿಲ್ಲ.
         
       2009ರಲ್ಲಿನನ್ನ ಬಳಿಯಿದ್ದ ಒಂದು ಜನಪದ ಗಣಿತವನ್ನು ನನ್ನ ಮೊಮ್ಮಗಳು ಸೃಷ್ಟಿಗೆ ದೂರವಾಣಿ ಮೂಲಕ ಹೇಳಿದೆ. ಉತ್ತರವನ್ನು ಇನ್ನೊಂದು ದಿನ ಹೇಳುವದಾಗಿ ತಿಳಿಸಿದೆ. ಅವಳು ಈ ಗಣಿತವನ್ನು ಗೆಳತಿಯರ ಮುಂದೆ ಇಟ್ಟಳು. ಅವರಲ್ಲಿ ಯಾರಿಗೂ ಉತ್ತರ ದೊರೆಯಲಿಲ್ಲ. ಒಂದೆರಡು ದಿನ ಕಳೆಯಿತು. ಸೃಷ್ಟಿಗೆ ಕುತೂಹಲ ಹೆಚ್ಚಾಯಿತು. ಗಣಿತವನ್ನು ಬಿಡಿಸುವದು ಹೇಗೆ ಎಂದು ತನ್ನ ತಂದೆಗೆ ತಗಾದೆ ಮಾಡ ತೊಡಗಿದಳು. ಆಗ ಉತ್ತರ ಪಡೆಯುವ ಗುಟ್ಟನ್ನು ಅವಳ ತಂದೆ  ಅವಳಿಗೆ ತಿಳಿಸಿಕೊಟ್ಟರು. ಅವಳು ಉತ್ತರವನ್ನು ತನ್ನ ಗೆಳತಿಯರಿಗೆ ಹೇಳಿದಳು.  ಆದರೆ ಗುಟ್ಟನ್ನು ಹೇಳಲಿಲ್ಲ. ಗೆಳತಿಯರು ಗಣಿತವನ್ನು ತಾಳೆ ಮಾಡಿ ನೋಡಿದರು. ಸೃಷ್ಟಿ ಕೊಟ್ಟ ಉತ್ತರ  ಸರಿಯಿದೆ ಎಂಬುದನ್ನು ಕಂಡುಕೊಂಡರು. ತಮ್ಮ ಮನಸ್ಸಿನಲ್ಲಿರುವ ಅಂಕೆಯು ಸೃಷ್ಟಿಗೆ ಹೇಗೆ ತಿಳಿಯುತ್ತದೆಯೆಂಬ ಬಗ್ಗೆ ಅವರು ವಿಸ್ಮಿತರಾದರು. 
         
        ನನ್ನ ಬಳಿ ಸುಮಾರು ಅರವತ್ತಕ್ಕೂ ಹೆಚ್ಚು ಜನಪದ ಗಣಿತಗಳಿವೆ,ಅವುಗಳನ್ನು ಆರುನೂರಾಗಿಯೂ ಪರಿವರ್ತಿಸಬಹುದು. ಅವುಗಳನ್ನು ಬಿಡಿಸುವ ಬಗೆ ಬೇರೆ ಬೇರೆ. ಇಲ್ಲಿ ಒಂದು ನಮೂನೆಯ  ಗಣಿತಗಳನ್ನು ನಿಮಗಾಗಿ  ಬ್ಲೊಗಿಸಿದ್ದೇನೆ. ಗುಟ್ಟನ್ನು ವಿಧಾನವನ್ನು ಉತ್ತರವನ್ನು  ಜೊತೆಗೆ ಇಟ್ಟಿದ್ದೇನೆ. ಇದು ನಿಮಗಾಗಿ ಮಾತ್ರ. ನೀವು ಕೊಟ್ಟ ಸಮಸ್ಯೆಯನ್ನು ಬಿಡಿಸಲು ಕುಳಿತ ಎದುರಾಳಿಗೆ  ಸಮಸ್ಯೆ ಬಿಡಿಸುವ ಗುಟ್ಟನ್ನಾಗಲಿ ಉತ್ತರವನ್ನಾಗಲಿ ಹೇಳದಿರಿ.ಇದು ಅಂತರ್ಜಾಲದ ಲೋಕ ಇಲ್ಲಿ  ನಿಮ್ಮ ಎದುರಾಳಿಗೆ ಉತ್ತರ ದೊರೆಯಬಹುದಾದರೂ ಅಲ್ಲಿಯವರೆಗಾದರೂ ಗುಟ್ಟು ಬಿಟ್ಟುಕೊಡದೆ ನಿಮ್ಮ ಎದುರಾಳಿಯ ಮುಂದೆ ನೀವು ಜಾಣರೆಂದೆನಿಸಿಕೊಳ್ಳಬಹುದು.
        
       ಸವಾಲುಗಾರರಾದ ನೀವು ಸವಾಲು ಎಸೆಯುವ ಮುನ್ನ ಗಣಿತವನ್ನು ಓದಿ ಮನದಟ್ಟು ಮಾಡಿಕೊಳ್ಳಿ. ಕಂಪ್ಯೂಟರ ಮುಚ್ಚಿಡಿ. ಆ ಬಳಿಕ ನಿಮ್ಮ ಎದುರು ಕುಳಿತವರಿಗೆ ಈ ರೀತಿಯಾಗಿ ಹೇಳಿರಿ.      
          
      ಸವಾಲು 1  ``ನೀವು ಒಂದು ಅಂಕೆ ಅಥವಾ ಸಂಖ್ಯೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ. ಅಷ್ಟೇ ಮೊತ್ತವನ್ನು  ಆ ಅಂಕೆ ಅಥವಾ ಸಂಖ್ಯೆಗೆ ಕೂಡಿಸಿರಿ. ನನ್ನ 6ನ್ನುಅದಕ್ಕೆ  ಕೂಡಿಸಿರಿ. ಅವುಗಳ ಒಟ್ಟು ಮೊತ್ತದಲ್ಲಿ ಅದರ ಅರ್ಧವನ್ನು ಕಳೆದು  ನೀವು 2ನೇ ಸಾರಿ ಇಟ್ಟುಕೊಂಡ ಸಂಖ್ಯೆಯನ್ನು ಉಳಿದ ಮೊತ್ತದಲ್ಲಿ ಕಳೆಯಿರಿ. ಎಷ್ಟು ಉಳಿಯಿತೆಂಬುದನ್ನು ನಾನು ಹೇಳುತ್ತೇನೆ.'' 

 ಇದು ನೀವು ಕೊಟ್ಟ ಸವಾಲು
         
        ಗುಟ್ಟು;ನೀವು ಕೊಡುವ ಅಂಕೆ 6 ಅಥವಾ ಬೇರೆಯಾಗಿರಬಹುದು. ಸವಾಲುಗಾರನಿಗೆ[ ನೀವು] ಕೊಟ್ಟ ಸಂಖ್ಯೆಯ ಅರ್ಧವೇ ಉತ್ತರ. 
          
       ಈ ಗುಟ್ಟನ್ನು ನಿಮ್ಮ ಎದುರಾಳಿಗೆ  ಹೇಳಬೇಡಿರಿ ನೀವು ಲೆಕ್ಕ ಕೊಡುವಾಗ ಎದುರಿಗೆ ಹೆಚ್ಚು ಜನರಿದ್ದರೆ ಪ್ರತಿಯೊಬ್ಬರಿಗೂ ನೀವು ಬೇರೆ ಬೇರೆ ಅಂಕೆ| ಸಂಖ್ಯೆಯನ್ನು ಕೊಡಿರಿ ಅಥವಾ ಒಂದೇ ಮೊತ್ತವನ್ನು ನೀಡಿ ಪ್ರತಿಯೊಬ್ಬರಿಗೂ ಅವರವರ ಉತ್ತರ ಹೇಳಿ ಆಶ್ಚರ್ಯ ಹುಟ್ಟಿಸಿರಿ
        
      ತಾಳೆ(ಎದುರಾಳಿಯ ಮನಸ್ಸಿನಲ್ಲಿದ್ದ ಅಂಕೆಯು 5 ಎಂದು ಭಾವಿಸಿ ಮುಂದಿನಂತೆ ವಿವರಿಸಬಹುದು 5+5+6=16, 16-8=8, 8-5=3) (ಸವಾಲುಗಾರ ಕೊಟ್ಟ ಅಂಕೆಯು 6 ಆದ್ದರಿಂದ ಎದುರಾಳಿಯ ಉತ್ತರವು 6ರ ಅರ್ಧ 3.  
          
      ನೆನಪಿಡಿ:ಸವಾಲುಗಾರನು ಈ ವಿವರವನ್ನು ಪ್ರಸ್ತುತ ಪಡಿಸುವಾಗ ತಾನು ಕೊಟ್ಟ ಮೊತ್ತದ ಅರ್ಧವೇ ಉತ್ತರವೆಂದು ಅಪ್ಪಿ ತಪ್ಪಿಯೂ  ಎದುರಾಳಿಗೆ ಹೇಳಕೂಡದು) 

ಇನ್ನೊಂದು ಗಣಿತವನ್ನು  ಎದುರಾಳಿಗೆ ಹೀಗೆ ಹೇಳಿರಿ 
          
   ಸವಾಲು 2 ,ಹತ್ತರ ಒಳಗಿನ ಒಂದು ಅಂಕೆಯನ್ನು ಮನಸ್ಸಿನಲ್ಲಿಡಿರಿ. ನಿಮ್ಮ ಗೆಳೆಯನಿಂದ ಅಷ್ಟೇ ತೆಗೆದುಕೊಳ್ಳಿರಿ. ನೀವು ಮನಸ್ಸಿನಲ್ಲಿಟ್ಟುಕೊಂಡ ಅಂಕೆಗೆ ಅದನ್ನು ಕೂಡಿಸಿರಿ. ಅದಕ್ಕೆ ನಾನು ಕೊಡುವ ಆರನ್ನು ಸೇರಿಸಿರಿ. ಈ ಸಂಖ್ಯೆಯನ್ನು ಅರ್ಧ ಮಾಡಿರಿ. ಒಂದು ಪಾಲನ್ನು ತಾಯಿಗೆ ಕೊಡಿ. ಗೆಳೆಯ ಕೊಟ್ಟದ್ದನ್ನು ಅವನಿಗೆ ಕೊಡಿರಿ. ಈಗ ನಾನು ನಿಮ್ಮ ಬಳಿ ಉಳಿದಿರುವ ಮೊತ್ತವನ್ನು ಹೇಳುತ್ತೇನೆ.' ಎನ್ನಿರಿ
       
       ಗುಟ್ಟು; ಇಲ್ಲಿ ಮೇಲೆ ತಿಳಿಸಿ ದಂತೆ ಸವಾಲುಗಾರನು ಕೊಟ್ಟ ಅಂಕೆ /ಸಂಖ್ಯೆಯ ಅರ್ಧವು ಉತ್ತರವಾಗಿರುತ್ತದೆ.  
ಇಲ್ಲಿ ಹತ್ತರೊಳಗಿನ ಅಂಕೆಯನ್ನು ಮನಸ್ಸಿನಲಿಟ್ಟುಕೊಳ್ಳಬೇಕೆಂದು ಸವಾಲುಗಾರನ ನಿದರ್ಶನವಿದೆಯಾದರೂ ಅದು ಅನಿವಾರ್ಯವಲ್ಲವೆಂಬುದನ್ನು ಗಮನಿಸಿರಿ. ಈ ಸಮಸ್ಯೆಯನ್ನು ಬಿಡಿಸುವ ವಿಧಾನವೂ ಮೇಲಿನಂತಿರುತ್ತದೆ 
         
      ವಿಧಾನ ವಿವರಣೆ: ಎದುರಾಳಿಯ ಮನಸ್ಸಿನಲ್ಲಿರುವ ಅಂಕೆಯು 9 ಆಗಿದ್ದರೆ  ಗೆಳೆಯನು ಕೊಟ್ಟದ್ದು 9. ಆದ್ದರಿಂದ ಗಣಿತವನ್ನು ಹೀಗೆ ವಿವರಿಸಬಹುದು. 9+9=18  ಸವಾಲುಗಾರ ಕೊಟ್ಟ 6 ನ್ನು ಎದುರಾಳಿ ಕೂಡಿಸಿದಾಗ  ಮೊತ್ತವು 24 ಆಗುತ್ತದೆ. ಇದರ ಅರ್ಧ 12. ಇದನ್ನು ತಾಯಿಗೆ ಕೊಡುತ್ತಾನೆ. ಗೆಳೆಯನು ಕೊಟ್ಟ 9 ನ್ನು ಅವನಿಗೆ ಕೊಡುತ್ತಾನೆ. ಈಗ ಎದುರಾಳಿಯ ಬಳಿ 3  ಉಳಿಯಿತ್ತದೆ.  ಗಮನಿಸಿ. ಇದು ಸವಾಲುಗಾರನು ಎದುರಾಳಿಗೆ ಕೊಟ್ಟ ಮೊತ್ತದ ಅರ್ಧ. ಇದೇ ಉತ್ತರ. ಇದೇ ಗುಟ್ಟು.  ಇನ್ನೊಂದು ಇಂತಹದೇ ಗಣಿತ ಗಮನಿಸಿ.
      
       ಎದುರಾಳಿಯ ಮನಸ್ಸಿನಲ್ಲಿರುವ ಸಂಖ್ಯೆಯು 20 ಆಗಿದ್ದರೆ ಗಣಿತವನ್ನು ಹೀಗೆ ವಿವರಿಸಬಹುದು. 20+20= 40+10=50 ಇದರ ಅರ್ಧ 25 ಈ 25ನ್ನು ತಾಯಿಗೆ ಕೊಡುತ್ತಾನೆ. ಗೆಳೆಯಕೊಟ್ಟ 20 ನ್ನು ಅವನಿಗೆ ಕೊಡುತ್ತಾನೆ .ಈಗ  ಎದುರಾಳಿಯ ಬಳಿ 5  ಉಳಿಯಿತ್ತದೆ.
        
      ಇಲ್ಲಿ ಎದುರಾಳಿ ಮನಸ್ಸಿನಲ್ಲಿಟ್ಟುಕೊಂಡ ಅಂಕೆ ಸಂಖ್ಯೆ ಮಹತ್ವದ್ದಲ್ಲ; ಉತ್ತರವು ಸವಾಲುಗಾರನ ನಿದರ್ಶನ ಮತ್ತು ಸವಾಲುಗಾರನು ಜವಾಬುಗಾರನಿಗೆ ನೀಡುವ ಮೊತ್ತವನ್ನು ಅವಲಂಬಿಸಿರುತ್ತದೆ.
      
      ಸವಾಲುಗಾರ ತನ್ನ 20 ನ್ನು ಎದುರಾಳಿಗೆ ಕೊಟ್ಟಿದ್ದರೆ. ಸವಾಲುಗಾರನು ಎದುರಾಳಿಗೆ ನಿನ್ನ ಬಳಿ 10 ಉಳಿದಿದೆ ಯೆಂದು ಉತ್ತರಿಸಿ ಸುಮ್ಮನಾಗುತ್ತಾನೆ. ಈ ಗಣಿತ ಇಷ್ಟು ಸುಲಭ. ಈ ಗುಟ್ಟು ಗೊತ್ತಿಲ್ಲದ ಎದುರಾಳಿ ಕೌತುಕಗೊಳ್ಳುತ್ತಾನೆ ಅಷ್ಟೆ. ಈ ಗುಟ್ಟನ್ನು ಅರಿತ ಸವಾಲು ಗಾರ ಇಂತಹ ಒಂದು ಹಂದರದಲ್ಲಿ ನೂರಾರು ಗಣಿತಗಳನ್ನು ರಚಿಸಬಹುದು.
        
    ಇಂತಹ ಗಣಿತಗಳಲ್ಲಿ ಸವಾಲುಗಾರನಿಗೆ ಇಲ್ಲಿ ಈ ರೀತಿಯಾಗಿ ಏಕೆ ಕೂಡಿಸಬೇಕು ಏಕೆ ಕಳೆಯಬೇಕು ಎಂಬುದರ ಮರ್ಮ ಗೊತ್ತಿರಲೇಬೇಕೆಂದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸಾಗಿ ಬಂದ ಗಣಿತ ಕಲೆಯಿದು. ಆದರೆ ಇಲ್ಲಿ ಸವಾಲುಗಾರನು ಕೂಡಿಸುವ ಕಳೆಯುವ ಗುಣಿಸುವ ನಿದರ್ಶನ ನೀಡುವಾಗ ತಪ್ಪು ಘಟಿಸಬಾರದು. 
        
    ಈ ಗಣಿತಗಳ ಅಪ್ಪನಂತಹ ಜನಪದ ಗಣಿತ ಬಲ್ಲ ಹಿರಿಯರು ಇನ್ನೂ ನಿಮ್ಮ ಊರು ಕೇರಿಗಳಲ್ಲಿ ಬದುಕುಳಿದಿರಬಹುದು. ಕೆಲವು ಗಳಿಗೆ ಮಟ್ಟಿಗಾದರೂ ನಿಮ್ಮ ಕೆಲಸ ಬೊಗಸೆ ಬಿಟ್ಟು ಅವರನ್ನು  ಕಂಡು ಮಾತಾಡಿಸಿ ಬನ್ನಿ. 
ಸಂಗ್ರಹಿಸಿ ಎಂದು ಬೇರೆ ಹೇಳಬೇಕೆ?


ಎದುರಾಳಿಗೆ ಹೀಗೆ ಹೇಳಿರಿ
          
       ಸವಾಲು 3, ಒಂದು ಸಂಖ್ಯೆ ಅಥವಾ ಅಂಕೆ ಮನಸ್ಸಿನಲ್ಲಿಡಿ. ಅಷ್ಟನ್ನೇ ತಾಯಿಯಿಂದ ತೆಗೆದುಕೊಳ್ಳಿ ನನ್ನ 60 ಸೇರಿಸಿರಿ. ಎಲ್ಲ ಕೂಡಿಸಿರಿ. ಅರ್ಧ ದೇವರಿಗೆ ಬಿಡಿ, ತಾಯಿಯಿಂದ ತೆಗೆದುಕೊಂಡದ್ದನ್ನು ಅವರಿಗೆ ಕೊಡಿ, ನಿಮ್ಮ ಹತ್ತಿರ ಉಳಿದದ್ದೆಷ್ಟೆಂದು ನಾನು ಹೇಳುತ್ತೇನೆ. 
                                                                                                                                                ಉತ್ತರ: 30. 
       
       ವಿವರಣೆ: ಸವಾಲುಗಾರ ನನ್ನ 60 ಎಂದಾಗ  ಉತ್ತರ 30. ನನ್ನ 80 ಅಂದರೆ ಉತ್ತರ 40. ನೆನಪಿಡಿ, ಇಲ್ಲಿಯೂ ಸವಾಲುಗಾರ ಕೊಟ್ಟ ಸಂಖ್ಯೆಯ ಅರ್ಧವು ಎದುರಾಳಿಯ ಬಳಿಯಿರುವ ಮೊತ್ತವಾಗಿರುತ್ತದೆ. 
           
       ಇದು ಒಂದನೆಯ ಗಣಿತದ ಪಾಠಾಂತರವಾಗಿದೆ. ಪಾಠಾಂತರಗಳಲ್ಲಿ ತಾಯಿ ದೇವರು ಅಕ್ಕ ತಂಗಿ ಅಥವಾ ಬಳಿಯಲ್ಲಿರುವ ಯಾರಾದರೂ ಸೇರಿಕೊಳ್ಳುವದುಂಟು. ಸವಾಲುಗಾರ ನೀಡುವ ಮೊತ್ತದಲ್ಲಿ ಪ್ರತಿಬಾರಿ ಬದಲಾವಣೆಯಿರುವದುಂಟು ಹೀಗಾಗಿ ಇಂತಹ ಗಣಿತಗಳಲ್ಲಿ ಹಲವಾರು ಪಾಠಾಂತರಗಳು ಕಂಡುಬರುತ್ತವೆ. 
          
      ಎರಡನೆಯ ಗಣಿತವು  ಚಿಕ್ಕ ಪಾಠಾಂತರಗಳೊಂದಿಗೆ ಮೊದಲನೆಯ ಗಣಿತವೇ ಅಗಿದ್ದರೂ ಗಣಿತ ಬಿಡಿಸಲು ನೀಡುವ ನಿದರ್ಶನದಲ್ಲಿ ನಾವಿನ್ಯವಿದೆ. ಆತ್ಮೀಯತೆಯಿದೆ. ದೇವರು ಗೆಳೆಯ ಈ ಶಬ್ದಗಳು ಈ ಗಣಿತಕ್ಕೆ ಮಾನವೀಯ ಮತ್ತು ದೈವಿಕ ಸಂಬಂಧವನ್ನು ಸೇರಿಸುತ್ತವೆ.
          
     ಮೂರನೆಯ ಗಣಿತವು 1 ಮತ್ತು 2 ನೆಯ ಗಣಿತದಂತೆ ಇದ್ದು ಇಲ್ಲಿ ಗಣಿತವನ್ನು ಇನ್ನಷ್ಟು ಆತ್ಮೀಯಗೊಳಿಸಲಾಗಿದೆ ಇಲ್ಲಿ ತಾಯಿಯು ಗಣಿತದಲ್ಲಿ ಭಾಗ ವಹಿಸುವಂತೆ ಮಾಡಲಾಗಿದೆ. 
        
      ಸವಾಲು 4 `,`ನೀವು ಒಂದು ಅಂಕೆಯನ್ನಾಗಲಿ ಸಂಖ್ಯೆಯನ್ನಾಗಲಿ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಅದಕ್ಕೆ 5 ರಿಂದ ಗುಣಿಸಿರಿ. ಗುಣಲಬ್ಧಕ್ಕೆ 5 ನ್ನು ಕೂಡಿಸಿರಿ. ಈ ಮೊತ್ತಕ್ಕೆ 2 ರಿಂದ ಗುಣಿಸಿ ಗುಣಲಬ್ಧಕ್ಕೆ 2 ನ್ನು ಕೂಡಿಸಿರಿ. ಎಷ್ಟಾಯಿತು ಹೇಳಿರಿ. ನಿಮ್ಮ ಮನಸ್ಸಿನಲ್ಲಿರುವ ಮೊತ್ತವನ್ನು ನಾನು ಹೇಳುತ್ತೇನೆ.ಎನ್ನಿರಿ
         
    ಈ ಗಣಿತವು ಈ ಮೇಲಿನ ಮೂರು ಗಣಿತಗಳಿಂದ ಬೇರೆಯಾಗಿದೆ.  ಇಲ್ಲಿ ಸವಾಲುಗಾರ ಎದುರಾಳಿಯ ಕೈಯಲ್ಲಿರುವ ಮೊತ್ತವನ್ನು ಆಧರಿಸಿ ಎದುರಾಳಿಯ ಮನಸ್ಸಿನಲ್ಲಿರುವ  ಅಂಕೆಯ ಸಂಖ್ಯೆಯನ್ನು ಹೇಳಹೊರಟಿದ್ದಾನೆ.
        
     ಉತ್ತರ ಪಡೆಯುವ ಗುಟ್ಟು; ಎದುರಾಳಿಯಿಂದ ದೊರೆತ ಉತ್ತರದ ಕೊನೆಯ ಒಂದು ಅಂಕೆಯನ್ನು ಹೊಡೆದು ಹಾಕಿ ಉಳಿದದ್ದರಲ್ಲಿ 1ನ್ನು ಕಳೆಯ ಬೇಕು.
       
      ಸವಾಲು 5. ನೀವು 10 ರೊಳಗಿನ ಒಂದು ಅಂಕೆಯನ್ನು ಮನಸ್ಸಿನಲ್ಲಿಡಿರಿ. ಅದಕ್ಕೆ ಎರಡರಿಂದ ಗುಣಿಸಿರಿ. ಮತ್ತೆ ಎರಡು ಕೂಡಿಸಿರಿ. ಅದಕ್ಕೆ 5 ರಿಂದ ಗುಣಿಸಿರಿ. ಅದಕ್ಕೆ 5ನ್ನು ಕೂಡಿಸಿರಿ. ಈಗ 10 ರಿಂದ ಗುಣಿಸಿರಿ. 10ನ್ನು ಕೂಡಿಸಿರಿ, ನೀವು ಉತ್ತರ ಹೇಳಿರಿ.. 
        
     ಉತ್ತರ ಪಡೆಯುವ ವಿಧಾನ : ಎರಡು ಅಂಕೆಯ ಸಂಖ್ಯೆ ಉತ್ತರವಾಗಿದ್ದಾಗ ಮೇಲೆ ತಿಳಿಸಿದಂತೆ ಉತ್ತರದ ಕೊನೆಯ ಒಂದು ಅಂಕೆಯನ್ನು ತೆಗೆದು ಹಾಕಿ ಉಳಿದ ಅಂಕೆಯಿಂದ ಒಂದನ್ನು ಕಳೆದರೆ ಉತ್ತರ ಅಂದರೆ ಎದುರಾಳಿಯ ಮನಸ್ಸಿನಲ್ಲಿರುವ ಅಂಕೆ ಬರುತ್ತದೆ. 
         
    ಉದಾ: ಉತ್ತರ 60 ಇದ್ದಾಗ ಶೂನ್ಯವನ್ನು ತೆಗೆದು ಹಾಕಿ ಒಂದನ್ನು ಕಳೆದರೆ ಐದು ಬರುತ್ತದೆ. ಆದರೆ ಉತ್ತರವು ಮೂರು ಅಂಕೆಯ ಸಂಖ್ಯೆಯಿದ್ದಾಗ ಈ ನಿಯಮವು ಅನ್ವಯವಾಗುವದಿಲ್ಲ. ಇಲ್ಲಿ ತುದಿಯ ಎರಡು ಅಂಕೆಗಳನ್ನು ತೆಗೆದು ಉಳಿದದ್ದರಲ್ಲಿ ಒಂದನ್ನು ಕಳೆಯಬೇಕು. ಉತ್ತರವು 860 ಇದ್ದಾಗ  ಎದುರಾಳಿಯ ಮನಸ್ಸಿನಲ್ಲಿದ್ದ ಅಂಕೆ 7. 
     
      ಇಲ್ಲಿ ಸವಾಲುಗಾರ 10 ರೊಳಗಿನ ಅಂಕೆಯನ್ನು ಮನಸ್ಸಿನಲ್ಲಿಡಿರಿ ಎಂದಿದ್ದರೂ ಇದು ಅನಿವಾರ್ಯವಲ್ಲ. ಏಕೆಂದರೆ ಇಲ್ಲಿ ಉತ್ತರದಲ್ಲಿರುವ ಅಂಕಿಗಳ ಸಂಖ್ಯೆ ಮಹತ್ವ ಪಡೆಯುತ್ತದೆ. 9 ಇದು 10 ರೊಳಗಿನ ಅಂಕೆಯಾಗಿದ್ದರೂ ಇಲ್ಲಿ ಸವಾಲುಗಾರನು ತಿಳಿಸಿದಂತೆ ಲೆಕ್ಕ ಮಾಡಿದಾಗ ಉತ್ತರವು 4 ಅಂಕೆಯದಾಗಿರುತ್ತದೆ  ಒಂದು ಅಂಕೆಯನ್ನು ತೊಡೆದು ಹಾಕಿ ಒಂದನ್ನು ಕಳೆಯುವ ನಿಯಮ ಇಲ್ಲಿ ಹೊಂದದು ಇಲ್ಲಿ ಎರಡು ಅಂಕೆಗಳನ್ನು ತೊಡೆದು ಹಾಕಿ 1ನ್ನುಕಳೆದರೆ ಮಾತ್ರ ಎದುರಾಳಿಯ ಮನಸ್ಸಿನಲ್ಲಿರುವ ಅಂಕೆಯು ದೊರೆಯುತ್ತದೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಗಣಿತಗಳಲ್ಲಿ ಉತ್ತರವು ಎರಡಕ್ಕಿಂತ ಹೆಚ್ಚು ಅಂಕೆಗಳಲ್ಲಿದ್ದಾಗ ಉತ್ತರದ ಕೊನೆಯ ಎರಡು ಅಂಕೆಗಳನ್ನು ತೆಗೆದು ಹಾಕಿ ಅದರಿಂದ ಒಂದನ್ನು ಕಳೆಯಬೇಕೆಂದು ಅಧ್ಯಯನದ ವೇಳೆಗೆ ಕಂಡುಕೊಳ್ಳಲಾಗಿದೆ.ಇದು ಈ ಗಣಿತದ ಗುಟ್ಟು.

 ಮತ್ತೊಂದು ಬಗೆಯ ಗಣಿತ
        ಸವಾಲು  6. ಒಂದು ಅಂಕೆ ಅಥವಾ ಸಂಖ್ಯೆಯನ್ನು ಮನಸ್ಸಿನಲ್ಲಿಡಿರಿ. ಅದನ್ನು ಎರಡರಿಂದ ಗುಣಿಸಿರಿ. ಉತ್ತರಕ್ಕೆ ಮೂರನ್ನು ಕೂಡಿಸಿರಿ. ಬಂದ ಉತ್ತರವನ್ನು ಐದರಿಂದ ಗುಣಿಸಿರಿ. ಉತ್ತರ ಹೇಳಿರಿ. ಇದು ಸವಾಲು 
      
      ಉತ್ತರ ಪಡೆಯುವ ವಿಧಾನ:  ಉತ್ತರದಲ್ಲಿಯ 15ನ್ನು ಕಳೆದು ಬಂದ ಉತ್ತರದ ಕೊನೆಯ ಅಂಕೆಯನ್ನು ತೆಗೆಯಬೇಕು. ಇಲ್ಲಿ ಶೂನ್ಯವನ್ನು ತೆಗೆಯಬೇಕು. ಯಾಕೆಂದರೆ ಇಂತಹ ಗಣಿತದಲ್ಲಿ  ಉತ್ತರದ ಕೊನೆಯಲ್ಲಿರುವದು  ಸೊನ್ನೆಯಾಗಿರುತ್ತದೆ 
ಉದಾ: 8 ಗುಣಿಸು 2=16, 16+3=19, 19 ಗುಣಿಸು5=95, 95-15=80, ಕೊನೆಯ ಸೊನ್ನೆ ತೆಗೆಯಿರಿ 8 ಇದು ಎದುರಾಳಿಯ ಮನಸ್ಸಿನಲ್ಲಿರುವ ಅಂಕೆಯಾಗಿದೆ.
        
     ಸವಾಲು 7. ಒಂದು ಅಂಕೆ/ಸಂಖ್ಯೆ ಗ್ರಹಿಸಬೇಕು. ಅದಕ್ಕೆ ಎರಡರಿಂದ ಗುಣಿಸಬೇಕು. ಬಂದ ಉತ್ತರಕ್ಕೆ 3 ರಿಂದ ಗುಣಿಸಿ ಉತ್ತರಕ್ಕೆ 5ರಿಂದ ಗುಣಿಸು ಉತ್ತರ ಎಷ್ಟು?  
        
     ಉತ್ತರ ಪಡೆಯುವ ವಿಧಾನ: ಬಂದ ಉತ್ತರದ ಸಂಖ್ಯೆಯ ಮುಂದಿನ ಶೂನ್ಯ ತೆಗೆದು ಹಾಕಿ 3ರಿಂದ ಭಾಗಿಸಿದರೆ ಉತ್ತರ ಬರುತ್ತದೆ. ಅಥವಾ ಉತ್ತರಕ್ಕೆ 30 ರಿಂದ ಭಾಗಿಸಿದರೆಎದುರಾಳಿಯು  ಗ್ರಹಿಸಿಕೊಂಡ ಸಂಖ್ಯೆ ದೊರೆಯುತ್ತದೆ.
.      
      ಸವಾಲು 8- 10 ರಿಂದ 200 ರ ವೊಳಗಿನ ಒಂದು ಸಂಖ್ಯೆಯನ್ನು ಇಟ್ಟುಕೊಳ್ಳಿರಿ. ಅದಕ್ಕೆ 2 ರಿಂದ ಗುಣಿಸಿರಿ. ಬಂದ ಉತ್ತರಕ್ಕೆ 5ರಿಂದ ಗುಣಿಸಿರಿ ಬಂದ ಉತ್ತರಕ್ಕೆ 10 ಕೂಡಿಸಿ ನಂತರ 10 ರಿಂದ ಗುಣಿಸಿರಿ. ಉತ್ತರ ಹೇಳಿರಿ. 
     
     ಗುಟ್ಟು : ಎದುರಾಳಿಯಿಂದ ಬಂದ ಉತ್ತರದಲ್ಲಿ ಕೊನೆಯ 2 ಅಂಕೆಯನ್ನು ಹೊಡೆಯಬೇಕು. ಆಗ ಉಳಿದ ಸಂಖ್ಯೆಯಲ್ಲಿ 1ನ್ನು ಕಳೆಯಬೇಕು.. ಬಂದ ಉತ್ತರವೇ ಎದುರಾಳಿಯು ಮನಸ್ಸಿನಲ್ಲಿಟ್ಟುಕೊಂಡ ಸಂಖ್ಯೆ. 
    
     ತಾಳೆ ನೋಡುವದು, ಎದುರಾಳಿಯ ಮನಸ್ಸಿನ ಸಂಖ್ಯೆ 120 ಇದ್ದಾಗ ಉತ್ತರವು 12100 ಇರುತ್ತದೆ. ಇದರಲ್ಲಿ ಕೊನೆಯ ಎರಡು ಸೊನ್ನೆ ತೆಗೆದು ಒಂದನ್ನು ಕಳೆದರೆ ಉತ್ತರವು 120 ಆಗಿರುತ್ತದೆ. ಇದು ಎದುರಾಳಿಯು ಮನಸ್ಸಿನಲ್ಲಿಟ್ಟುಕೊಂಡ ಸಂಖ್ಯೆ. 

      . ಸವಾಲು 9. -50 ರಿಂದ 1000 ವರೆಗಿನ ಒಂದು ಸಂಖ್ಯೆಯನ್ನು ಮನಸ್ಸಿನಲ್ಲಿಡಿರಿ. ಅದರಲ್ಲಿ 25 ನ್ನು ಕಳೆಯಿರಿ. ಉತ್ತರಕ್ಕೆ 50 ನ್ನು ಕೂಡಿಸಿರಿ. 10 ರಿಂದ ಗುಣಿಸಿರಿ. ಬಂದ ಉತ್ತರದಿಂದ  ಮತ್ತೆ 250 ಕಳೆಯಿರಿ. ಉತ್ತರವನ್ನು ಹೇಳಿರಿ.  ನಿಮ್ಮ ಮನಸ್ಸಿನಲ್ಲಿದ್ದ ಸಂಖ್ಯೆಯನ್ನು ನಾನು ಹೇಳುತ್ತೇನೆ.
  
     ಗುಟ್ಟು: ಎದುರಾಳಿ ಹೇಳಿದ ಉತ್ತರದ ಕೊನೆಯ ಸೊನ್ನೆಯನ್ನು ತೆಗೆದು ಹಾಕಿದರೆ ಗಣಿತದ ಉತ್ತರ ಅಂದರೆ ಎದುರಾಳಿಯ ಮನಸಿನಲ್ಲಿರುವ ಸಂಖ್ಯೆ ದೊರೆಯುತ್ತದೆ. 

    ತಾಳೆ ವಿವರ: ಎದುರಾಳಿಯ ಮನಸ್ಸಿನಲ್ಲಿದ್ದ ಸಂಖ್ಯೆ 60 ಎಂದಾದರೆ 60-25=35, 35+50=85, 85ಗುಣಿಲೆ10=850, 850-250=600, 600 ರಲ್ಲಿ ಒಂದು ಸೊನ್ನೆ ತೆಗೆದಾಗ 60 ಉಳಿಯುತ್ತದೆ. ಇದು ಮೇಲಿನ 4ನೆಯ ಗಣಿತದಂತೆ ತೋರಿದರೂ ಇಲ್ಲಿಯ ಗಣಿತ ಬೇರೆ ಹಾಗೂ ನಿಯಮ ಬೇರೆ. 
      
    ಮೇಲಿನ ಎಲ್ಲ ಗಣಿತಗಳಲ್ಲಿ ಸವಾಲುಗಾರನು ಎದುರಾಳಿಯ ಮುಂದೆ ಗಣಿತವನ್ನು ವಿವರಿಸುವ ಗೊಡವೆಗೆ ಹೋಗ ಕೂಡದು  ಗುಟ್ಟು ರಟ್ಟಾಗುತ್ತದೆ. ಗಣಿತದ ಸ್ವಾರಸ್ಯ ಕೆಡುತ್ತದೆಯೆಂದು ಮತ್ತೊಮ್ಮೆ ಹೇಳ ಬಯಸುತ್ತೇನೆ. ಎದುರಾಳಿಯ ಮನಸ್ಸಿನಲ್ಲಿದ್ದ ಅಂಕೆ/ಸಂಖ್ಯೆಯನ್ನು ಹೇಳಿ ವಿರಮಿಸುವದಷ್ಟೇ ಸವಾಲುಗಾರನ ಕೆಲಸವಾಗಬೇಕು. ಬೇರೆ ಬಗೆಯ ಗಣಿತ ಗಳನ್ನು ಇನ್ನೊಮ್ಮೆ ಕಳಿಸುತ್ತೇನೆ.




Saturday 23 June, 2012

ನಮ್ಮ ಗಿಡ ಮರ ಬಳ್ಳಿಗಳು-ಕರಿಪೊಟ್ಲೆ ಹಣ್ಣು


ಕರಿಪೊಟ್ಲೆ ಹಣ್ಣು ( Solanum nigrum -Lenn-Black Night Shade)



       ಕರಿಪೊಟ್ಲೆ ಹಣ್ಣಿನ ಗಿಡವೆಂಬ ಹೆಸರು ಕರ್ನಾಟಕದ ಕನ್ನಡ ಕರಾವಳಿಯಲ್ಲಿ ಕೇಳಿ ಬರುತ್ತದೆ. ಕರ್ನಾಟಕದಲ್ಲಿ  ಈ ಗಿಡಕ್ಕೆ ಇನ್ನೂ ಅನೇಕ ಹೆಸರುಗಳಿವೆ.ಕಾಕಪೊಟ್ಲೆ, ಕಾಗೆ ಸೊಪ್ಪಿನ ಗಿಡ, ಕಾಕಮಾಚಿ,  ಕಾಚಿಸೊಪ್ಪು  ಇತ್ಯಾದಿ. ದಕ್ಷಿಣ ಕರ್ನಾಟಕದಲ್ಲಿ ಇದು ಗಣಿಕೆ ಸೊಪ್ಪು ಎಂಬ ಹೆಸರಿನಲ್ಲಿ ಪರಿಚಿತವಾಗಿರುತ್ತದೆ.ಇಂಗ್ಲಿಷಿನಲ್ಲಿ `ಬ್ಲಾಕ್ ನೈಟ್ ಶೇಡ್ ಎನ್ನುತ್ತಾರೆ. ಸೊಲ್ಯಾನಂ ನೈಗ್ರಂ ಎಂಬುದು ಇದರ ಸಸ್ಯ ಶಾಸ್ರ್ರೀಯ ಹೆಸರಾಗಿದೆ

       ಕರಿಪೊಟ್ಲೆ ಹಣ್ಣಿನ ಗಿಡವು ಬಿತ್ತದೆ ಬೆಳೆಯುವ ಚಿಕ್ಕ ಕಳೆ ಸಸ್ಯ. ಇದು ಭಾರತದ ಎಲ್ಲ ಕಡೆ ಕಂಡುಬರುತ್ತದೆ. ಮಳೆಗಾಲದಲ್ಲಿ ನಿಮ್ಮ ತೋಟದಲ್ಲಿ ಬೇಲಿ ಬದಿಯಲ್ಲಿ, ತಿಪ್ಪೆಯಲ್ಲಿ ತಂತಾನೆ ಹುಟ್ಟಿಕೊಂಡು ಹಣ್ಣು ಕಾಯಿ ಬಿಟ್ಟು ನಳನಳಿಸುತ್ತದೆ. ನೆಲದಲ್ಲಿ ನೀರಿನ ಹಸಿಯಿದ್ದರೆ ಇದು ಬೇಸಿಗೆಯಲ್ಲಿಯೂ ಸೊಂಪಾಗಿ ಬೆಳೆಯುತ್ತದೆ. ಹಣ್ಣುಗಳು ನೇರಳೆ ಬಣ್ಣದಲ್ಲಿರುತ್ತವೆ

 ಗಣಿಕೆ ಸೊಪ್ಪುಗಳಲ್ಲಿಯ ಆಹಾರ ಗುಣ ಔಷಧ ಗುಣವನ್ನು ತಿಳಿದುಕೊಂಡ ಹಿರಿಯರು  ಬಹುಕಾಲದಿಂದ ಈ ಗಿಡವನ್ನು ಅಡುಗೆಯಲ್ಲಿ ತರಕಾರಿ ಸೊಪ್ಪಾಗಿ ಬಳಸುತ್ತಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಬೆರಕೆ ಸೊಪ್ಪು ಮಾರಾಟ ಮಾಡುವವರು ದೊಡ್ಡದೊಡ್ಡ ಚೀಲಗಳಲ್ಲಿ ಗಣಿಕೆಸೊಪ್ಪನ್ನು ಚಿಕ್ಕ ಚಿಕ್ಕ ಬುಟ್ಟಿಗಳಲ್ಲಿ ಇದರ ಕಾಯಿಗಳನ್ನು ತುಂಬಿಕೊಂಡು ಮಾರಾಟಕ್ಕೆ ತರುತ್ತಾರೆ.  ಅಲ್ಲಿ ಸೊಪ್ಪು ಮತ್ತು ಕಾಯಿಗಳನ್ನು ಸಾರು ಹುಳಿ ಪಲ್ಯ ಬತ್ಸಾರು ಮಸ್ಸೊಪ್ಪುಗಳಲ್ಲಿ ಬಳಸಲಾಗುತ್ತದೆ. ಇದರ ಅಡುಗೆಯನ್ನು ಆಯಾ ಸಂದರ್ಭದಲ್ಲಿ ಮನೆ ಮದ್ದಿನಂತೆ ಬಳಸುತ್ತಾರೆ. ದೇಹದಲ್ಲಿ ರಕ್ತದ್ರವ ಕಡಿಮೆಯಿದ್ದಾಗ ಚಿಗುರಿನ ತಂಬುಳಿ ಮಾಡಿ ಕುದಿಸಿ ಅಥವಾ ತಂಪಾಗಿ ತಿಂಗಳಿಗೆ ಒಂದೆರಡು ವಾರ ಸೇವಿಸಬೇಕು. ಬಾಯಿಹುಣ್ಣು ಮಲ ಬದ್ಧತೆಯಿದ್ದಾಗ ಹರಿವೆ ಪಲ್ಯದಂತೆ ಇದರ  ಕುಡಿಗಳನ್ನು ಚಿವುಟಿ ಪಲ್ಯಮಾಡಿ  ಉಣ್ಣಬೇಕು ಎಂದು ಅವರು ತಿಳಿಸುತ್ತಾರೆ.


      ಕರಾವಳಿಯ ಜನರು ಇದನ್ನು ತರಕಾರಿಯಾಗಿ ಗುರುತಿಸುವುದು ಕಡಿಮೆ. ಕೆಲವರು ಇದರ ಎಲೆಯ ತಂಬುಳಿ ಮಾಡಿ ಉಣ್ಣುವದುಂಟು. ಮಕ್ಕಳು ಹಣ್ಣನ್ನು ತಿನ್ನುತ್ತಾರೆ.  


       ಹಣ್ಣುಗಳು ದೇಸಿ ತಳಿಯ ಟೊಮೆಟೊ ಹಣ್ಣಿನ ಗೊಂಚಲ ಹಾಗೆ ಕಾಣುತ್ತವೆ. ಆದರೆ ಆಕಾರದಲ್ಲಿ ಈ ಹಣ್ಣುಗಳು ಚಿಕಣಿಯಾಗಿದೆ. ಟೊಮೆಟೊ ಜೊತೆ ಹೋಲಿಸಿದರೆ ಗಲಿವರ ಲಿಲಿಪುಟ್ ಸಂಬಂಧ. ಕರಿಬಣ್ಣವೆಂದು ಗುರುತಿಸಲಾಗುವ ಕಡುನೀಲಿ ಬಣ್ಣದ ಕಾಳುಮೆಣಸಿನ ಗಾತ್ರದ ಹಣ್ಣುಗಳಲ್ಲಿ ಬೀಜಗಳು ತುಂಬಿರುತ್ತವೆ. ಒತ್ತಿದರೆ ಪಿಚಕ್ಕನೆ ಹಾರುತ್ತವೆ. ಪೊಟ್ಲೆ  ಹಣ್ಣಿನ ಗಿಡದಲ್ಲಿ  ಇನ್ನೊಂದು ಪ್ರಬೇಧವಿದ್ದು ಅದರ ಕಾಯಿ ತುಸು ಹಳದಿಯಾಗಿದ್ದು ಇದನ್ನು ದಕ್ಷಿಣ ಕರ್ನಾಟಕದಲ್ಲಿ ಬಿಳಿಗಣಿಕೆ ಎನ್ನುತ್ತಾರೆ. ಬಿಳಿಗಣಿಕೆ ಗಿಡದ ಎಲೆಗಳು ಕರಿ ಗಣಿಕೆಗಿಂತ ದೊಡ್ಡವು. ಇದರ ಹಣ್ಣುಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ.  .
      
ಗಣಿಕೆಯ  ಪ್ರತಿ ಹಣ್ಣು ಔಷಧಯುಕ್ತ ಟೊನಿಕ್ ಗುಳಿಗೆಯಾಗಿದೆ. ಇದರಲ್ಲಿ ಷಡ್ರಸಗಳಿರುತ್ತವೆ. ಹಣ್ಣನ್ನು ತಿನ್ನುವ ಮಕ್ಕಳ ಆರೋಗ್ಯವು ಉತ್ತಮವಾಗಿರುತ್ತದೆ. ಕಫನಾಶಕವಾಗಿದ್ದು ಹೃದಯ ರೋಗ ತಡೆಯುವ, ಮೂತ್ರಸ್ರಾವ ಉತ್ತೇಜಿಸುವ, ಕೆಮ್ಮು ಹಾಗೂ ನೆಗಡಿಗಳನ್ನು ಹೋಗಲಾಡಿಸುವ ಇತ್ಯಾದಿ ಹಲವಾರು ಔಷಧೀಯ ಗುಣಗಳು ಇದರಲ್ಲಿವೆ. ಹಾಗೆಂದು ಬೊಗಸೆ ಗಟ್ಟಲೆ ಹಣ್ಣನ್ನು ತಿನ್ನಬಾರದು. 

      ಇದು ಆಡುಗೆಯಲ್ಲದೆ ಪ್ರತ್ಯೇಕವಾಗಿ ಔಷಧ ತಯಾರಿಕೆಯಲ್ಲ್ಲಿಯೂ ಬಳಕೆಯಲ್ಲಿದೆ. ಇಡೀ ಗಿಡವನ್ನು ಅರೆದು ಕುದಿಸಿ ತಯಾರಿಸಿದ ಕಷಾಯ ಸೇವನೆಯು ಚರ್ಮರೋಗಕ್ಕೆ, ಮೂಲವ್ಯಾಧಿಗೆ, ಪಿತ್ತಕೋಶದ ಸಮಸ್ಯೆಗಳಿಗೆ ಔಷಧವೆಂದು ತಿಳಿದು ಬರುತ್ತದೆ 

      ಇಂತಹ ಅಮೂಲ್ಯವಾದ ಗಿಡವನ್ನು ರಕ್ಷಿಸಿ ಬೆಳೆಸುವ ಹೊಣೆ ನಿಮ್ಮದು. ನಿಮ್ಮ ತೋಟದಲ್ಲಿ ಇದನ್ನು ಹಿರಿಯರ ಸಹಾಯದಿಂದ ಗುರುತಿಸಿರಿ. ತುಸು ಆರೈಕೆ ಮಾಡಿರಿ. ನಿಮ್ಮ ಮನೆಯಂಗಳದ ಒಂದು ಮಾರುದ್ದದ ಜಾಗದಲ್ಲಿ .ನಿಮ್ಮದೇ ಆದ ಚಿಕ್ಕ ಕೈತೋಟ ಮಾಡಿ. ಕೀಟನಾಶಕ ಆರೋಗ್ಯ ಮಾರಕ ಗೊಬ್ಬರ ಬಳಸದೆ ನೀವು ಬೆಳೆದ ಸೊಪ್ಪನ್ನು ನಿಮ್ಮ ತಾಯಿಯ ಕೈಗಿಡಿ. ನೀವು ಬೆಳೆದ ಇದರ ಹಣ್ಣನ್ನು  ನಿಮ್ಮ ಜೊತೆಯವರೊಂದಿಗೆ ಹಂಚಿಕೊಂಡು ತಿನ್ನಿರಿ. .

    ನೈಸರ್ಗಿಕವಾಗಿ ಬೆಳೆದ ಈ ಸೊಫ್ಫು ಮತ್ತು ಈ ಹಣ್ಣುಗಳ  ಬೇಡಿಕೆಯನ್ನು ಗಮನಿಸಿದ ತೋಟಿಗರು ಇದನ್ನು ತೋಟದ ಬೆಳೆಯಾಗಿಸಿಕೊಂಡಿರುವದು ತಿಳಿದು ಬರುತ್ತದೆ. ಆದರೆ ಇವರು ಇದನ್ನು ಮಾರಕ ರಸಗೊಬ್ಬರ  ಕೀಟ ನಾಶಕ ಬಳಸಿ ಬೆಳೆಸಬಾರದು ಅಲ್ಲವೇ?       

 ಛಾಯಾಚಿತ್ರಗಳು ಅಂತರ್ಜಾಲ ಕೃಪೆ 

Tuesday 19 June, 2012

ಪರಂಪರೆ (Parampare) - 2


ಪರಂಪರೆ (Parampare) - 2


             ಈ ಹಿಂದೆ ಪರಂಪರೆ ಎಂಬ ತಲೆ ಬರಹ ದೊಂದಿಗೆ ಜಲಭೇದಿ ಮತ್ತು ದಬ್ ಗಳ್ಳಿ ಗಿಡಗಳ ಬಗ್ಗೆ ಬರೆದಿದ್ದೆ. ಆ ದಿನ ಸಂಗ್ರಹಿಸಿದ ಇನ್ನಷ್ಟು  ಶಬ್ದ ಮಾಹಿತಿ ಗಳು  ನನ್ನ ಬಳಿ ಉಳಿದು ಕೊಂಡಿವೆ. ನೀವು ಸವಡಿದ್ದರೆ ಓದಿ.-ಓದುತ್ತೀರಾ? .
           ದಕ್ಷಿಣ ಕನರ್ಾಟಕದ  ಪ್ರಮುಖ ವಾಗಿ ಬೆಂಗಳೂರು ಸುತ್ತು ಮುತ್ತಲಿನ  ಹಳ್ಳಿಗಳಲ್ಲಿ ಬಸ್ಸಾರು  ಮಸ್ಸೊಪ್ಪುಗಳ ಹೆಸರನ್ನು ಕೇಳಿದ್ದೆ. ಮಂಗಲಾ ಅವರ ಗೆಳತಿಯ ಮನೆಯಲ್ಲಿ ಬೆರಕೆ ಸೊಪ್ಪಿನ ಬಸ್ಸಾರು ತಿಂದಿದ್ದೆ..ಆಗಬಸ್ಸಾರು ,ಮಸ್ಸೊಪ್ಪುಗಳ ನಡುವಿನ ವ್ಯತ್ಯಾಸ  ಸ್ಪಷ್ಟವಾಗಿ ತಿಳಿದಿರಲಿಲ್ಲ. ತಿಳಿಯ {ಸ}ಲು  ಅರ್ಹರು ದೊರೆತಿರಲಿಲ್ಲ.29-9-10ಬೆಂಗಳೂರಿನಿಂದ ಹೊನ್ನಾವರಕ್ಕೆ ಬರುವಾಗ ಬಸ್ಸಿನಲ್ಲಿ  ಈ ಬಗ್ಗೆ ಮಾಹಿತಿ ದೊರೆಯಿತು

           ಈ ದಿನ ಬಸ್ಸಿನಲ್ಲಿ ನನ್ನ ಬದಿಯಲ್ಲಿ ಕುಳಿತಿದ್ದ ಉಷಾ ಬಸ್ಸಾರು.ಮಸ್ಸೊಪ್ಪು ಮತ್ತು  ಸಾರಿನ ಪುಡಿ ಅಡುವ ವಿಧಾನವನ್ನು ತಿಳಿಸಿದರು..  ಇವರು ಪ್ರಾಧ್ಯಾಪಕರಾದ್ದರಿಂದಲೋ ಬಸ್ಸಿನಲ್ಲಿ ನಾನು ನಿರುಂಬಳವಾಗಿದ್ದರಿಂದಲೋ ಇವರು ನೀಡುವ ವಿವರಣೆ ನನ್ನ ತಲೆ ಹೊಕ್ಕಿತು. ಮಸ್ಸೊಪ್ಪು ಒಂದು ತರಕಾರಿ ಸೊಪ್ಪಲ್ಲ. ಅದೊಂದು ಸಾರು ಎಂಬುದು ಸ್ಪಷ್ಟವಾಯಿತು. ಹೊಸ ನಾಡಿನ ಅಡುಗೆಗೆ ಸಂಬಂಧಿಸಿ ಇನ್ನಷ್ಟು ಹೊಸ ಶಬ್ದಗಳು ದೊರೆತವು.  ಹಾಗೆ ನೋಡಿದರೆ ಇವು ಹೊಸ ಶಬ್ದಗಳಲ್ಲ, ನಿಮ್ಮ ಸುತ್ತ ಮುತ್ತಲಿನವುಗಳೇ ಆಗಿವೆ. ಇವು ನನಗೆ ಹೊಸವು ಅಷ್ಟೆ. ನನ್ನ ಇಲಿ  ಈ ಹಾಳೆಯ ಮೇಲೆ ಮೂಡಿಸಿದ ನಿಮ್ಮ ಶಬ್ದಗಳ  ಗಮ್ಮತ್ತು ನಿಮಗೂ ಸೇರಲಿ, ಅದರ ಗಮತ  ನಿಮ್ಮ ಮೂಗಿಗೂ ಮುಟ್ಟಲಿ ಎಂದು ಕೊಂಡು  ಇವುಗಳನ್ನು ಈ ಟಪಾಲಿಗೆ ರವಾನಿಸಿದ್ದೇನೆ. ಓದಿ.ರುಚಿ ತಿಳಿಸಿ

           ಕಟ್ಟು-  [ನಾಮ]ಬೇಳೆ , ಬೇಯಿಸಿ ಬಸಿದುಕೊಂಡ ರಸ(ನೀರು).  ಇದುಸತ್ವಭರಿತ ವಾದದ್ದು. ಇದನ್ನು ಬೇರೊಂದು ಅಡುಗೆಯಾಗಿ ಪರಿವತರ್ಿಸುವ ಕಲೆ ಇಲ್ಲಿಯ ಮುದ್ದೆ ನಾಡಿನ ಮಹಿಳೆಯರಿಗೆ ಚೆನ್ನಾಗಿ ಗೊತ್ತು. ಕಸ ಮುಸರೆ ಮಾಡಿ ಬದುಕುವ ಮಹಿಳೆಯರು ಕೂಡ  ಪ್ರತಿಯೊಬ್ಬರೂ ಈ ಅಡುಗೆಯನ್ನು ಬಲ್ಲರು.  ಉಡುಪಿಯ ದೊಡ್ದ ಅಡುಗೆ ಕಲಾವಿದರು ಬೇಳೆ ಬೇಯುವಾಗ ತಂಬಿಗೆಗಟ್ಟಲೆ ಹೆಚ್ಚಿಗೆ ನೀರುಸುರಿದು ತಿಳಿಯನ್ನು ಬಗ್ಗಿಸಿಕೊಂಡು ಅನ್ನದ ಜೊತೆ ಉಣ್ಣಲು ರುಚಿಕಟ್ಟಾದ ತಿಳಿಸಾರು ಮಾಡುತ್ತಾರೆ. ನಿತ್ಯದ ಮನೆಯಡುಗೆಯಲ್ಲಿ ಅನೇಕ ಗೃಹಿಣಿಯರು ಅನ್ನವನ್ನು ಬಾಗಿಸಿ ಆ ತಿಳಿಯನ್ನು ಹೊರ ಚೆಲ್ಲುವ ತಪ್ಪನ್ನು ಮಾಡುವದುಂಟು. ಆದರೆ ಅನ್ನಬಾಗಿಸಿ ಪಡೆದ ತಿಳಿಯನ್ನು ಮಸಾಲೆ ಸೇರಿಸಿ ತಂಬುಳಿ ತಯಾರಿಸ ಬಲ್ಲ ಜಾಣೆಯರೂ ನಮ್ಮಲ್ಲಿದ್ದಾರೆ.ಆದರೆ ಅದು ಜಾರಿಯಲ್ಲಿರುವದು ಅತ್ಯಲ್ಪ.ಇತ್ತೀಚೆಗಂತೂ ಈ ಅಡುಗೆ
ಇಲ್ಲವಾಗಿ ಬಿಟ್ಟಿದೆ.

           ಕಟ್ಟಿನ ಸಾರು-ಬೇಳೆ ಕಟ್ಟಿಗೆ ವಗ್ಗರಣೆ ಕೊಟ್ಟು ಕಟ್ಟಿನ ಸಾರು ಮಾಡುತ್ತಾರಷ್ಟೆ.  ಬಸ್ಸಾರು  ಕೂಡ ಕಟ್ಟಿನ ಸಾರು .ಆದರೆ ಇದು  ಬೇಳೆಯ ಜೊತೆಗೆ ತರಕಾರಿ ಬೇಯಿಸಿ  ಬಾಗಿಸಿಕೊಂಡ ನೀರಿನ ಸಾರು . ಸರಿಯಾ?

           ಬಸ್ಸಾರು.[ನಾ]- ಬಸಿದ ಸಾರು]- ದ ಕ್ಷಿ ಣ  ಕನರ್ಾಟಕದ  ಬಸ್ಸಾರು ಇದು ಸಾರದ ಸಾರು. ರಾಗಿ ಮುದ್ದೆ ಜೊತೆಗೆ ಬಸ್ಸಾರು ಇರಬೇಕು ಎಂಬುದುಇಲ್ಲಿಯ ಊಟ ಪ್ರಿಯರ ಮಾತು. ಸಾಮಾನ್ಯವಾಗಿ  ಹೊಲ ಗದ್ದೆಗಳಲ್ಲಿ ತ ಂತಾನೆ ಭೂಮಿಯ ಆರೈಕೆಯಲ್ಲಿ ಬೆಳೆದ ಸೊಪ್ಪು ತರಕಾರಿಗಳನ್ನು  ಬಸ್ಸಾರಿಗಾಗಿ ಬಳಸುತ್ತಾರೆ. ಹೊನಗೊನೆ  ಗಣಿಕೆ  ಕಿರಕಸಾಲೆ, ಇತ್ಯಾದಿ ಕಳೆ  ಸೊಪ್ಪುಗಳು ಈ ಅಡುಗೆಯಲ್ಲಿ ಬಳಕೆಯಾಗುತ್ತವೆ.ಹಲವಾರು ಬಗೆಯ ಹೊನಗೊನೆಗಳು  ಬೆಂಗಳೂರಿನ ಹಳ್ಳಿಗಳಲ್ಲಿ  ಯಲ್ಲದೆ ಈ ಮೆಗಾ ಸಿಟಿಯ ಹಾದಿ ಬೀದಿ. ಮನುಷ್ಯ ಪಾಳು ಬೀಳಿಸಿದ ಭೂ ಮಿಯಲ್ಲಿ  ಕೂಡ ಸೊಂಪಾಗಿ ಬೆಳೆಯುತ್ತವೆ.

            ಈದಿನಗಳಲ್ಲಿ ್ಲ ಕನರ್ಾಟಕ ಜಾನಪದ ಅಕಾಡೆಮಿಯ ಕನರ್ಾಟಕ ಜಾನಪದ ನಿಘಂಟುರಚನಾ ಲೋಕದಲ್ಲಿ ನಾನು ವಿಹರಿಸುತ್ತಿದ್ದೆ. ಈಗ ಕಿವಿಗೆ ಬಿದ್ದ ಪ್ರತಿ ಯೊಂದು ಶಬ್ದವೂ  ಮುತ್ತಾಗಿ ನನಗೆ ಹೊಳೆಯುತ್ತಿತ್ತು. ಆದ್ದರಿಂದ ಮುದ್ದೆಯನ್ನೂ ಬಿಡದೆ ನನ್ನ ಒಡಲಿಗೆ ಅಲ್ಲ- ನನ್ನ ಈ  ಹಾಳೆಗೆ ತುಂಬಿಕೊಂಡೆ.

              ಮುದ್ದೆ- ರಾಗಿಯ ಹಿ ಟ್ಟನ್ನು ಬೇಯಿಸಿ ತಯಾರಿಸುವ ರಾಗಿ ನಾಡಿನ ಒಂದು ಅಡುಗೆ  .  ಬೆಂಗ ಳೂರಿನ ಹೊಟೆಲ್ನಲ್ಲಿ  ರಾಗಿಮುದ್ದೆ ಮಾರ್ತಾರೆ. ಕರಾವಳಿಯ ಹೊಟೆಲ್ ಗಳ ಊಟದ ತಾಟಿನಲ್ಲಿ ಅನ್ನ ಮಾರುವ ಹಾಗೆ.  ಮುದ್ದೆಗೆ   ಬಸ್ಸಾರು  ತುಂಬಾ ಜೋಡಿ.ಯಂತೆ  ಡಾ ರಾಮಚಂದ್ರೇ ಗೌಡರು ಈರುಚಿಯನ್ನು ಬಾಯಲ್ಲಿ ನೀರೂರುವಂತೆ ವಣರ್ಿಸಿ ಬರೆದ  ಅವ್ರದೊಂದುಲೇಖನದ ನೆನಪಾಯಿತು. ಅಲ್ಲಿ ಬಾಡಿನ ಬಸ್ಸಾರುನ  ವಿವರವಿದ್ದ ನೆನಪು. ನಮ್ಮಲ್ಲಿಯೂ ಮುದ್ದೆಗಳಿವೆ. ಆದರೆ ಇವು  ನಿಮ್ಮಲ್ಲಿಯಂತಹ ರಾಗಿ ಮುದ್ದೆಗಳಲ್ಲ ಅಕ್ಕಿ ಮುದ್ದೆಗಳು. ಅಕ್ಕಿಯನ್ನು ನೆನೆಯಿಸಿ ಅರೆದ{ರುಬ್ಬಿದ]ಹಸಿ ಹಿಟ್ಟಿನಿಂದ ಅಥವಾ ಗಿರಣಿಯಲ್ಲಿ ಬೀಸಿ ತಂದ ಒಣ ಹಿಟ್ಟಿ ನಿಂದ ಅಡುತ್ತಾರೆ. ಚಟ್ನಿ ಜೊತೆ ತಿನ್ನುತ್ತಾರೆ. ನಮ್ಮಲ್ಲಿಯ  ಮೀನಪಳ್ದೆ  ನಿಮ್ಮಲ್ಲಿಯ ಬಸ್ಸಾರು ಜೊತೆಯೂ  ಈಮುದ್ದೆಗಳನ್ನು ಮೆಲ್ಲಬಹುದು.

               ಮುದ್ದೆಯಂತಹ ಇನ್ನೊಂದು ಅಡುಗೆ ಮೋದಕ. ತುಸು ಮೇಲಂತಸ್ತಿನದು. ಮನುಷ್ಯ ಪ್ರಿಯ ಮುದ್ದೆಗೂ, ಚವತಿಗಣೇಶ ಪ್ರಿಯ ಮೋದಕಕ್ಕೂ, . ಹೆಸರಿನ ವ್ಯತ್ಯಾಸ ಬಿಟ್ಟರೆ ಅಡುವಲ್ಲಿ ಮತ್ತು ರುಚಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಹೆಸರಿನ ವ್ಯತ್ಯಾಸ ಗಮನಿಸಬೇಕು ಇದು ಕನ್ನಡದ ಮುದ್ದೆ ಅದು ಸಂಸ್ಕೃತದ ಮೋದಕ . ಇವುಗಳನ್ನು ಮೊದಲು ಅಟ್ಟವರು ಯಾರು? ಮುದ್ದೆ ಮೊದಲೋ ಮೋದಕ ಮೊದಲೋ? ತಲೆ ಕೆರೆದುಕೊಳ್ಳಬೇಕಿಲ್ಲ. ಕನ್ನಡದ ಮುದ್ದೆಯೇ ಮೊದಲು. ನೀವೇನಂತೀರಿ?

            ಮಸ್ಸೊಪ್ಪು- ಮಸೆದ ಸೊಪ್ಪು- ಇದು ಸೊಪ್ಪನ್ನು ಮಸೆದು ಮಾಡಿದ ಸಾರು-  ಆದರೂ ಇದು ಮಸ್ಸಾರೂ ಅಲ್ಲ; ಸೊಪ್ಪೂ ಅಲ್ಲ ಮಸೆದು ಅಟ್ಟ ಸೊಪ್ಪು ಇದು.  ಇದು ಮಸೆದ ಸೊಪ್ಪಿನ ಸಾರು. ಇದನ್ನು ಮಸ್ಸಾರು ಎಂದಿದ್ದರೆ ಚೆನ್ನಾಗಿತ್ತು. ನನ್ನ ತಲೆಗೆ ಮಸ್ಸೊಪ್ಪು ತಂದಿಟ್ಟ ಗೊಂದಲವಾದರೂ ತಪ್ಪುತ್ತಿತ್ತಲ್ಲವೇ? ಎಂದುಕೊಂಡೆ . ಮಸ್ಸೊಪ್ಪನ್ನು ಮಸ್ಸಾರು ಮಾಡಲು ನನಗೆ ಅಧಿಕಾರವಿಲ್ಲ . ಶಬ್ದ ಬ್ರಹ್ಮರು ಅವರು - ನಮ್ಮಪರಂಪರೆಯ ತೇರನ್ನು ನಮ್ಮ ತನಕ ಎಳೆದು ತಂದವರು-ನಮ್ಮ ಜಾನಪದರು. ನಿಘಂಟುಕಾರ ಶಬ್ದ ಕತರ್ಾರನಲ್ಲ; ಕೇವಲಸಂಗ್ರಾಹಕ . ಎಂದು ಅನುಭವಿಗಳು ಬರೆದ ವಾಕ್ಯ ನೆನಪಾಯಿತು. ನಾನು ಮಸ್ಸೊಪ್ಪನ್ನೆ ಒಪ್ಪಿಕೊಂಡೆ. ಮಸ್ಸೊಪ್ಪಿಗೆ ಚಕ್ಕೋತ ಪಾಲಕ ಮುಂತಾದ ಸೊಪ್ಪುಗಳು ರುಚಿ ಕೊಡುತ್ತವೆಯಂತೆ .ಬೇಯಿಸಿದ ಈ ಸೊಪ್ಪು ತರಕಾರಿಯನ್ನು ಮಸೆಯುವ ಕೋಲಿನಿಂದ ಅರೆದು  ಈ ಮೊದಲೇ ಬಸಿದು ಕೊಂಡ ನೀರಿಗೆ ಹಾಕಿ ಮತ್ತೆ ಕುದಿಸಿ ವಗ್ಗರಣೆ ಮಾಡಿ ಉಪ್ಪು ಸೇರಿಸುತ್ತಾರಂತೆ . ಇದೇ ಮಸ್ಸೊಪ್ಪು ಎಂಬ ಅಡುಗೆ. ಬಸ್ಸುಪ್ಪಿನಲ್ಲಿರುವಂತೆ ದ್ವೈತವಿಲ್ಲ ;  ಅದ್ವೈ ತ.ಅಂದರೆ ಇಲ್ಲಿ ಸಾರು ಮಾತ್ರ ಇದೆ. ಪಲ್ಯವಿಲ್ಲ.

          ಇಲ್ಲಿ ದೊರೆತ ಇನ್ನೊಂದು ಶಬ್ದ ಮಸೆ ಕೋಲು . ಬೆಟ್ಟದಲ್ಲಿ ಕಡತ ಮಾಡುವವರಿಗೆ ಕಟುಕರಿಗೆ ಕತ್ತಿ ಮಸೆಯುವ ಕಲ್ಲು ಗೊತ್ತು .  ನನಗೆ ಮಸೆಕೋಲು  ಇದುವರೆಗೆ ಗೊತ್ತಿರಲಿಲ್ಲ . ಬಸ್ಸಿನಿಂದಲೇ  ಮಾತಾಡಿದೆ. ಮಸೆಕೋಲು ಎಂಬ ಅಡುಗೆ ಸಾಹಿತ್ಯವೊಂದಿದೆಯಂತೆ ಅದನ್ನು ಕೊಂಡಕೊ. ಎಂದೆ,ಅಮ್ಮಾ ಅದು ನನ್ನ ಬಳಿ ಇದೆ ಚಿತ್ರ ಕಳಿಸುತ್ತೇನೆ. ಎಂದಳು. ಸವಿತಾ.


ಪರಂಪರೆ (Parampare) - 1


ಪರಂಪರೆ (Parampare) - 1

  29-9-10 ರಂದು ಬೆಂಗಳೂರಿನಿಂದ  ಹೊನ್ನಾವರಕ್ಕೆ ಕೆ. ಎಸ್. ಆರ್.ಟಿ. ಸಿ. ಯ ಹಗಲು ಬಸ್ಸಿನಲ್ಲಿ ಬರುವಾಗ ಬಸ್ಸಿನಲ್ಲಿ ನನ್ನ ಬದಿಯ ಸೀಟಿನಲ್ಲಿ ಕುಳಿತ ಅಪರಿಚಿತ ಮಹಿಳೆ ಉಷಾ ಬೆಂಗಳೂರಿನಿಂದ ತುಮಕೂರಿನವರೆಗೆ ನನ್ನ ಜೊತೆ ಪ್ರವಾಸ ಮಾಡಿದರು. ಅವರ ವಯಸ್ಸು ಸುಮಾರು 50 ಅವರು ತುಮಕೂರಿನ ಕಾಲೇಜೊಂದರಲ್ಲಿ ಪ್ರಾಧ್ಯಾಪಕರು. ಅವರಿಂದ ಬತ್ಸಾ [ಸ್ಸಾ]ರು ಮಸ್ಸೊಪ್ಪು ಮತ್ತು  ಸಾರಿನ ಪುಡಿ ಅಡುವ ವಿಧಾನವನ್ನು ಬಸ್ಸು ಅಲುಗಾಡುತ್ತ ನಿಮರ್ಿಸಿದ ಕೋಳಿ ಕಾಲಿನಂತಹ ನನ್ನ ಅಕ್ಷರಗಳಲಿ ್ಲದಾಖಲಿಸಿ ಕೊಂಡೆ. ಇವರಿಂದ ಜಲ ಭೇದಿ ಗಿಡದಬಗ್ಗೆ ಇನ್ನಷ್ಟು ಮಾಹಿತಿ ಸಿಕ್ಕಿತು. ತುಮಕೂರಿಗೆ ಹೊಗುವ ದಾರಿ ಬದಿಯಲ್ಲಿ ಬೆಳೆದಿರುವ ಇದನ್ನು ಬಸ್ಸಿನಲ್ಲಿ ಕುಳಿತಿರುವಾಗಲ್ನ್ಕಾಣವದು ನಮಗೆ ಸಾಧ್ಯವಾಗಿತ್ತು. 
               
       ಜಲಭೇದಿ ಸೊಪ್ಪಿನ ಗಿಡವು opuntia stricta ಮಳೆಗಾಲದಲ್ಲಿ ಅಥವಾ ನೀರಿನ ಆಸರೆಯಿದ್ದಲ್ಲಿ ಕಳೆಯಾಗಿ ಬೆಳೆಯುವ ಚಿಕ್ಕ ಗಿಡ. ವಾಷರ್ಿಕೆ. ಮನುಷ್ಯರು, ಈ ಗಿಡದ ಎಲೆಯ ರಸವನ್ನು  ಸೇವಿಸಿದರೆ 
ಭೇದಿಯಾಗುತ್ತದೆ. ಎಲೆಯನ್ನು ಮುರಿದರೆ ಹಾಲು ಬರುತ್ತದೆ. ಇದರ ತವರು ದಕ್ಷಿಣ ಅಮೇರಿಕಾವೆಂದು ಇದು 1946 ರಿಂದೀಚೆಗೆ ಕನರ್ಾಟಕದಲ್ಲಿ ಕಾಣಿಸಿಕೊಂಡ ಕಳೆಗಿಡವೆಂದು ದಾಖಲೆಗಳಿವೆ. ಇದರ ಸಸ್ಯಶಾಸ್ತ್ರೀಯ ಹೆಸರು Euphorbia heterophylla L ಚಿತ್ರ ಹೊಟ್ಟೆಯಲ್ಲಿ ತೊಂದರೆಯಿದ್ದರೆ ಇದರ ತುದಿಯ ಎರಡು ಎಲೆಗಳನ್ನು ತಿಕ್ಕಿ ಮುದ್ದೆ ಮಾಡಿ ಮಕ್ಕಳಿಗೆ ಒಂದು ಸೇಂಗಾ ಕಾಳಿನಷ್ಟು ಉಂಡೆಯನ್ನು ನೀರಿನೊಂದಿಗೆ ನುಂಗಲು ಕೊಟ್ಟರೆ ಭೇದಿಯಾಗಿ ಹೊಟ್ಟೆ ಸ್ವಚ್ಛವಾಗುತ್ತದೆ. ವಕ್ತೃ ಉಷಾ ಇವರ ತೊಂಬತ್ತು ವರ್ಷದ ಅಜ್ಜಿ 1999ರಲ್ಲಿ ತೀರಿಕೊಂಡರು. ಇವರ 50 ವರ್ಷದ ಮೊಮ್ಮಗಳು ಉಷಾ ಈ ಮನೆ ಮದ್ದನ್ನು ಅಜ್ಜಿಯಿಂದ ಪಡೆದು ಸ್ವತಃ ಸೇವಿಸಿದ ಅನುಭವ ಹೊಂದಿದ್ದಾರೆ ಅಂದರೆ 90ರಿಂದ ಸುಮಾರು 100 ವರ್ಷಗಳ ಹಿಂದೆಯೇ ಉಷಾ ಅವರ ಹಿರಿಯರಿಗೆ  ಈ ಗಿಡದ  ಪರಿಚಯ ಪರಂಪರಾಗತವಾಗಿರ ಬಹುದಲ್ಲವೇ? ಎಂದು ಕೊಂಡೆ.

            ಉಷಾ ನೀಡಿದ ಇನ್ನೊಂದು ಸಸ್ಯದ ಮಾಹಿತಿ ನನ್ನ ಸಂಗ್ರಹ ಸೇರಿದೆ. ಆ ಇನ್ನೊಂದು ಸಸ್ಯವು ದಬ್ ಗಳ್ಳಿ. ಉಷಾ ದಾರಿ ಬದಿಯಲ್ಲಿ ಬೆಳೆದಿದ್ದ ಗಿಡವೊಂದನ್ನು ತೋರಿಸಿ ತಾನು ಅದರ ಹಣ್ಣನ್ನು ತಿಂದಿರುವದಾಗಿ ತಿಳಿಸಿದರು. ಇದಲ್ಲದೆ ತಾವು ಚಿಕ್ಕವರಿದ್ದಾಗ ಆ ಹಣ್ಣಿನ ರಸವನ್ನು ತುಟಿಗೆ ಹಚ್ಚಿ ಕೊಳ್ಳುತ್ತಿದ್ದುದಾಗಿ ನಾಚುತ್ತ ಮೆಲ್ಲಗೆ ತಿಳಿಸಿದರು. ಇದರ ಹಣ್ಣಿನ ರಸ ಕೆಂಪು. ತುಟಿಗೆ ಕಡು ಗುಲಾಬಿಯ ಬಣ್ಣವನ್ನು ನೀಡುತ್ತದೆಯೆಂದರು. ಅವರು ತೋರಿಸಿದ ಗಿಡ ಕಲಘಟಗಿಯ  ದನಕಾಯುವ ಮಕ್ಕಳು ಗುರುತಿಸುವ ದಬ್ಗಳ್ಲಿ. ಉಷಾ ಅವರ ಹಳೆಯ ನೆನಪಿನ ಪ್ರಸ್ತಾಪವು ದಬ್ಗಳ್ಳಿಯ ಕುರಿತ ನನ್ನ ಹಳೆಯ ನೆನಪನ್ನು ಎಚ್ಚರಿಸಿತು. 

    ದಬ್ಗಳ್ಳಿ-ಹಸ್ತದಷ್ಟು ಅಗಲವುಳ್ಳ  ತನ್ನ  ಕಾಂಡದ ತುಂಬ ಸಣ್ಣ ಸೂಜಿಯಂತಹ ಮುಳ್ಳುಗಳನ್ನು ಗಿಡದೆಲ್ಲೆಡೆ ಹೊಂದಿರುವ ಕಳ್ಳಿ. ಇದರ ಎಲೆಯ ಮೇಲೆಯೂ ಮುಳ್ಳು. ಈ ಕಳ್ಳಿಗೆ ಕೆಂಪು ಬಣ್ಣದ ರಸಭರಿತವಾದ 
ಹಣ್ಣುಗಳಾಗುತ್ತವೆ. ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ದನ ಕಾಯುವ ಮಕ್ಕಳು  ಇದನ್ನು ತಿನ್ನುತ್ತಾರೆ. ಅವರು ಅಲ್ಲಿಯ ದನಗಳು ಕುಡಿಯುವ ಮಕ್ಕಳುಮೀಯುವ, ಹೆಂಗಸರು ಬಟ್ಟೆತೊಳೆಯುವ, ಕೆರೆಯನೀರನ್ನು ಕುಡಿಯುತ್ತಾರೆ. ಈ ಹೊಲಸು ನೀರನ್ನು ಕುಡಿದರೆ ನೆಗಡಿಯಾಗುತ್ತದೆ ಎಂದಾಗ  ಕಪ್ಪು ಶಿಲಾ ಮೂತರ್ಿಗಳಂತಿರುವ ಆ ಮಕ್ಕಳು ದಬ್ಗಳ್ಳಿಯ ಹಣ್ಣುಗಳನ್ನು ತಿನ್ನುವ ತಮಗೆ ನೆಗಡಿ ಬರುವದಿಲ್ಲ. ಈ ಹಣ್ಣು ನೆಗಡಿಗೆ ಮದ್ದು ಎಂದು ತಿಳಿಸಿದರು. ಈ ಹಣ್ಣನ್ನು ತಿನ್ನಬಹುದೇ? ಎಂದು ಸಂಶಯವನ್ನು ವ್ಯಕ್ತ ಪಡಿಸಿದಾಗ ಆ ಮಕ್ಕಳು ನನ್ನನ್ನು ಗಿಡದ ಬಳಿಗೆ ಕರೆದೊಯ್ದು ಹಣ್ಣನ್ನು ಕೊಯ್ದು ತಾವೂ ತಿಂದದ್ದಲ್ಲದೆ ನನ್ನನ್ನೂ ತಿನ್ನುವಂತೆ ಒತ್ತಾಯಿಸಿದರು. ಹಿರಿಯರ ಸಲಹೆಗಾಗಿ ಅತ್ತಿತ್ತ ನೋಡಿದೆ ಆ ಬಟ್ಟ ಬಯಲಿನ ಕೂಗಳತೆಗೂ ನಿಲುಕದ ಬಹುದೂರದಲ್ಲಿ ಒಂದು ಕೈ ಬೆರಳೆಣಿಕೆಗೂ ಸಾಲದ ಜನರ ಸಣ್ಣ ಆಕೃತಿಗಳ ಸುಳಿವು ಮಾತ್ರ ಅವರವರ ಹೊಲದಲ್ಲಿ  ಕಾಣುತ್ತಿತ್ತು. ಜನವಸತಿ ಸುಮಾರು ನಾಲ್ಕು ಕಿಲೋಮೀಟರು ದೂರದಲ್ಲಿ. ನನ್ನ ಸುತ್ತ ವನದಲ್ಲಿಯ ತರುಲತೆ ಪಕ್ಷಿಗಳಂತಹ ಚಿಕ್ಕಚಿಕ್ಕ ಐದಾರು ದನಗಾಹಿ ಮುಗ್ಧ ಮಕ್ಕಳು ಹಾಗೂ ಆ ಕಕರ್ಿ ಮಲ್ಲಯ್ಯನ ಗುಡ್ಡದ ನಮ್ಮ ಮಡ್ಡಿಯಲ್ಲಿ ನಾನು ನಾನೊಬ್ಬಳೇ. ಅಂದು ತನ್ನ ಕೆಲಸದ ನಿಮಿತ್ತ ನನ್ನ ಮಗನೂ ನನ್ನ ಜೊತೆ ಬಂದಿರಲಿಲ್ಲ. ಆಗ ಅದು ಕರಾವಳಿಯವಳಾದ ನನ್ನ ಪಾಲಿಗೆ ನನ್ನವರಿಲ್ಲದ ನಿರ್ಜನ ಬೆಟ್ಟ. ಸೀತೆಯ ವನವಾಸದ ನೆನಪು. ರಾಮ ಕಾಡಿಗಟ್ಟಿದವಳು ನಾನಲ್ಲ. ನನ್ನ ಮನಸಾ ಆರಾಮವಾಗಿ ಅಲ್ಲಿಗೆ ಬಂದವಳು. ಅಲ್ಲಿ ನಾನು ಹಿಂದೆಂದೂ ಕಂಡರಿಯದ ಕೇಳರಿಯದ ದಬ್ಗಳ್ಳಿಯ ಹಣ್ಣನ್ನು ತಿಂದೆ. ಮಕ್ಕಳು ಗೆದ್ದರು. ಅವರ ಪರಂಪರಾಗತ ಜ್ಞಾನ ಗೆದ್ದಿತು. (ಚಿತ್ರಗಳು ನೆಟ್ನಿಂದ) 


   

ಅಡುಗೆ (Costal Cooking)

PÀj ಕೆಸುವಿನ ಎಲೆಯ ಗೊಜ್ಜು :

ಎಳೆಯ ಎರಡು ಕೆಸುವಿನೆಲೆ ಗಳನ್ನು ಕೊಚ್ಚಿರಿ . ಎರಡು ಬೆಡಗಿ ಮೆಣಸು ನೆಲ್ಲಿ ಕಾಯಿ ಗಾತ್ರದ ಹುಣಸೆಹಣ್ಣು ಎರಡು ಚಮಚ ಬೆಲ್ಲಒಂದು ಚಮಚ್ ಉಪ್ಪು. ಇವುಗಳನ್ನು  ಕೆಸುವಿನ ಕೊಚ್ಚಲಿಗೆ ಹಾಕಿ ತುಸು   ನೀ ರು  ಬೆರೆಸಿ ಬೇಯಿಸಿರಿ. ಇಳಿಸಿರಿ  ಇದಕ್ಕೆ . ಒಂದು ಕಪ್ಪು ಕಾಯಿಸುಳಿ
ಸೇರಿಸಿ ರುಬ್ಬಿರಿ. ತೆಗೆಯಿರಿ  ಆರೆಂಟು ಬೆಳ್ಳುಳ್ಳಿ ಎಸಳುಗಳನ್ನು   ಪರಿಮಳ ಬರುವವರೆಗೆ ಎಣ್ಣೆಯಲ್ಲಿ   ಬೇಯಿಸಿ ವಗ್ಗರಣೆ ಮಾಡಿ   ರುಬ್ಬಿ ತೆಗೆದ ಕಲಕಕ್ಕೆ  ಕೂಡಿಸಿರಿ.   ಈಗ  ಗೊಜ್ಜು ಸಿದ್ಹ.  ಚಪಾತಿ  ದೋಸೆ ಇಡ್ಲಿ ಜೊತೆ ತಿನ್ನಿರಿ.




PÀj PɸÀÄ«£À¸ÉÆ¥ÀÄà£À UÉÆdÄÓ
·        2PÀj PɸÀÄ«£À J¯ÉAiÀÄ PÉÆZÀÑ®£ÀÄß  3¨ÉqÀV ªÉÄt¸ÀÄ  CzsÀð °A§ÄªÀµÀÄÖ ºÀÄt¸ÉºÀĽ, 1 ZÀ. ¨É®è,1ZÀªÀÄZÀ G¥ÀÄà 1 PÀ¥ÀÄà ¤Ãj£ÉÆA¢UÉ ¨ÉìĸÀ°r.
·        ¸ÀtÚ GjAiÀĪÉÄðlÖ ªÀUÀÎgÀuÉAiÀÄ ¸ÀªÀn£À°è 2 ZÀ. JuÉÚ CzsÀðZÀªÀÄZÀ G¢Ý£À¨ÉüÉ, 1/2ZÀªÀÄZÀ PÉÆvÀÛA§j,  1 vÉÆUÀj   ¨ÉüÉAiÀĵÀÄÖEAUÀÄ, Cj²£À ¥ÀÄr 1/2 ZÀ,ºÁQ ¸Àl£ÀÄß ªÉÄ®èUÉ C®ÄUÁr¸ÀÄwÛj. G¢Ý£À¨ÉüÉAiÀÄÄ CgÀ²£À §tÚPÉÌ wgÀÄVzÁUÀ E½¹j.
·         ºÀÄjzÀ F ¥ÀjPÀgÀUÀ¼À£ÀÄß 1PÀ¥ÀÄà PÁ¬Ä¸ÀĽ eÉÆvÉ CgɬÄj. PÉÆ£ÉUÉ ¨ÉAzÀ PɸÀÄ«£À ¸ÉÆ¥ÀÄà ºÁQ. ªÀÄvÉÛ vÀĸÀÄ CgɬÄj.

              ºÉýzÀªÀgÀÄ .¨sÀªÁ¤. f. ºÉUÀqÉ  §gÉzÀÄ PÀ½¹zÀªÀgÀÄ ±ÁAw£ÁAiÀÄPÀ

ಜಾನಪದ ಆಟಗಳು (Folk Games)



ಎತ್ತ್ಗೋಲಾಟ:


     ಸುಮಾರು ಎರಡು ಅಡಿ ಉದ್ದದ ಗಟ್ಟಿಮುಟ್ಟಾದ ಕೋಲನ್ನು ಚಿತ್ರದಲ್ಲಿರುವ೦ತೆ ಇಬ್ಬರು ಯುವಕರು ಎದುರುಬದುರಾಗಿ ಕುಳಿತು ಗಟ್ಟಿಯಾಗಿ ಹಿಡಿಯಬೇಕು. ಒಬ್ಬನು  ತನ್ನ ಪಾದಗಳನ್ನು ಇನ್ನೊಬ್ಬನ ಪಾದಗಳಿಗೆ ಒತ್ತಿ ಕುಳಿತಿರಬೇಕು .ಇಷ್ಟಾದ ಬಳಿಕ ಕೋಲು ಜಗ್ಗಾಟ ಆರಂಭವಾಗುತ್ತದೆ. ಜಗಾಟದ  ಭರದಲ್ಲಿ  ಒಬ್ಬನು ಮತ್ತೊಬ್ಬನನ್ನುಜಗ್ಗಿ ಮ್ಲೆತ್ತಲು ಪ್ರಯತ್ನಿಸುತ್ತಾನೆ. ಎದುರಾಳಿಯನ್ನು ಮೇಲೆತ್ತಿದಾಗ ಎದ್ದವನು ಸೋಲುತ್ತಾನೆ .ಕುಳಿತವ ಗೆಲ್ಲುತ್ತಾನೆ .ಇದು ಸಿರಸಿ ತಾಲೂಕಿನ ರಾಗಿ ಹೊಸಳ್ಳಿಯಲ್ಲಿ ಕರೆ ಒಕ್ಕಲ ಪ್ರಚಲಿತವಿರುವ ಯುವಕರ ಶಕ್ತಿ ಪ್ರದರ್ಶನದ  ಆಟ 



ರಂಗೋಲಿ (Folk Art)


ಹನಮಿ ಶೇಡಿ ಕಲೆ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ನಾಲ್ಕು ಬಗೆಯ ಶೆಡಿಯಲ್ಲಿ ಕ೦ಡು ಬರುವ ಜನಪದ ಚಿತ್ರ ಕಲೆಯನ್ನು ಗುರುತಿಸಬಹುದು .ಇವುಗಳಲ್ಲಿ ಗಾಮೊಕ್ಕಲ ಶೇಡಿಕಲೆಯು ಒ೦ದು .

ಗೆರ್ಕೆ - Gerke


      ಗಾಮೊಕ್ಕಲ ಮಹಿಳೆಯರು ಸೇಡಿ ಎಂದು ಗುರುತಿಸುವ ಜನಪದ ಚಿತ್ರಕಲೆಯಾದ ರಂಗೋಲಿಯಲ್ಲಿ ಬಳಕೆಯಾಗುವ ಕುಂಚ. ಇದು ಗೆರೆ ಮೂಡಿಸುವ ಸಾಧನ ಎಂಬ ಅರ್ಥವನ್ನು ಕೊಡುತ್ತದೆ  ಅಡಕೆ ತೋಟದ  ನಡುವೆ  ವಾಸಿಸುವ. ಸೇಡಿ ಕಲಾವಿದೆಯರಾದ ಗಾಮೊಕ್ಕಲ ಮಹಿಳೆಯರು ಇದನ್ನು ಅಡಕೆಸಿಪ್ಪೆಯಿಂದ ತಯಾರಿಸಿಕೊಂಡು ಸಡಿ ಬರೆಯಲು ಬಳಸುತ್ತಾರೆಯದರೂ  ಇವರು ಇದನ್ನು ಗೆಕರ್ೆ ಎನ್ನುವದಿಲ್ಲ; ಅಡಕೆ ಸಿಪ್ಪೆ ಎನ್ನುತ್ತಾರೆ. ಇದಕ್ಕೆ ಗೆಕರ್ೆ ಎಂಬ ಹೆಸರನ್ನು ಮುಕ್ರಿ ಹೆಂಗಸೊಬ್ಬಳು ಸುಮಾರು 30 ವರ್ಷಗಳ ಹಿಂದೆ ಹೊನ್ನಾವರದ ಕಕರ್ಿಯಲ್ಲಿ ನನಗೆ ತಿಳಿಸಿದ್ದಳು. ಇದನ್ನು ಮೊತ್ತ ಮೊದಲು ನವ ಸಾಕ್ಷರರಿಗಾಗಿ ಸಿದ್ಧಪಡಿಸಿದ ನನ್ನ ರಂಗೋಲಿ ಎಂಬ ಪುಸ್ತಕದಲ್ಲಿ ನಾನು ಬಳಸಿದ್ದೇನೆ. ಆಗಾಗ ಹೊನ್ನಾವರದ ಜಾನಪದ ಅಧ್ಯಯನ ಕೇಂದ್ರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬರುತ್ತಿರುವ ಸೇಡಿ ಕಲಾವಿದೆ ಹನ್ಮಿ  ಇತ್ತಿತ್ತಲಾಗಿ ಈ ಶಬ್ದವನ್ನು ಬಳಸುತ್ತಿದ್ದಾರೆ. 
    ಹಣ್ಣಡಕೆಯ ಸಿಪ್ಪೆಯನ್ನು ತುಸು ಹಸಿಯಿರುವಾಗಲೇ ಮೆಟ್ಗತ್ತಿಯಲ್ಲಿ ಎರಡು ಭಾಗವಾಗಿ ಸೀಳಿ ಕೊಯ್ದು ಬೆರಳಿನ ಆಕಾರ ಕೊಡಲಾಗುತ್ತದೆ. ನೀರು ಬೆರೆಸಿ ಕದಡಿದ ಸೇಡಿಯಲ್ಲಿ ಅದನ್ನು ಅದ್ದಿ ಫಲಕದ ಮೇಲೆ ಗೆರೆ ಎಳೆದಾಗ ಗೆಕರ್ೆಯ ಬೆರಳಿನಷ್ಟು ಸಂಖ್ಯೆಯ ಗೆರೆಗಳು ಅಲ್ಲಿ ಸಮಾಂತ ರವಾಗಿ ಮೂಡುತ್ತವೆ. ಗೆಕರ್ೆಯಿಂದ ದೊಡ್ದ ದೊಡ್ಡ ಸೇಡಿಗಳನ್ನು ತ್ವರಿತವಾಗಿ ರಚಿಸಲು ಸಾಧ್ಯವಾಗುತ್ತದೆ. ಗಾಮೊಕ್ಕಲ ಮಹಿಳೆಯರ ಬಹುಪಾಲು ಸೇಡಿಗಳು ಗೆಕರ್ೆಯ ಸಹಾಯದಿಂದ ರಚಿತವಾಗುತ್ತವೆ ಈ ಸೇಡಿಗಳನ್ನು ಇವರು ಬೆರಳ ತುದಿಯಿಂದ ಬೊಟ್ಟುಗಳನ್ನಿಟ್ಟು ಅಲಂಕರಿಸುತ್ತಾರೆ. 
                       



ಅರಶಿನೆಲೆ ಕಡಬು - Arasinele Kadabu

ಅರಶಿನೆಲೆ ಕಡಬು

ಎರಡು ಕಪ್ಪು ಬೆಣತಿಗೆ ಅಕ್ಕಿಯನ್ನು ತೊಳೆದು ಅದರಲ್ಲಿಯ ನೀರನ್ನು ಬಗ್ಗಿಸಿ ನೆಲಕ್ಕೆ ಹಾಸಿದ ಒಣ ಬಟ್ಟೆಯ ಮೇಲೆ ಹರಡಿರಿ.
 ಅರ್ಧ ತಾಸು ಬಿಟ್ಟು ಈ ಅಕ್ಕಿಯನ್ನು ಮಿಕ್ಸಿಗೆ ಹಾಕಿ ಸಣ್ಣ ರವೆ ಮಾಡಿರಿ.
ಎರಡು ಎಳೆಯ ಸವತೆ ಕಾಯಿಗಳನ್ನು ತುರಿಮಣೆಯ   ಮೇಲೆ ತುರಿಯಿರಿ.
 ಇಡ್ಲಿ ಪಾತ್ರೆಯನ್ನು ಒಲೆಯ ಮೇಲಿತ್ತು  ನೀರನ್ನು ಬಿಸಿ ಮಾಡಿರಿ.
ಸವತೆ ಕಾಯಿಯ ತುರಿಗೆ ಅಕ್ಕಿ ಹಿಟ್ಟನ್ನು  ಮತ್ತು ಅರ್ಧ ಚಮಚೆ ಉಪ್ಪಿನ ಹಿಟ್ಟನ್ನು ಮೆಲ್ಲಗೆ ಮೇಲೆ ಕೆಳಗೆ ಮಾಡುತ್ತ ಸೇರಿಸಿರಿ
ಅರಸಿನೆಲೆ ಯನ್ನು ಚಿತ್ರದಲ್ಲಿ   ತೋರಿಸಿದಂತೆ ಇಟ್ಟುಕೊಂಡು ಅದರಲ್ಲಿ ಅರ್ಧ ಬೊಗಸೆ ಹಿಟ್ಟನ್ನು ಇತ್ತು   ತುಸು ಪಸರಿಸಿರಿ.
 ಎಲೆಗಳನ್ನು ಹಿಂದೆ ಮುಂದೆ  ಎಡಕ್ಕೆ ಬಲಕ್ಕೆ ಮದಚಿರಿ.  ಈ  ಕಡಬನ್ನು ಇಡ್ಲಿ ಪಾತ್ರೆಯಲ್ಲಿ ಕವಚಿಡಿರಿ.
  ಮುಂದಿನ ಕಡಬುಗಳನ್ನು  ತ್ವರಿತವಾಗಿ ಮಡಚಿ  ಹೀಗೆ ಒಂದರ  ಮೇಲೆ ಇಡುತ್ತ ಸಾಗಿರಿ
 ಸುಮಾರು ೧೦ ಕಡಬುಗಲಾಗುತ್ತವೆ. ಇದ್ಲಿಯಂತೆ   ಉಗಿಯಲ್ಲಿ  ೨೦ ನಿಮಿಷ ಬೇಯಿಸಿರಿ.
ತೆಂಗಿನ ಕಾಯಿಯ ಹಾಲು ತೆಗೆದು ಅದಕ್ಕೆ ಬೆಲ್ಲ ತುಸು ಉಪ್ಪು ಸೇರಿಸಿರೀ . ಇದು  ಸಿಹಿ ಕಾಯ್ ಹಾಲು . ಇದರಲ್ಲಿ ಎಲೆಯೋಳಗಿನ ಕಡಬನ್ನು ಗಿವುಚಿ  ತಿನ್ನಿರಿ.
 ಗಣೇಷ ಚವತಿ,ಹೊಸತು ಹಬ್ಬ  ಮತ್ತು ದೀಪಾವಳಿ  ಹಬ್ಬಗಳಲ್ಲಿ ಈ  ಕಡಬು ಮಾಡುವದು ಸಾಂಪ್ರದಾಯಿಕ  ಆಚರಣೆ ಯಾಗಿದೆ.


                      


ಸ್ಥಳ ನಾಮ

ಸ್ಥಳ ನಾಮ


ಕೂಡ್ಲ ಒಂದು [ಟಿಪ್ಪಣೆ] 


       ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ್ಲ  ಮತ್ತು ಅದರಿಂದ ಸಿದ್ಧಿತ ವಾದ ಶಬ್ದವನ್ನು ಅಂತ್ಯ ವಾಗಿಟ್ಟು ಕೊಂಡಿರುವ ಅನೇಕ ಸ್ಥಳ ನಾಮಗಳು ದೊರೆಯುತ್ತವೆ ಉದಾ, ಅಂಕೋಲಾದಲ್ಲಿ ,ಅಂಬಾರ ಕೋಡ್ಲ [ಡ್ಲು] ಅಂಬಾರ ಕೂಡ್ಲು ಕುಮಟಾದ ಲ್ಲಿಬಂಕಿ ಕೋಡ್ಲ[ಡ್ಲು] ಹೊನ್ನಾವರದ ಲ್ಲಿನಿರ್ವತ್ತಿ ಕೋಡ್ಲು .ಸ್ವಾದಿಯ  ಬಳಿ ಕಗ್ಗನ ಕೋಡ್ಲ ಇತ್ಯಾದಿ.  ಇಲ್ಲಿಯ ಇನ್ನು  ಕೆಲವು ಸ್ಥಳನಾಮಗಳು ಕೊಡ್ಲುಎಂಬ ವಿಶೇಷ್ಯ ಶಬ್ದವನ್ನು ಪಡೆದಿವೆ.ಉದಾ. ಸಿಂಗಾರ ಕೊಡ್ಲು .ಇದು ಸ್ವಾದಿಯ  ಹತ್ತಿರದ ಒಂದು ಊರಿನ ಹೆಸರು .ಅರಸನಿಗೆ ಸಿಂಗಾರವನ್ನು ಬಿಟ್ಟಿ ಯಾಗಿ  ಕೊಡುವಊರು ಎಂದು ಅಲ್ಲಿನ ಜನರಲ್ಲಿ  ಈ ಹೆಸರಿನ ಕುರಿತು ಐತಿಹ್ಯ ವೊಂದು ಹುಟ್ಟಿಕೊಂಡಿದೆ.  ಬಂಕಿ ಕೋಡ್ಲವನ್ನು ಬೆಂಕಿಕೊಡುವ ಊರು ಎಂದು ಅಥರ್ೆಸಿರುವದೂ ಉಂಟು.ಆದರೆ ಇದುಒಪ್ಪುವ ಮಾತಲ್ಲ. .. ಊ&ರಣ;ಓ ಆಗುವದು ಕನ್ನಡದ ವೈಶಿಷ್ಟ್ಯ .,ಮತ್ತು  ಹಲವು ಬಾರಿ ಅತ್ಯಂತ ಸುಲಭವಾಗಿ ಅಂಕೋಲೆಯ ನಾಡವರ ಭಾಷೆಯಲ್ಲಿ ಊ&ರಣ;ಓ ಅಗುತ್ತದೆ. ಈ ಭಾಷೆಯ ಸಂಪರ್ಕದಲ್ಲಿರುವ  ಊರಾದ ಬಂಕಿ ಕೂಡ್ಲವು ಬಂಕಿ ಕೋಡ್ಲ ಆಗಿದೆ. ಹಾಲಕ್ಕಿ ಒಕ್ಕಲ ಭಾಷೆಯಲ್ಲಿ ಊ&ರಣ; ಓ ಆಗುವ ಪ್ರಕ್ರಿಯೆ ವಿರಳ  ಅಂಬಾರ ಕೂಡ್ಲಇದು  ಈಭಾಷೆಯ ಹಾಗೂ ಇತರ ಭಾಷೆಯ ಸಂಪರ್ಕದಲ್ಲಿ ಕೂಡ್ಲ ಮತ್ತು ಕೋಡ್ಲು[ಡ್ಲ್] ಈ ಎರಡೂ ಶಬ್ದಗಳನ್ನು ಅಂತ್ಯದಲ್ಲಿ ಪಡೆದಿದೆ. 

       ಹಳ್ಳಿಗರು ಎರಡು ಗುಡ್ಡಗಳ  ಸಂಗಮವನ್ನು .ಕೂಡ್ಲು [ಡ್ಲ]  -ಕೂಡಲಎಂದು ಸ್ಪಸ್ಟವಾಗಿ ನಿದರ್ೆಶಿಸುವದನ್ನು ಈಗಲೂ ಕೇಳಬಹುದು. ಕೂಡಲ ಇದಕ್ಕೆ ಸಂಗಮ  ಎಂಬ ಅರ್ಥ ವಿರುವದನ್ನು ಬಸವ ಣ್ಣನವರ ವಚನದಲ್ಲಿಯ  ಕೂಡಲ ಸಂಗಮ ಎಂಬ ಕನ್ನಡ ಸಂಸ್ಕೃತ ಜೋಡು ನುಡಿಯು ಸೂಚಿಸುತ್ತದೆ. ಸ್ವತಂತ್ರ ಸ್ಥಿತಿಯಲ್ಲಿ ಕೂಡ್ಲವು ತನ್ನ ಮೂಲ ಅರ್ಥಕ್ಕೆ  ಮತ್ತುಶಬ್ದ ರೂಪಕ್ಕೆ] ಧಕ್ಕೆಯನ್ನು ಹೊಂದಿಲ್ಲ.ಉದಾ.ಹೊನ್ನಾವರದ ಕೂಡ್ಲ. ಆದರೆ ವಿಶೇಷಣದ ಜೊತೆಯಲ್ಲಿದ್ದಾಗ ಊ&ರಣ;ಓಆಗುವದನ್ನು ಗಮನಿಸ ಬಹುದು ಕೂಡ್ಲು, ಕೂಡ್ಲ ಕೂಡಲ, ಕೊಡ್ಲು,ಕೋಡ್ಲ[ಡ್ಲು]ಇವುಒಂದೇ ಮೂಲದವು.  ಹಾಗೂ ಇವುಗಳ ಮೂಲ ರೂಪವು ಕೂಡ್ಲ ,ಕೂಡಲ ಆಗಿದ್ದು ಕೊಡ್ಲು, ಕೋಡ್ಲ[ಡ್ಲು]  ಗಳಿಗೆ  [ಎರಡು ನದಿಗಳು, ಗುಡ್ಡಗಳು] ಸಂಧಿಸುವ ಸ್ಥಳ ಅಥವಾ ಸಂಗಮವೆಂಬ ಅರ್ಥವು ಹೆಚ್ಚು ಸಮಂಜಸವಾಗಿದೆ. ಸ್ಥಳ ನಾಮಾಸಕ್ತರು ಇಂತಹ  ಶಬ್ದಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸ ಬಹುದಲ್ಲವೇ?

ದಿನಾಂಕ: 19-11-2010    


ಹುಣಸೆ - Tamarindus indica, Lin


ಹುಣಸೆ  - Tamarindus indica, Lin


       ಇದು ಭಾರತೀಯರಿಗೆ ಹೆಚ್ಚು ಪರಿಚಿತವಾಗಿರುವ  ಮರ. ಹಿಂದಿಯಲ್ಲಿ ಇಮಲಿ. ಸಂಸ್ಕ್ರತದಲ್ಲಿ ಚಿಂಚಾ ಕೊಂಕಣಿ ಮತ್ತು ಮರಾಠಿಯಲ್ಲಿ ಚಿಂಚ ತುಳವಿನಲ್ಲಿ ಪುನ್ಕೆದಮರ ಎಂದು ಇದು ಪರಿಚಿತವಾಗಿದೆ. ಇದನ್ನು ಭಾರತದಲ್ಲಿ ಮೊದಲು ಕಂಡವರು ಇದನ್ನು ಭಾರತೀಯ ಖರಜೂರ ವೆಂದು ಹೆಸರಿಸಿ ಗೌರವಿಸಿದ್ದಾರೆ. ಇದರ ಸಸ್ಯಶಾಸ್ತ್ರೀಯ ಹೆಸರು   ಟೆಮರಿಂಡಸ್ ಇಂಡಿಕಸ್   ಎಂದಿದ್ದು ಇದರಲ್ಲಿಯ ಇಂಡಸ್   ಮತ್ತು ಇಂಡಿಕಾ ಎಂಬ ಶಬ್ದಗಳು ಈ ಮರವು ಭಾರತ ಮೂಲದ್ದೆಂದು  ಸೂಚಿಸುತ್ತವೆ. ಈ ಮರಕ್ಕಿರುವ  ತಿಮಿರ ಹಿಂದಿ  ಎಂಬ ಫಾರಸಿ ಹೆಸರು  ಹಾಗು ತಮರ ಹಿಂದೀ ಎಂಬ ಅರಬಿ  ಹೆಸರುಗಳು ಇದನ್ನು ಪುಷ್ಟೀಕರಿಸುತ್ತವೆಯಾದರೂ ಇದು ಭಾರತದ  ಹೊರಗೂ ಕೆಲವು  ದೇಶಗಳಲ್ಲಿ ಕಂಡುಬರುತ್ತದೆ ಇದರ ಪ್ರಾಚೀನ ದಾಖಲೆಯು ಅರಬೀ ಮೂಲದ್ದಾಗಿದೆ. ಅವರು ನಮ್ಮ ದೇಶದಲ್ಲಿ ಇದನ್ನು ಮೊದಲು ಕಂಡರೆಂದು ತಿಳಿಯಬಹುದಾಗಿದೆ.
 ಭಾರತದಲ್ಲಿ ಬೃಹದಾಕಾರದ ಹುಣಸೆ ಮರಗಳನ್ನು ಕಾಣಬಹುದು. ಇವು ನೇರವಾಗಿ ಬೆಳೆಯುವ ಸಾಧ್ಯತೆ ಇದೆಯಾದರೂ  ಉತ್ತಮ ಅವಕಾಶ ದೊರೆಯದಿದ್ದಾಗ ಇವುಗಳ ಕಾಂಡದ ರೂಪ ಗೊಡ್ಡಾಗುವದುಂಟು.  ಆದರೆ  ಮರಗಳು ಹೂ ಬಿಟ್ಟಾಗ ನೋಟ ಸುಂದರ.  ಕವಿಗೆ ಕವನಕ್ಕೆ ಸ್ಪೂತರ್ಿ ಬರಲು ಹೂತ ಹುಣಸೆ ಮರ ಸಾಕು  ಎಂದು ಕವಿ ಬೇಂದ್ರೆ  ಹಾಡಿದ್ದಾರೆ. ಹುಣಸೆಯ ಹೂ ಉದುರಿದ ಸ್ಥಳದಲ್ಲಿ ಹಳದಿ ಬಟ್ಟೆ ಹಾಸಿದಂತೆ  ಕಾಣುತ್ತದೆ.
ಮಕ್ಕಳಿಗೆ ಹುಣಸೆ ಕಾಯಿ ಅಚ್ಚುಮೆಚ್ಚು. ಮರದ ಮೇಲೆ ಜೋತಾಡುತ್ತಿರುವ ಹುಣಸೆ ಕಾಯನ್ನು ಕಂಡರೆ ಸಾಕು.ಅದಕ್ಕೆ  ಕಲ್ಲೆಸೆದು ಅದನ್ನು ಕೆಡವುವ ಭರದಲ್ಲಿರುವಾಗ ಶಾಲೆಗೆ  ತಡವಾದದ್ದು ಅವರಿಗೆ ನೆನಪಿಗೆ ಬರದು. ಹೊರಟ ಕಾರ್ಯ  ಮರೆಯುವದುಂಟು; ಅಂತಹ ಸೆಳೆತ ಅದರ  ಹುಳಿ ರುಚಿಯಲ್ಲಿದೆ. ಚಿಗುರು, ಹೂ ಕಾಯಿ ಮತ್ತು ಹಣ್ಣುಗಳು ಭಾರತೀಯ ಅಡುಗೆ ಪದ್ಧತಿಯಲ್ಲಿ ಮಹತ್ವದ ಸ್ಥಾನದಲ್ಲಿವೆ.                                                                       
       ಕಾಯಿಯಿಂದ ತೊಕ್ಕು ಎಂಬ ಉಪ್ಪಿನ ಕಾಯಿ ತಯಾರಿಸಿ ಬಹು ದಿನಗಳವರೆಗೆ ಕಾಯ್ದಿರಿಸುತ್ತಾರೆ. ಹೂವು  ಮತ್ತುಎಳೆಯ ಎಲೆಯನ್ನು ಚಟ್ನಿ ತಂಬುಳಿ ಹುಳಿ ಇತ್ಯಾದಿ ಅಡುಗೆ ತಯಾರಿಸಲು ಬಳಸುತ್ತಾರೆ. ಹಣ್ಣು ಹಲವು ವಿಧದ  ಪಾನೀಯ   ಸಾರು ಹುಳಿ ಗೊಜ್ಜುಗಳಿಗೆ ಹಾಗೂ ದಕ್ಷಿಣ ಭಾರತದ ಪುಳಿಯೋಗರೆಗೆ ಮೂಲ ಪರಿಕರ ವಾಗಿದೆ.
       ಇದು ಆಹಾರ ಪರಿಕರವಾಗಿದೆಯಷ್ಟೇ ಅಲ್ಲ ,ಇದೊಂದು ಅತ್ಯುತ್ತಮ ಮದ್ದೂ ಅಹುದು. ಹಣ್ಣು ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಹಸಿವೆಯನ್ನುಂಟುಮಾಡುತ್ತದೆ. ಥಂಡಿ ಜ್ವರ ಬಂದು ಊಟ ಸೇರದೇ ಇದ್ದಾಗ ಚಿಕ್ಕ ನೆಲ್ಲಿಕಾಯಷ್ಟು ಹುಣಸೆ ಹಣ್ಣಿಗೆ ನಾಲ್ಕು ಕಾಳು ಉಪ್ಪು  ಒಂದು ಚಿಟಿಕೆ ಮೆಣಸಿನ ಕಾಳಿನ ಪುಡಿ ಕೂಡಿಸಿ ಚೆನ್ನಾಗಿ ನುಳಿ ಮಾಡಿ ಬಾಯಿಯಲ್ಲಿಟ್ಟು ಪೆಪ್ಪರ ಮೆಂಟ್ನಂತೆ  ಚೀಪುತ್ತಿದ್ದರೆ  ಊಟ ರುಚಿಸ ತೊಡಗುತ್ತದೆ. ಗಂಟಲಲ್ಲಿರುವ ಕಫ ಕರಗುತ್ತದೆ. ಆಗಾಗ ಥಂಡಿಯಾಗುತ್ತಿರುವ ಮಕ್ಕಳಿಗಾಗಿ ಇದರಲ್ಲಿ ಒಂದು ಚೂರು ಮನೆಯಲ್ಲಿ ತಯಾರಿಸಿದ  ಅರಶಿನ ಪುಡಿಯನ್ನು ಚೆನ್ನಾಗಿ  ಕೂಡಿಸಿ  ನುಳಿ ಮಾಡಿ   ಸೇಂಗಾಕಾಳುಗಾತ್ರದ  ಗೋಲಿಗಳನ್ನಾಗಿ ಮಾಡಿ ಒಂದೆರಡು ಗೋಲಿಗಳನ್ನು ನಿತ್ಯ ತಿಂಡಿ ನೀಡುವ ತಟ್ಟೆಯಲ್ಲಿಟ್ಟು  ಕೊಟ್ಟರೆ  ಮಕ್ಕಳು ಇನ್ನಷ್ಟು ಗೋಲಿ ಗಳಿಗಾಗಿ ಕೈಯೊಡ್ಡುತ್ತಾರೆ. ಈ ತಿಂಡಿಯನ್ನು  ಬಯಲು ಸೀಮೆಯ ತಾಯಂದಿರು ಹುಣಸೆ ಚಿಗಳಿ ಎನ್ನುತ್ತಾರೆ. ಈ ಚಿಗಳಿಯನ್ನು ಚಿಕ್ಕ ಕಡ್ಡಿಗೆ ಅಂಟಿಸಿ ಜ್ವರ ಬಂದು ಬಾಯಿ ರುಚಿ ಕೆಟ್ಟಿರುವ ಮಕ್ಕಳ ಕೈಗೆ ಕೊಡುತ್ತಾರೆ. ಈ ಷಡ್ರಸ ಭರಿತವಾದ ಚಿಗಳಿಯು ಹುಣಸೆಹಣ್ಣು ಹಿತ್ತಾಳೆ ಕಂಚಿನ ಪಾತ್ರೆಯನ್ನು ಬೆಳಗುವಂತೆ ಬಾಯಿ ರುಚಿ ಕೆಟ್ಟಿರುವ  ಬಾಲಕರ ಬಾಯಿ ಅನ್ನನಳಿಯನ್ನೆಲ್ಲ ಸ್ವಚ್ಚ ಮಾಡಿ ಬಿಡುತ್ತದೆ  ಆಗ ಮಕ್ಕಳು  ಊಟ  ಬಯಸುತ್ತಾರೆ.  ಈ ಜನಪದ ಜ್ಞಾನವನ್ನು ಬಳಸಿಕೊಂಡು ತಯಾರಾದ ಲಾಲಿಪಪ್ ಮಾದರಿಯ  ಹುಣಸೆ ಪಪ್ಗಳು ಪೇಟೆಗೆ ಬಂದಿವೆ.
            ಆಯುವರ್ೆದವು ಇದು ಕಫ ಪಿತ್ತ ವಾತನಾಶಕವೆಂದು ಸಾರಿ  ಹೇಳುತ್ತದೆ. ನೀವು ಒಂದು ಚೂರು ಹುಣಸೆ ಹಣ್ಣು ಕೇಳಿದಾಗ ಇಲ್ಲವೆನ್ನುವ ತಾಯಂದಿರಿಗೆ ಹಿರಿಯರು ಹೇಳಿದ ಈ ಮಾತನ್ನು  ತಿಳಿಸಿರಿ. ಆಗ ನೀವು ಹುಣಸೆ ಹಣ್ಣನ್ನು ತಿನ್ನಲು ನಿಮ್ಮ  ತಾಯಿ ನಿರಾಕರಿಸಲಾರರು. ಅಪ್ಪಣೆ ಸಿಕ್ಕಿತೆಂದು ಹುಣಸೆ ಕಾಯನ್ನು ಭರಪುರ್ ತಿನ್ನಬೇಡಿ.
          ಪಾನಕ ಬೇಕೆ?   ಲಿಂಬುವಿಗಾಗಿ ಕಾದಿರ ಬೇಡಿ, ಹುಣಸೆ ಹಣ್ಣಿನಿಂದ ವಿವಿಧ ಬಗೆಯ ಪಾನೀಯ ತಯಾರಿಸಿಕೊಂಡು ಸೇವಿಸಿರಿ. ಬೆಲ್ಲ ಕಾಳು ಮೆಣಸು ಸೇರಿಸಿ ತಯಾರಾಗುವ ಹಸಿ ಯಾ ಬಿಸಿ ಪಾನೀಯವು  ಅನೇಕ ರೋಗಗಳ ವಿರುದ್ಧ   ಹೋರಾಡಬಲ್ಲ  ಸೋಮರಸ. ಇದರ ಎಲೆಯ ಕಷಾಯ ಸೇವನೆಯಿಂದ  ಸುಂಬಳ ಹೊರಕಡೆ  ಗುಣವಾಗುತ್ತದೆ.  ಹೂವಿನಿಂದ  ಗುಲ್ಕಂದ ಮಾಡಿ ತಿನ್ನಿರಿ, ಎಲೆಯಿಂದ  ಕಷಾಯ ತಯಾರಿಸಿ ಕುಡಿಯಿರಿ.  ಬೀಜ ವು ಬೀಸಾಡ ಬಹುದಾದ ಕಸವಲ್ಲ. ಇದರಲ್ಲಿ ತಿನ್ನಬಹುದಾದ ಹಿಟ್ಟು ಸಾಕಷ್ಟಿದೆ. ಬೀಜವನ್ನು ಸುಟ್ಟು ತಿನ್ನುವ ಹಳೆಯ ರೂಢಿಗೆ ಜೀವದಾನ ಮಾಡಿರಿ. ಜೊತೆಗೆ ಇನ್ನೊಂದು ಮಾತು ನೆನಪಿಡಿರಿ
       ನಿಮ್ಮ ತಾಯಿ ತಿಪ್ಪೆಗೆ ಚೆಲ್ಲುವ ಹೆಚ್ಚಿನ ಬೀಜಗಳನ್ನು  ಸಂಗ್ರಹಿಸಿ  ಹಸಿ ಮಣ್ಣಿನ  ಲಾಡು ಕಟ್ಟಿ ಅದರಲ್ಲಿ ಒಂದೊಂದು ಬೀಜ ಅಡಗಿಸಿಕೊಂಡು ಮೇ ಜೂನ್ ತಿಂಗಳಲಿ ನಿಮ್ಮ ಗೆಳೆಯರ ಜೊತೆ ಹಾದಿ ಬೀದಿಯ ಹಿಂಡುಗಳಲ್ಲಿ ಇಟ್ಟುಬನ್ನಿ.ಮಳೆಗಾಲದಲ್ಲಿ ಮೊಳೆತು ಅದು ಅಲ್ಲಿ ಸಸಿಯದಾಗ ತನ್ನ ಜ್ವರವನ್ನು  ಇಳಿಸುವಲ್ಲಿ ನೀವು ಕೈಕೊಂಡ ನಿಮ್ಮ ಈ ಅಳಿಲ ಸೇವೆಯನ್ನು ನೆನೆದು ತಾಯಿ ಭೂಮಿ ನಿಮ್ಮನ್ನು ಬಹು ಕಾಲ ಬಾಳಿ ಎಂದು ಹರಸುತ್ತಾಳೆ. 

ಸಂಕ್ರಬೆಳೆ (ನಾಡವರ ಸಾಮಾಜಿಕ ಉಪಭಾಷಾ ಶಬ್ದ)


 ಸಂಕ್ರಬೆಳೆ (ನಾಡವರ ಸಾಮಾಜಿಕ ಉಪಭಾಷಾ ಶಬ್ದ) 


ಅಕ್ಕೆಚ್ಚಲುಳ್ಳಲ್ಲೆ ಮುತ್ತೆಚ್ಚಲೇ ಕುಳ್ಳಲ್ಲೆ

ಮಕ್ಕಾಳೆಚ್ಚಾಲೇ ಮನೆಯಲ್ಲೇ
ಮಕ್ಕಾಳೆಚ್ಚಾಲೇ ಮನಿಯಲ್ಲೇ ಸಂಕ್ರಬೆಳೆಯೇ
ನೀ ಹಿಚ್ಚ ನಮ್ಮಾ ಕಳನಲ್ಲೇ




ಇದು ಉತ್ತರ ಕನ್ನಡದ ಅಂಕೋಲೆಯ ನಾಡವರ ಜಾತಿಯ  ಸಾಮಾಜಿಕ ಉಪಭಾಷೆಯಲ್ಲಿರುವ ಒಂದು ಹಾಡು. ಬತ್ತ ಮಿರಿಯುವಾಗ ಇತ್ತೀಚಿನ ದಿನಗಳವರೆಗೂ ಈ ಹಾಡನ್ನು  ಹಾಡ ಬಲ್ಲ ಮಹಿಳೆಯರಿದ್ದರು ಈ ಹಾಡಿನಲ್ಲಿ . ಗಮನಿಸ ಬಹುದಾದ ಅಕ್ಕಿ -ಉಳ್ಳು ಮುತ್ತು -ಕುಳ್ಳು . ಮನೆ-ಮಕಳು ಈ ಶಬ್ದಗಳ ಜೊತೆ ಕಳ-` ಸಂಕ್ರ ಬೆಳೆ.ಎಂಬ ಶಬ್ದಗಳು ಗಮನ ಸೆಳೆಯುತ್ತದೆ.
 ಕಳ ಇದು ಬೆಳೆದ ಬೆಳೆಯನ್ನು ಸಂಗ್ರಹಿಸಿ ಹಸನು ಮಾಡುವ ಬಯಲು.ಅಥವಾ ಬೆಳೆ ಕೊಯ್ದಾದ ಬಳಿಕ ಬೆಳೆ ಹಸನು ಮಾಡುವ ಕೆಲಸಕ್ಕೆ ಉಪಯೋಗಿಸಲು ಬರುವ ಗದ್ದೆ.
   ಸಂಕ್ರಬೆಳೆ ಎಂಬುದಕ್ಕೆ ಸಂವಾದಿಯಾಗಿ ಶಂಕರಗಂಡ (ದ.ಕ) ಶಂಕರತೆನೆ (ಮಲೆನಾಡು) ಸಂಕ್ರದಾನ್ಯಾ, ಸಂಕ್ರಬೆಳೆ[ಉ.ಕನ್ನಡ] ಎಂಬ ಶಬ್ದಗಳು ದೊರೆಯುತ್ತವೆ. ಆದರೆ ಇದರ ಅರ್ಥ ದೊರೆಯುತ್ತಿಲ್ಲ. ಸಂಕ್ರ, ಸಂಕರ ಶಂಕರ ಈ ವಿಶೇಷಣ ಶಬ್ದದ ಅರ್ಥ ವೇನು? ಬತ್ತವೆಂದೆ? ಅಥವಾ ಇದು ಬತ್ತದ ಒಂದು ಜಾತಿಯ ಹೆಸರೆ?ನಾಡವರ ಮನೆ ಮಾತಿನ ಒಂದು ಸಂದರ್ಭದಲ್ಲಿ `ಸಂಕರ ತಿಳೆ ಎಂಬ ಶಬ್ದ ದೊರೆಯುತ್ತದೆ. ಇದು ಹೀಗಿದೆ
       `ಜರಾಬಂದೆ ಮಗಾ ಸುರ್ಗಹೋಗ್ಯಾ. ಬಾಯ್ರುಚೆ ಕಿಟ್ಟೋಗೆ ಸಂಕರ ತಿಳೀ  ಕಿಟ್ಟೂದಲಾ, ಇಲ್ಲಿ  ಸಂಕರ  ಎಂಬುದು ಬತ್ತದಅಕ್ಕಿ ಮತ್ತು ಅಕ್ಕಿಯ  ಎಂಬ ಅರ್ಥವನ್ನು ಸೂಚಿಸುತ್ತದೆ.  ಹೀಗೆ ಸಂಕ್ರ, ಸಂಕರ ಶಂಕರ  ಎಂಬುದಕ್ಕೆ ಸದ್ಯ `ಬತ್ತ ಎಂದು ಅಥರ್ೈಸಲಾಗಿದೆ. ಆದರೂ ಇನ್ನಷ್ಟು ಹುಡುಕಾಟ ಬೇಕು. ಈಮೊದಲೇ ತಿಳಿದವರಿಂದ ಮಾಹಿತಿ ದೊರೆಯಲೂ ಬಹುದು

ದ್ವಾರಪಾಲಕರು - Dwarapalakaru


ದ್ವಾರಪಾಲಕರು



 ಸುಮಾರು ಇಪ್ಪತ್ತೈದು ವರ್ಷ ಗಳ ಹಿಂದೆ ಹೊನ್ನಾವರ ತಾಲೂಕಿನ ಸಾಲಿಕೇರಿಯ ಹಾಲಕ್ಕಿ ಒಕ್ಕಲ ಮಹಿಳೆಯರ ಜನಪದ ಚಿತ್ರಕಲೆಯಾದ ಹಲಿ[ರಂಗೋಲಿ]ಯ ಸಂಗ್ರಹ ಕೈಗೊಂಡಿದ್ದೆ. ಆಗ ಇಲ್ಲಿಯ ಮಹಿಳೆಯರು ತಮ್ಮ ಗುಡಿಸಲಿನ  ಹಲಗೆಯ ಬಾಗಿಲ ಮೇಲೆ ರಚಿಸಿದ  ಈ ಹಲಿ ಚಿತ್ರ ವನ್ನು   ಕಂಡಿದ್ದೆ.ಆಗ ಶಾಲೆಯಲ್ಲಿ ಗಣಿತ ಚಿನ್ಹೆಗಳನ್ನು ಕಲಿತವಳಾದ ನನ್ನ ಕಣ್ಣಿನ ಮೇಲ್ನೋಟಕ್ಕೆ ಇದು ಗುಣಿಲೆ [ಕಾಟು] ಚಿನ್ಹೆಯಾಗಿ
ಕಂಡಿತ್ತು 

 ಇಂತಹ ಕಾಟು ಚಿನ್ಹೆ ಗಳು ಅನಿಷ್ಠಗಳು ಒಳ ಪ್ರವೇಶಿಸದಂತೆ ತಡೆಯುತ್ತವೆಯೆಂದು  ಸೇಡಿ ಬಳಸಿ ರಚಿಸುವ ಚಿತ್ರಗಳ ಅಧ್ಯಯನಕಾರರ ಅಭಿಪ್ರಾಯವಾಗಿದೆ.ಆದರೆ ಈ ಹಲಿ ಚಿತ್ರ ಬರೆದ ಈ ಮಹಿಳೆಯರಿಗೆ ಈ ಬಗ್ಗೆ ಮಾಹಿತಿಯಿದೆಯೆಂಬುದು ನನ್ನ ಗಮನಕ್ಕೆ ಬಂದಿಲ್ಲ.
ಈ ಚಿತ್ರವನ್ನು ಈ ವರ್ಷ   ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿಯ ಸೇಡಿ ಚಿತ್ರ ಗಳು  ಹೊನ್ನಾವರ ಸೇಡಿ ಶೈಲಿಯಲ್ಲಿ ರಚಿಸಲಾದ ಮನುಷ್ಯ ಆಕೃತಿಗಳೆಂಬುದು ವೇದ್ಯವಾಯಿತು. ಬಾಗಿಲ  ಕದದ ಮೇಲಿನ ಈ ಮನುಷ್ಯಾಕೃತಿಗಳು  ದ್ವಾರ ಪಾಲಕರು ಎಂಬುದು ಗಮನಕ್ಕೆ ಬಂದಾಗ ನನಗೆ ರೋಮಾಂಚನವಾಯಿತು. ಪುರಾಣ ಪುಣ್ಯಕತೆ ಶಿಲ್ಪಶಾಸ್ತ್ರ  ವಾಸ್ತುಶಾಸ್ತ್ರಗಳ ಪುಟಪುಟಗಳಲ್ಲಿ ಚಚರ್ಿತವಾದ ದ್ವಾರಪಾಲಕರ ಅಮೂಲ್ಯ  ಮೂಲ ಇಲ್ಲಿ ಈ ಗುಡಿಸಲುಗಳ  ಸಾಮಾನ್ಯ ಕದಗಳ ಮೇಲೆ. ವೈಭವ ಗೊಂಡಿತ್ತು

Holigarna arnottiana Anacardiaceae ಹೊಳೆಗೇರು - ಹೊಸ ಅನುಭವ

ಹೊಳೆಗೇರು - ಹೊಸ ಅನುಭವ 




















ಅವಳು 'ಇದು ನೇರಲೇ ಹಣ್ಣಿನಂತೆ ಇದೆ beautiful'
ಇನ್ನೊಬ್ಬಳು 'ಹೌದು ಇದು ನೇರಲೇ ಹಣ್ಣೇ ಸರಿ  I want this'
ಆತ 'ಕೊಯ್ದು ತರುತ್ತೇನೆ ನಿಲ್ಲಿ  wait'  ಎಂದ.
ಆತ ಕಚ್ಚಿದ'ಸಿಹಿಇದೆ' ಅಂದ
ಅವಳು ಕಸಿದುಕೊಂಡು ತಿಂದಳು.'ರುಚಿ ಬೇರೆ' ಅಂದಳು.
ಇನ್ನೊಬ್ಬಳುಎರಡು ಹಣ್ಣು ತಿಂದಳು.
ಆತ ನಾಲ್ಕು ಹಣ್ಣು ಮುಗಿಸಿದ. ಕೈಬಾಯಿ ಹಸ್ತ ತುಟಿಯಲ್ಲಿ ಸಣ್ಣ ಉರಿ.ಚರ್ಮ ಬಿಳಿಚಿಕೊಂಡಿದೆ ಯಾಕೆ ಹೀಗೆ?
ಅಂಕಲ್ ಈ ಹಣ್ಣು ತಿನ್ನ ಬಹುದೇ? ಇದು ನೇರಲೇ ಹಣ್ಣಲ್ಲವೇ? ಗುಡ್ಡದ ಕೆಲಸಗಾರನನ್ನು ಕೇಳಿದ
ಈ ಹಣ್ಣು ತಿಂದಿರಾ ?ಗುಡ್ದ ಬೆಟ್ಟದ ಜ್ಞಾನ ಬೇಡವೇ? ರಸ ತಾಗಿದರೆ ಸಾಕು ಚರ್ಮ ಬಾತು ಕೊಳ್ಳುತ್ತದೆ. ಗಿಡದ ಬುಡದಲ್ಲಿ ನಿಲ್ಲಬೇಡಿ. ಹೋಗಿ.'ಅಂದ
ಮೂವರೂ ಇಂಗುತಿಂದ ಮಂಗನಂತಾಗಿದ್ದರು.
`ಅಜ್ಜಿ ನಾವು ಈ ಹಣ್ಣು ತಿಂದೆವು ತುಟಿಬಾತಿದೆ, ಹಸ್ತ ನೋಡಿ ಹೀಗಾಗಿದೆ. '
ವೇಗವಾಗಿ ಬಂದು ವಸತಿಸ್ಥಾನ ಮುಟ್ಟದವನ ಮೊದಲ ದೂರು.
 ಓ ಇದಾ, ಇದು ಹೊಳೆಗೇರು.  .
 ಸಸ್ಯಶಾಸ್ತ್ರೀಯ ಹೆಸರಿಗೆ ಕನ್ನಡದ ನಂಟು. ಹೆಸರು  Holigarna arnottiana  Anacardiaceae 
``ಮೊದಲು ಹಾಲು  ಕುಡಿ'' ಎಂದೆ
 `ನನಗೂ' ಎಂದರು ಇನ್ನಿಬ್ಬರು
. ನೀವೂ ತಿಂದಿರಾ?' ಅಪರಾಧದ ಛಾಯೆ ಮುಖದಲ್ಲಿ.
`ಹೂಂ'
 ಪರ ಊರಿನ ಮಕ್ಕಳು. ಪಾಲಕರು ದೂರದಲ್ಲಿ. ತಿಂದ  ಹಣ್ಣಿನಿಂದ ಜೀವಕ್ಕೆ  ಅಪಾಯವಿಲ್ಲ ವೆಂಬುದನ್ನು ಖಾತ್ರಿ ಮಾಡಿಕೊಳ್ಳುವದು ನನ್ನ ಕರ್ತವ್ಯ ವಲ್ಲವೇ?
ತಜ್ಞ ಆಯುರ್ವೇದ ವೈದ್ಯ ಡಾ  ಪಿ ಸತ್ಯ ನಾರಾಯಣ ಭಟ್ಟರಿಗೆ, ಜನಜ್ಞಾನ ದಾಖಲೆ ನಿರತ ಪರಿಸರವಾದಿ ಶಿವಾನಂದ ಕಳವೆಯವರಿಗೆ . ಸ್ನೇಹಕುಂಜದ ತಜ್ಞ ವೈದ್ಯ ಡಾ.ಮಹೇಶ ಪಂಡಿತರಿಗೆ. ಫೋನಾಯಿಸಲಾಯಿತು. ಸಲಹೆಗಳು ಬಂದವು. ಹಾಲು ತುಪ್ಪ ದಿನಕ್ಕೆ ಮೂರು ಬಾರಿ ಕೊಡಿ ಎಂದರು ಡಾ ಭಟ್. ಮುರಗಲ ಪಾನಕ ಕೊಡಿ.ಭಯ ಬೇಡ ಎಂದರು ಡಾ. ಪಂಡಿತ್. ಮಂಗಗಳು ಈ ಹಣ್ಣು ತಿನ್ನುತ್ತವೆ. ಬಳಿಕ ಇದರ ಎಲೆಯಿಂದ ಮುಖ ಒರೆಸಿಕೊಳ್ಳುತ್ತವೆಯಂತೆ.ಕೆಲವರಿಗೆ ಇದು ತೀರ ಅರ್ಲರ್ಜಿ ಎಂದರುಶಿವಾನಂದ ಕಳವೆ
ಹಳ್ಳಿಯ ಕೆಲವರು  ನಮ್ಮೂರಿನಲ್ಲಿ ಈ ಹಣ್ಣು ತಿನ್ನುವದಿಲ್ಲ ಇದನ್ನು ಮುಟ್ಟುವದಿಲ್ಲ.  ಹೀಗಾಗಿ ಈ ಹಣ್ಣು ತಿಂದು ಜೀವ ಕಳೆದುಕೊಂಡವರ ಸುದ್ದಿಯಿಲ್ಲ. ಎಂದರು.
ಅಂತಜರ್ಾಲವನ್ನು ತೆರೆದರೆ ಈ ಮರವನ್ನು   ವಿಷಕಾರಿಗಿಡ ಮರಗಳ ಸಾಲಿನಲ್ಲಿ ಸೇರಿಸಿರುವದು ಕಂಡುಬಂತು.
           ಜಾನಪದ ಅಧ್ಯಯನಕ್ಕೆಂದು  ಹೊನ್ನಾವರದ  ಕೇಂದ್ರಕ್ಕೆ  ಬೆಂಗಳೂರಿನಿಂದ ಬಂದ ಇವರು ಇಲ್ಲಿಯ ಕಿರಿ ಕಾಡಿಗೆ ಇಳಿದು ಯಾರೂ ತಿನ್ನದ ಹೊಳೆಗೇರಿ ಹಣ್ಣು ತಿಂದರು.ಜೀರ್ಣಿಸಿಕೊಂಡರು..
ಹಣ್ಣುಗಳೂ ವಿಷಕಾರಿಯಾಗಿರುವದುಂಟೆ?ಆಶ್ಚರ್ಯ ಪಟ್ಟರು.ಅವ್ರಿಗೆ ಇದು ಹೊಸ ಅನುಭವ.
ಈ ಹಣ್ಣು ತಿಂದವರು ಆರೋಗ್ಯದಿಂದಿದ್ದಾರೆ.
ಚಿತ್ರದಲ್ಲಿ ನೋಡಿ



ಕನ್ನಡ ಶಬ್ದಮಣಿ ಕಣಜದ - ಕಡಾ ಕಣಾ ಗಡಾ ಅಡಾ


ಕನ್ನಡ ಶಬ್ದಮಣಿ ಕಣಜದ - ಕಡಾ ಕಣಾ ಗಡಾ ಅಡಾ




Monday 18 June, 2012

ರಂಗೋಲಿ- A Folk Art



Folk Art-Drawing-Rangoli-Artist Padmavati

ಹಲಿ ಕಲಾವಿದೆ ಪದ್ಮಾವತಿ ಸೊಮಾ ಗೌಡಾ.

 ಅಂಕೋಲಾ ತಾಲೂಕಿನಲ್ಲಿ ರಂಗೋಲಿಯನ್ನು ಹಲಿ ಎನ್ನುತ್ತಾರೆ. ಇಲ್ಲಿಯೂ ಜಾತಿಗೊಂದು ಬಗೆಯ ಹಲಿಯನ್ನು ಕಾಣಬಹುದು. ಸಾಮಾನ್ಯವಾಗಿ ಹಾಲಕ್ಕಿಒಕ್ಕಲ ನೆಲೆಗಳ ಪ್ರತಿ  ಮನೆಮನೆಗಳಲ್ಲಿ ಹಲಿ ಬಲ್ಲವರಿರುತ್ತಾರೆ. ಯಾಕೆಂದರೆ ಮನೆಯನ್ನು ಅಂದರೆ ಮನೆಯ ನೆಲ ಅಂಗಳ ಮತ್ತು ತುಳಸಿಮನೆಯನ್ನು ಸೆಗಣಿಯಿದ ಸಾರಿಸಿದಾಗ ಆ ಸ್ಥಳದ ನಿರ್ದಿಷ್ಟ  ಜಾಗದಲ್ಲಿ ಚಿಕ್ಕದಾದರೂ ಪರವಾಗಿಲ್ಲ, ಹಲಿ ಇರಬೇಕು ಎಂಬ ಪರಂಪಾರಿಕ ವಿಧಿ ಇಲ್ಲಿಯೂ ಜಾರಿಯಲ್ಲಿದೆ. ಆದ್ದರಿಂದ ಪ್ರತಿಮನೆಯ ಗೃಹಿಣಿಯು ಇಂಥ ಸಂದರ್ಭಕ್ಕೆ ಅಗತ್ಯವಾದ ಒಂದೆರಡು ಹಲಿಯನ್ನಾದರೂ ರಚಿಸಲು ತಿಳಿದಿರುತ್ತಾಳೆ. ಆದರೆ ವಿಶೇಷ ಸಂದರ್ಭಗಳಲ್ಲಿ ರಚನೆಗೊಳ್ಳುವ ಹಲಿಯನ್ನು ಬಲ್ಲವರು. ವಿರಳವಾಗಿರುತ್ತಾರೆ. ಆದರೂ ಇಂಥ ಕಲಾವಿದರು ಒಂದು ಕೇರಿಯ ಪ್ರತಿ ತುಂಡಿನಲ್ಲಿ ಒಬ್ಬರಾದರೂ ಇರುವದು ಕಂಡುಬರುತ್ತದೆ. ಏಕೆಂದರೆ ಜೀವನಾವರ್ತನ ಮತ್ತು ವಾರ್ಷಿಕಾವರ್ತನಕ್ಕೆ ಸಂಬಂಧ ಪಟ್ಟ ಆಚರಣೆಗಳಲ್ಲಿ ಆಯಾ ಆಚರಣೆಗೆ ಸಂಬಂಧ ಪಟ್ಟ ಹಲಿಯ ಅನುಪಸ್ಥಿತಿಯುಂಟಾದರೆ ಆಚರಣೆ ಪರಿಪೂರ್ಣಗೊಳ್ಳುವದಿಲ್ಲವೆಂಬ ನಂಬಿಕೆಯಿದ್ದು  ಬಲ್ಲವರನ್ನು ಕರೆಸಿ ಆಯಾ ಸಂದರ್ಭದ ಹಲಿಯನ್ನು ನಿಗದಿತ ಸ್ಥಳದಲ್ಲಿ ಬರೆಸಿ ಕೊಳ್ಳುತ್ತಾರೆ. 
                       UÉÆqÉAiÀÄ ಹಲಿ




ಬಾಗಿಲ ಅಂಚು
                   
              


 
                                    
                                £É® ಗೋಡೆಯ avÀæ   

ಗೋಡೆಯ ಹಲಿ



 ಇಂತಹ ವಿಶೇಷ ಹಲಿಗಳನ್ನು ಬಲ್ಲವರ ಸಾಲಿನಲ್ಲಿ ನಿಲ್ಲಬಲ್ಲವರಲ್ಲಿ ಪದ್ಮಾವತಿ ಸೋಮಾಗೌಡ  ಒಬ್ಬರು. ಇವರು ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದವರು. ಇವರ ತಾಯಿ ತುಳಸಿಯು ಹಲಿ ಕಲಾವಿದೆಯಾಗಿದ್ದರು. 



  ಹರಳಾಟದ ಮಣೆ  



ಸುಮಾರು ಐವತ್ತೆಂಟು ವರ್ಷ ವಯಸ್ಸಿನ ಪದ್ಮಾವತಿ  ಬಾಲ್ಯದಿಂದಲೂ ಜನಪದ ಗೀತ ಕಥೆ  ಹಲಿಗಳಬಗ್ಗೆ ಆಸಕ್ತಿ ತಳೆದವರು. ಈ ಆಸಕ್ತಿಯ ಕಾರಣದಿಂದಾಗಿ ಇವರು ತಮ್ಮ ಬಾಲ್ಯದಲ್ಲಿ ತಮ್ಮ ಸರೀಕರ ಜೊತೆ ಇರದೆ ತಮಗೆ ದೊರೆತ ಬಿಡುವಿನ ಹೆಚ್ಚಿನ ವೇಳೆಯನ್ನು ತಮ್ಮ ಕೇರಿಯ ಈ ಮುದುಕಿಯರ ಬಳಿ ಕಳೆಯುತ್ತಿದ್ದರು. ಆ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ ಬಂದ  ಮತ್ತು ಆ ಮೂಲಕ ತಮ್ಮ ಮೇಲೆ ಪ್ರಭಾವ ಬೀರಿದ ಸುಮಾರು ಹತ್ತು ಜನ ಹಿರಿಯರನ್ನು ನೆನಪಿಸಿ ಕೊಳ್ಳುತ್ತಾರೆ. ಈಕಾರಣದಿಂದ ಇವರ ಕೇರಿಯ ಹಿರಿಯರ ಹಾಡು ಹಲಿ  ಇವರ ಪಾಲಾದವು. ಆಚರಣೆಗಳ ಪ್ರತ್ಯಕ್ಷ ಜ್ಞಾನ ಇವರಿಗೆ ದೊರೆಯಿತು. ಆದ್ದರಿಂದ ಇವರ ಹಲಿಗೆ  ಆಚರಣೆ ಮತ್ತು ಹಾಡಿನ ಮೆರಗು ಕೂಡಿಕೊಂಡಿತು. ಇವರು ಪ್ರತಿ ಹಲಿಗೆ ಸಂಬಂಧಿಸಿದಂತೆ  ಹಲವಾರು ಹಾಡುಗಳನ್ನು ಕಥೆ ಪುರಾಣ ಐತಿಹ್ಯಗಳನ್ನು  ಜೋಡಿಸಿಕೊಳ್ಳಬಲ್ಲರು.
  
    ಉತ್ತರ ಕನ್ನಡ ಜಿಲ್ಲೆಯ  ಹಾಲಕ್ಕಿ ಒಕ್ಕಲ ಗಂಡಸರ ಸುಗ್ಗಿ ನೃತ್ಯಕಲೆ ಕರಾವಳಿಯಲ್ಲಿ ಪ್ರಸಿದ್ಧವಾದದ್ದು.ಈ ಕುಣಿತದಲ್ಲಿ ಹಾಲಕ್ಕಿ ಒಕ್ಕಲ ಮಹಿಳೆಯರು ಪಾಲ್ಗೊಳ್ಳುವದಿಲ್ಲವಾದರೂ ಸುಗ್ಗಿ ಆಚರಣೆಯ ಸುಮಾರು ಹದಿನೈದು ದಿನ ಹಲಿ ಬರೆಯುವ ಆಚಣರಣೆಗೆ ಸುಗ್ಗಿಕಾಲ ಬರುತ್ತದೆ. ಸುಗ್ಗಿ ಕುಣಿತದವರು ಪಾಲ್ಗೊಳ್ಳುವ ಅಂಗಳದಲ್ಲಿ ಸುಗ್ಗಿಯ ಸಲಕರಣೆಗಳು ಮತ್ತು ಸುಗ್ಗಿಯ ಸಂಪ್ರದಾಯಗಳು  ಹಾಲಕ್ಕಿ ಒಕ್ಕಲ ಮಹಿಳೆಯರ ಹಲಿಯ ರೂಪವನ್ನು ತಳೆಯುತ್ತವೆ.

ಕೋಲಾಡುತ್ತಿರುವ ಕಲಾವಿದರು


     ಹಲಿ ಹೊಯ್ಯುತ್ತಲೇ ಪದ್ಮಾವತಿ ಕೋಲು ತರುವ ಸಂಪ್ರದಾಯವನ್ನು ಹಾಲಕ್ಕಿ ಒಕ್ಕಲಿಗೆ ಕೋಲು ದೊರೆತ ಬಗೆಯನ್ನು  ಹಾಡುಗಳ ಮೂಲಕ ವಿವರಿಸುತ್ತಾರೆ. ಸುಗ್ಗಿಯ ಕೋಲುಗಳು  ದೇವತೆಗಳ ಮೂಲಕ ದೊರೆತವು ಎಂಬುದು ಈ ಹಲಿ ಕಲಾವಿದೆಯ ಅಭಿಪ್ರಾಯವಾಗಿದೆ.  ಸುಗ್ಗಿಯ ಕೋಲುಗಳನ್ನು ಸಿದ್ಧ ಪಡಿಸಲು ಸಿಕ್ಕ ಸಿಕ್ಕ ಮರಗಳನ್ನು ಬಳಸಕೂಡದು .ಯಾಕೆಂದರೆ ಎಲ್ಲ ಮರಗಳ ಕೋಲುಗಳು ಉತ್ತಮ ದನಿಯನ್ನು ಹೊರಡಿಸಲಾರವು. ಸುಗ್ಗಿ ಕೋಲುಗಳಿಗಾಗಿ ಸೆಣ್ಗೋಳಿ ಮರದ ಕೋಲುಗಳು ಉತ್ತಮ.  ಇವು ಉತ್ತಮ ಅವಾಜ [ದನಿ] ನೀಡ ಬಲ್ಲವು. ಸಣ್ಗೋಳಿ ಮರಗಳು ಬಿಲ್ಕಂಬಿ ಮರಗಳನ್ನು ಹೋಲುತ್ತವೆ 

    ಸುಗ್ಗಿಯ ಕೋಲುಗಳನ್ನು ಇಲ್ಲಿಯ ಹಾಲಕ್ಕಿ ಒಕ್ಕಲು ತಮ್ಮ ಮೂಲ ನೆಲೆಯಾದ ಮಚ್ಚೋಳಿಯಿಂದ ತರುತ್ತಾರೆ .ಅಲ್ಲಿ ತಮ್ಮ ಮೂಲ ದೇವರಿದೆ, ಪ್ರತಿವರ್ಷ ಸಂಕ್ರಾಂತಿಯ ದಿನ ಆಯಾ ಊರಿನವರು ಅಲ್ಲಿಗೆ ಹೋಗಿ ಹಸಿ ಕೋಲುಗಳನ್ನು ಸಿದ್ದ ಪಡಿಸಿ ಕೊಳ್ಳುತ್ತಾರೆ.ಅಲ್ಲಿಯ ದೇವರ ಬಳಿ ಕೋಲುಗಳನ್ನಿಟ್ಟು ಹೇಳಿಕೆ ಮಾಡಿ ಪ್ರಸಾದ ಪಡೆಯುತ್ತಾರೆ. ಅಲ್ಲಿಂದ ತಂದ ಕೋಲುಗಳನ್ನು ಭಾವಿಕೇರಿಯ ಗಯ್ಡ[ ಗರಡಿ ]ಮಾಸ್ತಿಯ ಬಳಿಯಿಟ್ಟು ಅಲ್ಲಿಯ ಬಾವಿಯ ನೀರನ್ನು ಸಿಂಪಡಿಸಿ ತಮ್ಮ ಕೇರಿಯ ಲ್ಲಿರುವ ಬಟ್ಟೆ ಬೀರ ದೇವರ ಬಳಿ ಇಡುತ್ತಾರೆ.ಅಲ್ಲಿ ಕೋಲಾಡಿದ ಬಳಿಕ ಕೋಲಾಟದ ತಾಲೀಮು ನಡೆಸುವವರಿಗೆ ಅನುಮತಿ ಯಿರುತ್ತದೆ.
                                                                 
    ಕೋಲಾಟದ ಹಲಿಯಲ್ಲಿ ಕೋಲಾಡುತ್ತಿರುವ ಮನುಷ್ಯರಿಬ್ಬರನ್ನು ಕಾಣಬಹುದು. ಇಲ್ಲಿಯ ಹಲಿಯಲ್ಲಿಯ ಮನುಷ್ಯರು ಎತ್ತರವಲ್ಲ  ಕುಳ್ಳರು. ಹೊನ್ನಾವರದ ಸುಗ್ಗಿ ಹಲಿಯಲ್ಲಿಯ ಮನುಷ್ಯರು ಎತ್ತರ ನಿಲುವಿನವರು.  ಹಾಗೆಂದು ವಾಸ್ತವ ಪ್ರಪಂಚದಲ್ಲಿ ಅಂಕೋಲೆಯ ಸುಗ್ಗಿ ಕಲಾವಿದರು ಕುಳ್ಳರು ಮತ್ತು ಹೊನ್ನಾವರದ ಸುಗ್ಗಿ ಕಲಾವಿದರು ಎತ್ತರ ನಿಲುವಿನವರೆಂದು ಅರ್ಥೈಸಬೇಕಾಗಿಲ್ಲ. ಅಂಕೋಲೆಯ ಸುಗ್ಗಿ ಕಲಾವಿದರು ಹೊನ್ನಾವರದ ಸುಗ್ಗಿ ಕಲಾವಿದರಿಗಿಂತ ಹೆಚ್ಚು ಎತ್ತರ ನಿಲುವಿನವರಾಗಿರುತ್ತಾರೆ. ಆದರೆ ಹಲಿಯಲ್ಲಿ  ನಿಲುವಿನ ವ್ಯತ್ಯಾಸ ಕಂಡುಬರುತ್ತದೆ, ಇದು ಹಲಿ ಪ್ರಪಂಚ . -ಕಲಾಪ್ರಪಂಚ.

 ಇದು ಗುಮಟೆ ಕಲಾವಿದನ  ಹಲಿ ಚಿತ್ರ

   ಈ ಹಲಿಯಲ್ಲಿ ಗುಮಟೆ ಬಾರಿಸುತ್ತಿರುವ ಕಲಾವಿದರ ಕೈಗಳನ್ನು ಗುಮಟೆಗೆ ಕಟ್ಟಿದ ದಾರವನ್ನು ಸ್ಪಷ್ಟವಾಗಿ ಕಾಣಬಹುದು.ಅವರ ತಲೆಯ ಭಾಗವನ್ನು ಅಯ್ದು ಶಂಖ್ವಾಕೃತಿಯಗುಮ್ಮಟಗಳಮೂಲಕ ತೋರಿಸಲಾಗಿದೆ. ಇಲ್ಲಿಯೂ ಇವರ ದೇಹದ ಆಕಾರವು ಗಿಡ್ಡವಾಗಿದೆ.
ಚಿತ್ರ3  .

   ದೀಪವಿಡುವ ಸ್ಥಳ       
    ಹಾಲಕ್ಕಿ ಒಕ್ಕಲಿಗೆ ದೀಪಾವಳಿಯು ದೊಡ್ಡ ಹಬ್ಬ.ಈ ಹಬ್ಬದಲ್ಲಿ ಹಿಂಡ್ಲೆ ಕಾಯಿಯಿಂದ ಹಣತೆ ತಯಾರಿಸಿ ದೀಪ ಉರಿಸುತ್ತಾರೆ.  ಇಲ್ಲಿರುವ ಈ ಹಲಿಯು ನೆಲದಮೇಲೆ ದೀಪ ಗಳನ್ನಿಡುವ ದೀಪಸ್ಥಾನವಾಗಿದೆ.




 ¨ÁV®°è ºÀ°
ಇದು ಬಾಗಿಲ  ಮೆಟ್ಟಿಲ ಬಳಿಯ  ಹಲಿ - ಮೆಟ್ಟಿಲ ಕಟ್ಟೆಯನ್ನು ಇಲ್ಲಿ ಕಾಣಬಹುದು.




        



ಇವರು ಸುಮಾರು ನಾಲ್ಕು ವರ್ಷಗಳಿಂದ  ಹೊನ್ನಾವರ ಜಾನಪದ ಅಧ್ಯಯನ ಕೇಂದ್ರದಲ್ಲಿ ಸಂಪನ್ಮೂಲ ಕಲಾವಿದೆಯಾಗಿ ಆಗಮಿಸಿ ಇಲ್ಲಿಗೆ ಜಾನಪದ ಅಧ್ಯಯನಕ್ಕಾಗಿ ಬರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಲಿಯ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ.